ಬಣ್ಣಗಳಲ್ಲಿ ಒಡಮೂಡಿದ ಹೆಣ್ಣಿನ ಅಂತರಂಗ


Team Udayavani, Jan 24, 2019, 6:36 AM IST

bannagallali.jpg

ಬೆಂಗಳೂರು: ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಹೆಣ್ಣಿನ ಆಂತರ್ಯದ ನೂರಾರು ಭಾವಗಳು ಬಣ್ಣ ತುಂಬಿಕೊಂಡು ಕುಳಿತಿವೆ.ಕಲಾವಿದೆ ಲತಾಕೃತಿ ಕುಂಚದಲ್ಲಿ ಅರಳಿದ ಕಲಾಕೃತಿಗಳಲ್ಲಿ ಹೆಣ್ಣೊಬ್ಬಳ ಅಂತರಂಗ ಮಾತನಾಡುತ್ತಿದೆ. ಸಂತೋಷ, ದುಃಖ, ಕಾತರ, ಕಳವಳ, ನಿರೀಕ್ಷೆ, ಹುಸಿಕೋಪ ಹೀಗೆ ಆಕೆ ಆಂತರ್ಯದಲ್ಲಿ ಹುದುಗಿರುವ ಭಾವಗಳನ್ನು ಕಲಾವಿದೆ ಬಣ್ಣಗಳಲ್ಲಿ ಸೆರೆ ಹಿಡಿದಿದ್ದಾರೆ. ಜ.27ರವರೆಗೂ ಪ್ರದರ್ಶನ ನಡೆಯಲಿದೆ.

ನವಿರಾದ ಪ್ರೇಮ ಭಾವವೂ ಇರುತ್ತದೆ. ಜತೆಗೆ ಒಂಟಿಯಾಗಿ ಬದುಕನ್ನು ಎದುರಿಸುವ ಛಲವೂ ಅವಳಲ್ಲಿರುತ್ತದೆ ಎಂಬುದನ್ನು ಸಾರುವ ಹಲವು ಚಿತ್ರಗಳು ಇಲ್ಲಿವೆ. ಪ್ರದರ್ಶನದಲ್ಲಿ ಎದುರಾಗುವ ಮೊದಲ ಚಿತ್ರವೇ ನೋಡುಗರ ಚಿತ್ತ ಸೆರೆ ಹಿಡಿಯಲಿದೆ. ಆಗಸದ ಬಿಳಿ ಮೋಡಗಳ ಕೆಳಗೆ ಹಸಿರು ಘಟ್ಟಗಳ ನಡುವೆ ಅರಳಿನಿಂತ ನೂರಾರು ಸುಮಗಳ ಚಿತ್ರ ಒಮ್ಮೆ ಸ್ವಿಜರ್ಲೆಂಡ್‌ ನೆನಪಿಸಲಿದೆ. ಕೆಂಪು, ಅರಿಶಿಣ, ತಿಳಿನೀಲಿ, ನೆರಳೆ ಬಣ್ಣದಲ್ಲಿ ಮೂಡಿದ ಸಣ್ಣ ಸಣ್ಣ ಪುಷ್ಪಗಳು ಇಡೀ ಚಿತ್ರದ ಆರ್ಕಷಣೆಯಾಗಿವೆ.

ಶಾಂತವಾಗಿರುವ ಕೊಳದ ನೀರಿನಂತೆ ಆಕೆಯ ಮನಸ್ಸು ಕೂಡ ಪ್ರಶಾಂತ ಸ್ಥಿತಿಯಲ್ಲಿದೆ. ಪ್ರಪಂಚದ ನೆಮ್ಮದಿ ಇವಳಲ್ಲಿಯೇ ಇದೆ ಎನ್ನುವಂತೆ ಕಾಣುವುದು ಕೆಂಪು ಹಸಿರು ರಂಗಿನಲ್ಲಿ ಮೂಡಿದ ಅವಳ ಮುಖ. ಯಾವುದೇ ದುಃಖ ದುಮ್ಮಾನವಿಲ್ಲದೆ ಎಲ್ಲ ಭಾವವನ್ನು ಬಿಟ್ಟ ಸನ್ಯಾಸಿನಿಯಂತೆ ತೋರುತ್ತದೆ ಆ ಚಿತ್ರ. ಇನ್ನೊಂದು ಚಿತ್ರದಲ್ಲಿ ಎಲ್ಲವನ್ನೂ ಎದುರಿಸಿ ಬದುಕನ್ನು ಗಟ್ಟಿಯಾಗಿ ಕಟ್ಟಿಕೊಂಡವಳ ಕಥೆ. ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಹೆಣ್ಣೊಬ್ಬಳು ಎಷ್ಟರ ಮಟ್ಟಿಗೆ ಪ್ರಬಲ ವ್ಯಕ್ತಿಯಾರಬಹುದು ಎಂದು ಸಾರುವ ಚಿತ್ರ ನೋಡುವ ನಮ್ಮಲ್ಲಿಯೂ ಗಟ್ಟಿತನ ಮೂಡಿಸುತ್ತದೆ.

