ನೆರವಾಗಲು ಹೋದಾಕೆಯನ್ನೇ ವಂಚಿಸಿದ ನಯವಂಚಕ


Team Udayavani, Jan 20, 2019, 6:37 AM IST

neravagalu.jpg

ಬೆಂಗಳೂರು: ಪರಿಚಿತನ ಮಾತು ನಂಬಿ 40 ಲಕ್ಷ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಪಂಜಾಬ್‌ಗ ಹೋಗಿ, ವಂಚನೆಗೊಳಗಾಗಿ ಕಂಗಾಲಾಗಿದ್ದ ನಗರದ ಮಹಿಳೆಯನ್ನು ಪತ್ತೆಹಚ್ಚಿ ಕರೆತರುವಲ್ಲಿ ಹೆಣ್ಣೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಜ.6ರಂದು ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪೋಷಕರು ದೂರು ನೀಡಿದ ಕೂಡಲೇ ಚ್ಚೆತ್ತ ಪೊಲೀಸರು ಆಕೆಯನ್ನು ಪಂಜಾಬ್‌ಗ ಯುವಕನೊಬ್ಬ ಕರೆದೊಯ್ದಿರುವುದನ್ನು ಪತ್ತೆಹಚ್ಚಿದ್ದರು. ಈ ಮಾಹಿತಿ ಅನ್ವಯ ಪಂಜಾಬ್‌ನ ಖನ್ನಾ ಗ್ರಾಮಕ್ಕೆ ತೆರಳಿದ ವಿಶೇಷ ತಂಡ, ಹಣ ಹಾಗೂ ಚಿನ್ನಾಭರಣವನ್ನು ಪರಿಚಿತ ವ್ಯಕ್ತಿಗಳಿಗೆ ನೀಡಿ ವಂಚನೆಗೊಳಗಾಗಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.

ಸದ್ಯ ಮಹಿಳೆಯನ್ನು ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಜತೆಗೆ, ಆಕೆನ್ನು ವಂಚಿಸಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಕಮಲ್‌ದೀಪ್‌ ಹಾಗೂ ಧರ್ಮವೀರ್‌ ಎಂಬುವವರ ಬಂಧನಕ್ಕೆ  ಹೆಣ್ಣೂರು ಪೊಲೀಸ್‌ ಠಾಣಾಧಿಕಾರಿ ಎಚ್‌.ಡಿ.ಕುಲಕರ್ಣಿ, ಪಿಎಸ್‌ಐ ಅಬ್ಟಾಸ್‌ ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಕುಟುಂಬದ ಜತೆ ಕುಲುಮನಾಲಿಗೆ ಪ್ರವಾಸ ತೆರಳಿದ್ದರು. ಈ ವೇಳೆ ಪ್ರವಾಸಿ ತಾಣಗಳಿಗೆ ಕರೆದೊಯ್ಯುತ್ತಿದ್ದ ಪಂಜಾಬ್‌ ಮೂಲದ ಕಾರು ಚಾಲಕ ಕಮಲ್‌ದೀಪ್‌ ಪರಿಚಯವಾಗಿದ್ದ. ಪ್ರವಾಸದ ವೇಳೆ ಕುಟುಂಬದವರಿಗೆ ಪರಿಚಯವಾಗಿದ್ದ ಕಮಲ್‌ದೀಪ್‌, ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ. ಪ್ರವಾಸ ಮುಗಿಸಿಕೊಂಡು ಬಂದ ಬಳಿಕವೂ ಆಗಾಗ ಕರೆ ಮಾಡುತ್ತಿದ್ದ ಆತ, ವಂಚನೆಗೆ ಸಂಚುರೂಪಿಸಿದ್ದ.

ತಾಯಿಗೆ ಮಾರಣಾಂತಿಕ ಕಾಯಿಲೆ ಎಂದ: ಮಾರಣಾಂತಿಕ ಕಾಯಿಲೆಯಿಂದ ತನ್ನ ತಾಯಿ ಬಳಲುತ್ತಿದ್ದು ಆಕೆಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಹೀಗಾಗಿ ಹಣಕಾಸಿನ ನೆರವು ನೀಡಿ. ನಂತರ ಹಣ ವಾಪಾಸ್‌ ಕೊಡುತ್ತೇನೆ ಎಂದು ಹೇಳಿ ಆರೋಪಿಯು ಮಹಿಳೆಯನ್ನು ನಂಬಿಸಿದ್ದ. ಈತನ ಮಾತು ನಂಬಿದ ಮಹಿಳೆ, ಜ.6ರಂದು 40 ಲಕ್ಷ ರೂ. ನಗದು 300 ಗ್ರಾಂ. ತೂಕದ ಚಿನ್ನಾಭರಣ ತೆಗೆದುಕೊಂಡು ಹೋಗಿ ಕಮಲ್‌ದೀಪ್‌ಗೆ ನೀಡಿದ್ದರು.

