ಇಂದಿನಿಂದ ಜ.1ರವರೆಗೆ ಬೃಹತ್‌ ಕೇಕ್‌ ಶೋ


Team Udayavani, Dec 14, 2018, 11:24 AM IST

indininda.jpg

ಬೆಂಗಳೂರು: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಯುಬಿ ಸಿಟಿ ಮುಂಭಾಗದ ಸೇಂಟ್‌ ಜೋಸೆಫ್ ಶಾಲೆಯ ಆವರಣದಲ್ಲಿ ಡಿ.14ರಿಂದ ಬೃಹತ್‌ ಕೇಕ್‌ ಶೋ ಆರಂಭವಾಗುತ್ತಿದೆ.

ಕಳೆದ 43 ವರ್ಷಗಳಿಂದ ಇಲ್ಲಿ ಕೇಕ್‌ ಶೋ ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಬಗೆ ಬಗೆಯ ವಿಶೇಷ ಕೇಕ್‌ಗಳು ಪ್ರದರ್ಶನದಲ್ಲಿವೆ. “ಕೆಂಪುಕೋಟೆ’ ಮಾದರಿಯಲ್ಲಿ ವಿನ್ಯಾಸ ಪಡಿಸಿರುವ 12 ಅಡಿ ಎತ್ತರ, 20 ಅಡಿ ಉದ್ದ, 8 ಅಡಿ ಅಗಲ, 1,600 ಕೆ.ಜಿ ತೂಕದ ಕೇಕ್‌, ಪ್ರದರ್ಶನದ ಆಕರ್ಷಣೆಯಾಗಿದೆ.

ಇದರ ಜತೆಗೆ 500 ಕೆ.ಜಿ ತೂಕದ ಹಿಮದ ಮೇಲಿನ ಪೆಂಗ್ವಿನ್‌ಗಳ ಕೇಕ್‌, 140 ಕೆ.ಜಿ ತೂಕದ ಕಾಲ್ಪನಿಕ ಕತೆಗಳ “ಜೀನಿ’ ಮಾದರಿ ಕೇಕ್‌, 65 ಕೆ.ಜಿ ತೂಕದ ಚೈನೀಸ್‌ ವಾಸ್ತು ಶಿಲ್ಪ ಪ್ರತಿನಿಧಿಸುವ ಪಗೋಡಾ ಮಾದರಿ ಕೇಕ್‌, 70 ಕೆ.ಜಿ ತೂಕದ ಮಕ್ಕಳ ಕತೆಯಲ್ಲಿ ಬರುವ ಯಕ್ಷಿಣಿ ಚಿಟ್ಟೆಗೊಂಬೆ ಕೇಕ್‌, ದರ್ಜಿಗಳಿಗೆ ಸಮರ್ಪಿಸಿರುವ 120 ಕೆ.ಜಿ ತೂಕದ ಹೊಲಿಗೆ ಯಂತ್ರ ಮಾದರಿ ಕೇಕ್‌ ಆಕರ್ಷಿಣೀಯವಾಗಿವೆ.

ಇನ್ನು ಕ್ರೈಸ್ತರ ಮದುವೆಯ ಪಿಯೋನಿ ಕೇಕ್‌, ಪ್ರಕೃತಿ ವಿಕೋಪದ ಬಗ್ಗೆ ಹೇಳುವ ಕೇಕ್‌, ಬಿಸ್ಕತ್‌ ಮೇಲೆ ಕುಂತಿರುವ ಚೇಳಿನ ಮಾದರಿ ಕೇಕ್‌, ಜೋಕರ್‌ ಮಾದರಿಯ ಕೇಕ್‌, ಕ್ರಿಸ್‌ಮಸ್‌ ಹಿಮದ ಮನುಷ್ಯ ಮಾದರಿ ಕೇಕ್‌, ಸಿನಿಮಾದಲ್ಲಿ ಬರುವ ಆದಿವಾಸಿ ಮಗಳಾದ ಮೋನ ಪಾತ್ರ ಮಾದರಿಯ ಕೇಕ್‌, ದೊಡ್ಡ ಚಾಕೊಲೇಟ್‌ ಮೊಟ್ಟೆ ಮಾದರಿಯ ಕೇಕ್‌,

