“ಕಾಜಾಣ’ ಕಟ್ಟಡಕ್ಕಾಗಿ ಮುಸುಕಿನ ಗುದ್ದಾಟ
Team Udayavani, Feb 20, 2019, 6:28 AM IST
ಬೆಂಗಳೂರು: ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಕಾಜಾಣ ಕಟ್ಟಡಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ನಾಟಕ ಶಾಲೆ (ದಕ್ಷಿಣ ಭಾರತ)ಬೆಂಗಳೂರು ಕೇಂದ್ರದ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸೇರಿರುವ ಕಾಜಾಣ ಕಟ್ಟಡವನ್ನು ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಆಡಳಿತಾಧಿಕಾರಿಗಳು ಬಳಕೆ ಮಾಡಿಕೊಂಡಿದ್ದು, ಅದನ್ನು ಮರಳಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ್ದಾಗಿದೆ.
ಪ್ರಾಧಿಕಾರ ಪ್ರಸ್ತುತ ಸಾಲಿನ ಹೊಸ ಯೋಜನೆ “ಬೇಸಿಗೆ ಶಾಲೆ’ಗೆ ಮಾರ್ಚ್ನಲ್ಲಿ ಚಾಲನೆ ನೀಡಲು ತಯಾರಿ ನಡೆಸಿದ್ದು, ಜಾಗದ ಕೊರತೆ ಎದುರಾಗಿದೆ. ಬೇಸಿಗೆ ಶಾಲೆಯನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಭಾಷಾಂತರದ ಬಗ್ಗೆ ತಿಳಿಸಿಕೊಡುವ ಯೋಜನೆ ಇದಾಗಿದ್ದು ಶಿಬಿರಾರ್ಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಆಲೋಚನೆ ಹೊಂದಿದೆ.
ವಸತಿ ವ್ಯವಸ್ಥೆಯನ್ನು ಬೇರೆ ಕಡೆಗೆ ಕಲ್ಪಿಸುವುದರಿಂದ ಸಾಕಷ್ಟು ಹಣ ವ್ಯಯವಾಗಲಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ರಾಷ್ಟ್ರೀಯ ನಾಟಕ ಶಾಲೆ ಬಳಕೆ ಮಾಡಿಕೊಂಡಿರುವ ಕಾಜಾಣ ಕಟ್ಟಡವನ್ನು ಮರಳಿ ಕೊಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಾಧಿಕಾರ ಈಗಾಗಲೇ ಪತ್ರ ಮುಖೇನ ಮನವಿ ಮಾಡಿದೆ.
ಕಾಜಾಣ ಯಾರಿಗೆ ಸೇರಬೇಕು?: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಹಿಂದೆ ಪ್ರಾಧಿಕಾರಕ್ಕಾಗಿಯೇ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ “ಕಾಜಾಣ’ ಮತ್ತು “ವಿಶ್ವಚೇತನ’ಎಂಬ ಎರಡು ಕಟ್ಟಡಗಳನ್ನು ನಿರ್ಮಿಸಿತ್ತು. ವಿಶ್ವಚೇತನದಲ್ಲಿ ಪ್ರಾಧಿಕಾರದ ಅಧ್ಯಕ್ಷರ ಕಚೇರಿ ಮತ್ತು ರಿಜಿಸ್ಟ್ರಾರ್ ಕಡತ ಹಾಗೂ ದಾಖಲೆ ಇಡಲು ಅವಕಾಶ ಕಲ್ಪಿಸಲಾಗಿದೆ.