ತಿಳಿನೀರ ಕೊಳದ ಮುಂದೆ ಅಪ್ಸರೆಯೇ ಕುಳಿತಂತೆ ಕಾಣುವ ಚಿತ್ರ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಬಿಳಿ ಬಣ್ಣದ ಉಡುಗೆ ತೊಟ್ಟು ಹಸಿರು ಬಣ್ಣದ ಸರ ಧರಿಸಿರುವ ಹೆಣ್ಣು, ಮರದಲ್ಲಿ ಮೈನಾ ಹಕ್ಕಿ ಕುಳಿತಿರುವಂತೆ ಮೂಡಿದ ಕಲಾಕೃತಿ ಒಮ್ಮೆಲೇ ನಮ್ಮಲ್ಲಿ ನೂರಾರು ಸಂತೋಷದ ಭಾವಗಳನ್ನು ಉಕ್ಕಿಸುತ್ತದೆ. ಈ ಚಿತ್ರದಲ್ಲಿ ಕಾಣುವ ವಿಶೇಷ ನೋಟಕ್ಕೆ ನೋಡುಗರು ಮಾರು ಹೋಗಲೇಬೇಕು.

ಶಾಂತ ಸ್ವರೂಪಿಣಿ, ಆನಂದಭೂಷಿಣಿ ಹಾಗೂ ಪ್ರಬಲ ಮಹಿಳೆಯನ್ನು ಕಂಡ ನಂತರ ಎದುರಿಗೆ ಕಾಣುವವಳು ಮದುಮಗಳು. ಮದುವೆ ಎಂಬ ಬದುಕಿನ ಬಹುಮುಖ್ಯ ನಿರ್ಧಾರದ ಹಂತದಲ್ಲಿ ಆಕೆಯಲ್ಲಾಗುವ ತಳಮಳವನ್ನು ಕಲಾವಿದೆ ಬಹು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಮುತ್ತಿನ ಹರಳುಗಳಲ್ಲಿ ಮಾಡಿದ ಬೈತಲೆ ಬೊಟ್ಟು ಧರಿಸಿ, ಕೆಂಪನೆಯ ಮಧುಬಾನಿ ಉಡುಗೆ ತೊಟ್ಟು, ಕೈಯಲ್ಲಿ ಅವನಿಗಾಗಿಯೇ ಅರಳಿನಿಂತ ಕುಸುಮಗಳನ್ನು ಹಿಡಿದ ಅವಳ ಅಂತರ್ಯದಲ್ಲಿ ಏನಿದೆ ಎಂಬುದೇ ಎದುರಿನ ವ್ಯಕ್ತಿಯಲ್ಲಿ ಪ್ರಶ್ನೆ ಹುಟ್ಟಿಸುವ ರೀತಿಯಲ್ಲಿ ಮೂಡಿದ ವಧುವಿನ ಕಲಾಕೃತಿ ಅಪೂರ್ವವಾಗಿದೆ.

ಪ್ರೇಮಿ, ಅಕ್ಕ, ತಂಗಿ, ಪಾಶ್ಚಿಮಾತ್ಯ ದೇಶದ ಕುವರಿ, ಭಾರತೀಯ ನಾರಿ, ಬೆಳಂದಿಗಳ ಬಾಲೆ, ಕೋಮಲೆ-ಸುಕೋಮಲೆ, ಮೃದಲೆ, ಶಾಂತೆ ಹೀಗೆ ಹೆಣ್ಣಿನ ಎಲ್ಲ ಭಾವಗಳು ಕೆಂಪು ವರ್ಣದಲ್ಲಿ ಅದ್ಭುತವಾಗಿ ಮೂಡಿ ಬಂದಿವೆ. ಈ ಕಲಾಕೃತಿಗಳ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯುವುದು ಹೆಣ್ಣು ಮಕ್ಕಳ ಹಣೆಯಲ್ಲಿರುವ ಕೆಂಪು ಬಣ್ಣದ ಕುಂಕುಮದ ಬೊಟ್ಟು. ಹೆಣ್ಣೊಬ್ಬಳ್ಳ ಅಂತರಂಗವನ್ನು ಕುಂಚದಲ್ಲಿ ಕಟ್ಟಿಕೊಡುವಲ್ಲಿ ಕಲಾವಿದೆ ಯಶಸ್ವಿಯಾಗಿದ್ದಾರೆ. ಲತಾಕೃತಿಯ ಅವರ ನಾಲ್ಕೈದು ವರ್ಷಗಳ ತಪ್ಪಸ್ಸು ಚಿತ್ರಗಳಲ್ಲಿ ಸಾರ್ಥಕತೆ ಪಡೆದಿವೆ.

ಕಲಾ ಪ್ರಪಂಚದಲ್ಲಿ ಪ್ರಯೋಗಶೀಲತೆ ಮತ್ತು ಸೃಜನಶೀಲತೆ ನಿರಂತರವಾಗಿದ್ದರೆ ಬೆಳೆಯಲು ಸಾಧ್ಯ. ಅದು ಲತಾಕೃತಿ ಅವರ ಕಲಾಕೃತಿಗಳಲ್ಲಿ ಕಾಣುತ್ತಿದೆ. ಇಲ್ಲಿರುವ ಚಿತ್ರಗಳಲ್ಲಿ ನೈಜತೆ ಹಾಗೂ ಸಮಲಾಲೀನ ಎರಡು ಮಾಧ್ಯಮಗಳು ಸರಿಯಾಗಿ ಬೆರೆತಿವೆ. ಇದು ಪ್ರದರ್ಶನದ ವಿಶೇಷ.
-ಜೆ.ಎಂ.ಎಸ್‌.ಮಣಿ, ಕಲಾವಿದ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.