ಯೂರೋಪಿಯನ್‌ ಜನಪದದಲ್ಲಿ ಬರುವ ಇಷ್ಟಾರ್ಥ ಸಿದ್ಧಿ ಬಾವಿ ಮಾದರಿ ಕೇಕ್‌, ಬುದ್ಧನ ಪ್ರತಿಕೃತಿ, ಬ್ರೆಜಿಲ್‌ನ ರಿಯೋ ಡಿ ಜನೇರೀಯೊದಲ್ಲಿರುವ ಕ್ರಿಸ್ತನ ಮೂರ್ತಿ ಮಾದರಿ ಕೇಕ್‌, ಕ್ರಿಸ್‌ಮಸ್‌ ಆಚರಿಸುತ್ತಿರುವ ಸಮುದಾಯ ಸೇರಿದಂತೆ ಹಲವು ಮಾದರಿ ಕೇಕ್‌ಗಳು ಶೋನಲ್ಲಿದ್ದು ಕೇಕ್‌ ಪ್ರಿಯರನ್ನು ಆಕರ್ಷಿಸಲಿವೆ.

ಕೇಕ್‌ ಪರಿಣಿತ ರಾಮಚಂದ್ರ ಅವರ ಮಾರ್ಗದರ್ಶನಲ್ಲಿ, ರಿಚ್‌ಮಂಡ್‌ ವೃತ್ತದ ಬಳಿಯ ಬೇಕಿಂಗ್‌ ಮತ್ತು ಕೇಕ್‌ ಆರ್ಟ್‌ ಸಂಸ್ಥೆಯ ಕಲಿಕಾರ್ಥಿಗಳನ್ನು ಒಳಗೊಂಡ 40 ಜನರ ತಂಡ ಈ ಎಲ್ಲಾ ಮಾದರಿಯ ಕೇಕ್‌ಗಳನ್ನು ಸಿದ್ಧಪಡಿಸಿದೆ. ಪ್ರಮುಖವಾಗಿ ಕೇಕ್‌ ವಿನ್ಯಾಸಕರಾದ ಅಮೃತಾ ಮತ್ತು ಪ್ರೀತಿ ಎಂಬುವವರು “ಪರಿಸರ ವಿಪತ್ತಿನ’ ಕುರಿತಾದ ಕೇಕ್‌ ವಿನ್ಯಾಸ ಪಡಿಸಿದ್ದಾರೆ.

ಈ ಎಲ್ಲಾ ಕೇಕ್‌ಗಳನ್ನು ಐಸಿಂಗ್‌ ಷುಗರ್‌, ಜಲಿಟಿನ್‌, ಅಕ್ಕಿ ಹಿಟ್ಟು ಹಾಗೂ ಮೊಟ್ಟೆಯ ಬಿಳಿ ಭಾಗ ಬಳಸಿ ಮಾಡಲಾಗಿದೆ. ಒಟ್ಟಾರೆ ಈ ಬಾರಿಯ ಕೇಕ್‌ ಪ್ರದರ್ಶನ “ಪ್ರಕೃತಿ, ಕ್ರಿಸ್ತ ಹಾಗೂ ಬುದ್ಧ’ನ ಕರುಣೆಯ ಕಲ್ಪನೆಯ ಸಮ್ಮಿಲನವಾಗಿದೆ ಎಂದು ಕೇಕ್‌ ಪರಿಣಿತ ಸಿ.ರಾಮಚಂದ್ರ ತಿಳಿಸಿದರು.

ಕೇಕ್‌ ಪ್ರದರ್ಶನದಲ್ಲಿ ಶಾಪಿಂಗ್‌ ಮಳಿಗೆಗಳು, ಆಹಾರ ಮೇಳ ಕೂಡ ಇರುತ್ತದೆ. ಅದಕ್ಕಾಗಿ ಫ‌ುಡ್‌ಕೋರ್ಟ್‌ ತೆರೆಯಲಾಗಿದೆ. ಕಳೆದ ಬಾರಿ ಪ್ರದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಈ ಬಾರಿ ಒಂದು ವಾರ ಮೊದಲೇ ಆಯೋಜಿಸಿರುವುದರಿಂದ ಒಂದೂವರೆ ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದರು.

ಈ ಬೃಹತ್‌ ಕೇಕ್‌ ಶೋ ಡಿ.14ರಿಂದ ಜ.1ರವರೆಗೆ ನಡೆಯಲಿದ್ದು, ಬೆಳಗ್ಗೆ 11ರಿಂದ ರಾತ್ರಿ 9 ಗಂಟೆವರೆಗೂ ಸಾರ್ವಜನಿಕರು ಭೇಟಿ ನೀಡಬಹುದು. ವಯಸ್ಕರರಿಗೆ 70 ರೂ. ಪ್ರವೇಶ ಶುಲ್ಕವಿದ್ದು, 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.