ಬಾಲ ಯೇಸುವಿನ ಆರಾಧನೆಯಲಿ ಮಿಂದೆದ್ದ ಭಕ್ತರು


Team Udayavani, Jan 15, 2019, 6:39 AM IST

bala-yesu.jpg

ಬೆಂಗಳೂರು: ನಕ್ಷತ್ರಗಳ ಮಿಂಚು, ಬಲೂನ್‌ಗಳ ಚಿತ್ತಾರ, ಶುಭ ಸಂಕೇತದ ಗಂಟೆ ನಾದ, ವಿದ್ಯುತ್‌ ದೀಪಾಲಂಕಾರಗಳಿಂದ ವರ್ಣರಂಜಿತವಾಗಿ ಸಿಂಗಾರಗೊಂಡಿರುವ ಬಾಲ ಯೇಸುವಿನ ದೇವಾಲಯ. ಒಳಗಿನ ಸಭಾಂಗಣದಲ್ಲಿ ಧರ್ಮ ಗುರುಗಳಿಂದ ಬಲಿಪೂಜೆ, ಹೊರಭಾಗದ ಮೈದಾನದಲ್ಲಿ ಸಾವಿರಾರು ಭಕ್ತರಿಂದ ಶಾಂತಿ ಪ್ರಾರ್ಥನೆ – ಇದು ಸೋಮವಾರ ಸಂಜೆ ವಿವೇಕ ನಗರದ ಇನಾ#ಂಟ್‌ ಜೀಸಸ್‌ ಚರ್ಚ್‌ನ 48ನೇ ವಾರ್ಷಿಕೋತ್ಸವದಲ್ಲಿ ಕಂಡುಬಂದ ದೃಶ್ಯ.

ನಗರದ ಪುರಾತನ ಚರ್ಚ್‌ಗಳಲ್ಲಿ ಒಂದಾಗಿರುವ ವಿವೇಕ ನಗರದ ಇನ್ಫಾಂಟ್ ಜೀಸಸ್‌ ಚರ್ಚ್‌ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜ.5ರಿಂದ ಜ.14ರವರೆಗೆ ವಾರ್ಷಿಕೋತ್ಸವ ಸಮಾರಂಭ (ಬಾಲ ಯೇಸುವಿನ ಹಬ್ಬ) ಆಯೋಜಿಸಲಾಗಿತ್ತು. ಕೊನೆ ದಿನವಾದ ಸೋಮವಾರ ಸಂಜೆ 6 ಗಂಟೆಗೆ ಬಾಲ ಯೇಸುವಿನ ತೇರನ್ನು ಏಳೆಯುವ ಮೂಲಕ ಹಬ್ಬಕ್ಕೆ ತೆರೆ ಏಳೆಯಲಾಯಿತು.

ಹಬ್ಬದ ಹಿನ್ನೆಲೆ ಸುತ್ತಮುತ್ತಲ ಬಡಾವಣೆಗಳ  ಕ್ರೈಸ್ತ ಬಾಂಧವರು ಬಡವರಿಗೆ ಬಟ್ಟೆ, ಆಹಾರ ಇತ್ಯಾದಿ ದಾನ ಮಾಡಿ, ಸ್ನೇಹಿತರೊಂದಿಗೆ ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ತಮ್ಮ ಮನೆಗಳಲ್ಲಿ ಸಿಹಿ ತಿಂಡಿಗಳು, ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು ಮಿತ್ರರೊಂದಿಗೆ ಸವಿದು ಸಡಗರ ಸಂಭ್ರಮದಿಂದ ಬಾಲ ಏಸುವಿನ ಹಬ್ಬವನ್ನು ಆಚರಿಸಿದರು.

ಡಿ.4 ರಂದು ಬೆಂಗಳೂರು ಮಾಹಾಧರ್ಮಾಧ್ಯಕ್ಷ ಪೀಟರ್‌ ಮಚಾದೋ ಅವರು ಧ್ವಜಾರೋಹಣ ಮಾಡುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ್ದರು. ಆ ನಂತರ ನಿತ್ಯ ಚರ್ಚ್‌ನಲ್ಲಿ ವಿಶೇಷ ಪೂಜೆ, ಕನ್ನಡ, ತಮಿಳು, ಕೊಂಕಣಿ ಹಾಗೂ ಇಂಗ್ಲೀಷ್‌ನಲ್ಲಿ ಪ್ರಾರ್ಥನೆಗಳು ಜರುಗಿದವು. ವಿಶೇಷವಾಗಿ ಡಿ.5ರಂದು ವ್ಯಾದಿಷ್ಠರಿಗಾಗಿ ಬಲಿಪೂಜೆ, ಡಿ.6ರಂದು ಸಾಮೂಹಿಕ ವಿವಾಹ, ದಂಪತಿಗಳ ಬಲಿ ಪೂಜೆಗಳು ನಡೆಸಲಾಗಿತ್ತು ಎಂದು ಚರ್ಚ್‌ನ ಅಧಿಕಾರಿಗಳು ತಿಳಿಸಿದರು.