ಹಾಗೆಯೇ ಕಾಜಾಣ ಕಟ್ಟಡದಲ್ಲಿ ಭೋಜನ ಶಾಲೆ ಮತ್ತು ತರಬೇತಿ ಮತ್ತು ಶಿಬಿರಾರ್ಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ರಾಷ್ಟ್ರೀಯ ನಾಟಕ ಶಾಲೆಯ ದಕ್ಷಿಣ ಭಾರತದ ಕೇಂದ್ರ ಬೆಂಗಳೂರಿಗೆ ಘೋಷಣೆಯಾದ ವೇಳೆ ರಾಜ್ಯ ಸರ್ಕಾರ ಕಲಾಗ್ರಾಮದಲ್ಲಿಯೇ ಎನ್ಎಸ್ಡಿಗೆ ಎರಡೂವರೆ ಎಕರೆ ಜಮೀನು ಜತೆಗೆ ತಾತ್ಕಾಲಿಕ ಬಳಕೆಗಾಗಿ ಕಾಜಾಣ ಕಟ್ಟಡ ನೀಡಿತ್ತು.
ಒಂಟೆ, ಅರಸನ ಕಥೆಯಾಯ್ತು: ಪ್ರಾಧಿಕಾರದ ಪರಿಸ್ಥಿತಿ ಈಗ ಒಂಟೆ ಮತ್ತು ಅರಸನ ಕಥೆಯಂತಾಗಿದೆ. ಒಂಟೆಯ ಆಸರೆಗಾಗಿ ಅರಸ ಜಾಗ ನೀಡಿದರೆ ಮುಂದೆ ಆ ಜಾಗವನ್ನು ಒಂಟೆ ನನ್ನದು ಎಂದು ಹೇಳುತ್ತಿತ್ತು. ನಮ್ಮ ಪರಿಸ್ಥಿತಿ ಅದೇ ಆಗಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ. ನಾಟಕ ಶಾಲೆ ಈಗಾಗಲೇ ಕಲಾಗ್ರಾಮದ ಆವರಣದಲ್ಲಿ ತನ್ನದೇ ಆದ ಕಟ್ಟಡ ನಿರ್ಮಾಣ ಮಾಡಿದ್ದು ಅದನ್ನು ಬಳಕೆ ಮಾಡಿಕೊಂಡು ನಮ್ಮ ಕಟ್ಟಡವನ್ನು ನಮಗೆ ಬಿಟ್ಟುಕೊಡಲಿ ಎನ್ನುತ್ತಾರೆ.
ಯಾರನ್ನೂ ದೂರಲಾರೆ: ನಾನು ಈ ವಿಚಾರದಲ್ಲಿ ಯಾರನ್ನೂ ದೂಷಿಸುವುದಿಲ್ಲ. ಕಲಾಗ್ರಾಮದಲ್ಲಿ ಹಲವು ಕಟ್ಟಡಗಳು ಬಳಕೆಯಾಗದೇ ಹಾಗೆಯೇ ಇವೆ. ಅಂತಹ ಕಟ್ಟಡಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಬಳಕೆ ಮಾಡಿಕೊಳ್ಳಲು ನೀಡಿ, ನಮ್ಮ ಕಟ್ಟಡವನ್ನು ನಮಗೆ ಮರಳಿಸಲಿ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಳಸಿದ್ದಪ್ಪ ಒತ್ತಾಯಿಸಿದ್ದಾರೆ.
ಕಾಜಾಣ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸೇರಿದ್ದಾಗಿದೆ. ಎನ್ಎಸ್ಡಿ ಕೂಡ ಸ್ವಂತ ಕಟ್ಟಡ ನಿರ್ಮಾಣ ಮಾಡಿದ್ದು, ಮಾರ್ಚ್ನಲ್ಲಿ ಕಾಜಾಣ ಕಟ್ಟಡವನ್ನು ಪ್ರಾಧಿಕಾರಕ್ಕೆ ಮರಳಿ ನೀಡಲಾಗುವುದು.
-ಬಸವಲಿಂಗಯ್ಯ, ನಿರ್ದೇಶಕ ರಾಷ್ಟ್ರೀಯ ನಾಟಕ ಶಾಲೆ
ಘಟನೆ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಆದರೆ ಸದ್ಯದಲ್ಲೇ ಕಲಾಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದು.
-ಕೆ.ಎಂ.ಜಾನಕಿ, ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