ಸಂಚಾರ ಪೇದೆ ಮೇಲೆ ಹಲ್ಲೆ: ಕಾರು ಚಾಲಕ ಸೆರೆ
Team Udayavani, Jan 10, 2019, 7:13 AM IST
ಕೆ.ಆರ್.ಪುರ: ಕರ್ತವ್ಯನಿರತ ಸಂಚಾರ ಪೊಲೀಸ್ ಪೇದೆ ಮೇಲೆ ಕಾರು ಚಾಲಕ ಹಲ್ಲೆ ನಡೆಸಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲೌರಿ ಜಂಕ್ಷನ್ ಬಳಿ ಬುಧವಾರ ನಡೆದಿದೆ.ಕೆ ಆರ್ ಪುರ ಸಂಚಾರ ಪೊಲೀಸ್ ಠಾಣೆಯ ಮುಖ್ಯ ಪೇದೆ ಪೂಜಪ್ಪ ಹಲ್ಲೆಗೊಳಗಾದವರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಾರು ಚಾಲಕ ರಾಕೇಶ್ ಎಂಬಾತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಬುಧವಾರ ಬೆಳಗ್ಗೆ 10.15ರ ಸುಮಾರಿಗೆ ಪೊಲೀಸ್ ಪೇದೆ ಪೂಜಪ್ಪ ಲೌರಿ ಜಂಕ್ಷನ್ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಹೆಚ್ಚಿನ ವಾಹನ ದಟ್ಟಣೆ ಇದ್ದ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದವು. ಈ ಸಂಧರ್ಭದಲ್ಲಿ ತನ್ನ ಕಾರಿಗೆ ಆಟೋಡಿಕ್ಕಿ ಹೊಡೆದಿದೆ ಎಂದು ರಾಕೇಶ್ ರಸ್ತೆ ಮಧ್ಯೆಯೆ ಕಾರನ್ನು ನಿಲ್ಲಿಸಿ ಆಟೋ ಚಾಲಕನೊಂದಿಗೆ ಜಗಳವಾಡಿದ್ದಾನೆ. ಇದನ್ನು ಗಮನಿಸಿದ ಪೂಜಪ್ಪ, ಎರಡೂ ವಾಹನಗಳನ್ನು ರಸ್ತೆಬದಿಗೆ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಇದರಿಂದ ಆಕ್ರೋಶ ಗೊಂಡ ರಾಕೇಶ್ ಆವಾಚ್ಯ ಪದಗಳಿಂದ ನಿಂದಿಸಿದ ಪರಿಣಾಮ ಇಬ್ಬರ ನಡುವೆ ಜಗಳ ಶುರುವಾಗಿದೆ. ಬಳಿಕ ರಾಕೇಶ್, ಪೂಜಪ್ಪನವರ ಮೇಲೆ ಹಲ್ಲೆ ನಡೆಸಿ ಬಲವಾಗಿ ತಳ್ಳಿದ ಪರಿಣಾಮ ಆಟೋ ಮೇಲೆ ಬಿದ್ದು ಅವರ ತಲೆಗೆ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