ಇನ್ನು ವಾರ್ಷಿಕೊತ್ಸವದ ಕೊನೆಯ ದಿನವೂ ಮುಂಜಾನೆ 5 ಗಂಟೆಯಿಂದಲೇ ಪ್ರಾರ್ಥನೆಗಳು ನಡೆದವು. ಸಂಜೆ 7 ಗಂಟೆಗೆ ಮಾಜಿ ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್‌ ಮೋರಸ್‌ ತೇರಿಗೆ ಆಶೀರ್ವಾದ ಮಾಡಿದರು. ಆನಂತರ ತೇರು ಎಲ್‌.ಆರ್‌.ನಗರ, ವಿವೇಕ ನಗರ, ಆನೇಪಾಳ್ಯ, ಈಜೀಪುರ, ನೀಲಸಂದ್ರ, ಹಲಸೂರಿನ ಸುತ್ತಮುತ್ತ ಸಾಗಿತು. ಅಪಾರ ಭಕ್ತರು ಭಾಗವಹಿಸಿದ್ದರು. ರಾತ್ರಿ 12 ಗಂಟೆಗೆ ತೇರು ಚರ್ಚ್‌ಗೆ ಹಿಂದಿರುಗಿತು.

ಕ್ರೈಸ್ತರು ಮೃದು ಸ್ವಭಾವ ಸರಳ ವ್ಯಕ್ತಿತ್ವದವರು – ಸಿಎಂ: ನಾನು ಚಿಕ್ಕವಯಸ್ಸಿನಿಂದ ಗಮನಿಸಿದಂತೆ ಕ್ರೈಸ್ತ ಸಮಯದಾಯವು ಅತ್ಯಂತ ಮೃದು ಸ್ವಾಭಾವದ, ಸರಳ ವ್ಯಕ್ತಿತ್ವದವರು. ಅಲ್ಲದೇ ಕ್ರೈಸ್ತರು ತಮ್ಮೊಡನೆ ಇತರೆ ಸಮುದಾಯವನ್ನು ಅತೀ ಹೆಚ್ಚು ಗೌರವಿಸುವ ಗುಣವನ್ನು ಹೊಂದಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ವಾರ್ಷಿಕೋತ್ಸವ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಬಾರಿ ಸಿಎಂ ಆಗಿದ್ದಾಗ ಜನತಾದರ್ಶನದಲ್ಲಿ ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಮಹತ್ವಾಕಾಂಕ್ಷೆಯುಳ್ಳ ವಿದ್ಯಾವಂತ 600 ವಿಕಲಚೇತನರಿಗೆ ಕೆಪಿಟಿಸಿಎಲ್‌ನಲ್ಲಿ ತಾತ್ಕಾಲಿಕ ಹುದ್ದೆಯನ್ನು ಕೊಡಿಸಿದ್ದೆ. ಆನಂತರ ದಿನಗಳಲ್ಲಿ ಹುದ್ದೆಯ ಖಾಯಂ ಮಾಡಿಕೊಡಲು ಸಾಕಷ್ಟು ಮನವಿ ಬಂದಿದ್ದವು ಎಂದು ಹೇಳಿದರು.

ಕುಮಾರಸ್ವಾಮಿ ಕೇವಲ ರೈತರ ಸಿಎಂ ಎನ್ನುವುದು ಬೇಡ. ಬೆಂಗಳೂರಿನಲ್ಲಿ 42 ಸಾವಿರ ಕೋಟಿ ರೂ ವೆಚ್ಚದಲ್ಲಿ ಫೆರಿಫೆರಲ್‌ ರಿಂಗ್‌ ರಸ್ತೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ ರಸ್ತೆ, 36 ಸಾವಿರ ಕೋಟಿ ರೂ. ವೆಚ್ಚದಲ್ಲಿ ಉಪನಗರ ರೈಲು ಯೋಜನೆಗೆ ಚಾಲನೆ ನೀಡಿ ನಗರ ವಾಸಿಗಳ ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುಲು ಮುಂದಾಗಿದ್ದೇವೆ.

ಇನ್ನು ಕ್ರೈಸ್ತರಿಗೆ ಸ್ಮಶಾನದ ಕೊರತೆ ಇದೆ ಎಂದು ಧರ್ಮಾಧ್ಯಕ್ಷರು ಗಮನಕ್ಕೆ ತಂದಿದ್ದು, ಅದನ್ನು ನಿವಾರಿಸಲು ನಿಟ್ಟಿನಲ್ಲಿ ಈಗಾಗಲೇ ಮೈತ್ರಿ ಸರ್ಕಾರ ಕ್ರಮಕೈಗೊಳ್ಳತ್ತಿದೆ ಎಂದರು. ಮಾಜಿ ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್‌ ಮೋರಸ್‌ ಮಾತನಾಡಿದರು.

ಈ ವೇಳೆ ಬೆಂಗಳೂರಿನ ಕ್ಯಾಥೋಲಿಕ್‌ ಚರ್ಚ್‌ಗಳಿಗೆ ಸಂಬಂಧಿಸಿದಂತೆ www.bangalorearchdiocese.org ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು. ಶಾಸಕ ಎನ್‌.ಎ.ಹ್ಯಾರಿಸ್‌, ಜಯನಗರ ಶಾಸಕಿ ಸೌಮ್ಯರೆಡ್ಡಿ, ಶಾಸಕಿ ವಿನೇಶಾ, ರೆವೆರಂಡ್‌ ಫಾದರ್‌ ಜಯನಾಥನ್‌, ಫಾದರ್‌ ಅಂಥೋನಿಸ್ವಾಮಿ, ಫಾದರ್‌ ಜೋಸೆಪ್‌ ಮಿನಾನ್ಸ್‌, ಸ್ಥಳೀಯ ಬಿಬಿಎಂಪಿ ಸದಸ್ಯ ಶಿವಕುಮಾರ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.