ಹಣ ಹಾಗೂ ಚಿನ್ನಾಭರಣ ಪಡೆದ ಆರೋಪಿ, ಮಹಿಳೆ ಇಲ್ಲಿಯೇ ಇದ್ದರೆ ಪೋಷಕರಿಗೆ ಮಾಹಿತಿ ನೀಡುತ್ತಾಳೆ. ಆಗ ತನಗೆ ಕಷ್ಟವಾಗುತ್ತದೆ ಎಂದು ತಿಳಿದು ಆಕೆಯನ್ನು ಪುಸಲಾಯಿಸಿ ಪಂಜಾಬ್‌ಗ ಕರೆದೊಯ್ದಿದ್ದ. ಈ ತನ ಎಲ್ಲ ಕೃತ್ಯಗಳಿಗೆ ಮತ್ತೂಬ್ಬ ಆರೋಪಿ ಧರ್ಮವೀರ್‌ ಸಹಕಾರ ನೀಡಿದ್ದ.

ಮಹಿಳೆಯನ್ನು ರೈಲು ಮೂಲಕ ಪಂಜಾಬ್‌ನ ಖನ್ನಾ ಗ್ರಾಮಕ್ಕೆ ಕರೆದೊಯ್ದ ಆರೋಪಿ, ಬೇರೊಬ್ಬರ ಮನೆಗೆ ಕರೆದೊಯ್ದು, “ನಾನು ಹಣ, ಚಿನ್ನವನ್ನು ಮನೆಯಲ್ಲಿಟ್ಟು ಬರುತ್ತೇನೆ. ದುವರೆಗೂ ಇಲ್ಲೇ ಇರು,’ ಎಂದು ತಿಳಿಸಿ ಹಣ ಹಾಗೂ ಚಿನ್ನಾಭರಣದೊಂದಿಗೆ ಹೋದವನು ಮತ್ತೆ ಬಂದಿಲ್ಲ. ಮೊಬೈಲ್‌ ಕೂಡ ಸ್ವಿಚ್‌ ಆಫ್ ಮಾಡಿಕೊಂಡಿದ್ದ. ಮೂರು ದಿನ ಕಳೆದರೂ ಆತ ವಾಪಾಸ್‌ ಬರದಿದ್ದರಿಂದ ಸಂತ್ರಸ್ತೆಗೆ ದಿಕ್ಕುತೋಚದಂತಾಗಿದೆ.

ಅಷ್ಟರಲ್ಲಿ ವಿಶೇಷ ತಂಡ ಖನ್ನಾ ಗ್ರಾಮಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿ ನಗರಕ್ಕೆ ಕರೆತಂದಿದೆ. ಬಳಿಕ ಮಹಿಳೆ ನೀಡಿರುವ ದೂರಿನ ಅನ್ವಯ ಕಮಲ್‌ದೀಪ್‌ ಹಾಗೂ ಧರ್ಮವೀರ್‌ ವಿರುದ್ಧ ವಂಚನೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು, ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಹಿಳೆಯನ್ನು ನಂಬಿಸಿ ಪಂಜಾಬ್‌ಗ ಕರೆದೊಯ್ದ ಆರೋಪಿಗಳಿಬ್ಬರು ಯಾವುದೇ ಮೊಬೈಲ್‌ ಕೂಡ ಬಳಕೆ ಮಾಡುತ್ತಿರಲಿಲ್ಲ. ಆತ ಬಳಸುತ್ತಿದ್ದ ಹಳೆಯ ಮೊಬೈಲ್‌ನಂಬರ್‌ನ ಜಾಡುಹಿಡಿದು ಶಂಕೆಯ ಮೇರೆಗೆ ತನಿಖೆ ಆರಂಭಿಸಿದಾಗ ಖಚಿತತೆ ಸಿಕ್ಕಿತ್ತು.  ಮಹಿಳೆಯನ್ನು ಪತ್ತೆಹಚ್ಚಲಾಯಿತು ಎಂದು ತನಿಖಾಧಿಕಾರಿ ತಿಳಿಸಿದರು. 

ವಂಚನೆ ಮಾಡುವ ಉದ್ದೇಶದಿಂದಲೇ ಆರೋಪಿಗಳು ಮಹಿಳೆಯನ್ನು ಕರೆದೊಯ್ದು ಚಿನ್ನಾಭರಣ ಹಾಗೂ ಹಣ ಪಡೆದುಕೊಂಡು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ವಿಶೇಷತಂಡ ಕಾರ್ಯನಿರ್ವಹಿಸುತ್ತಿದೆ.
-ರಾಹುಲ್‌ ಕುಮಾರ್‌ ಶಹಾಪುರ್‌ವಾಡ್‌, ಪೂರ್ವ ವಿಭಾಗದ ಡಿಸಿಪಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.