ನಾರಾಯಣ ನೇತ್ರಾಲಯಕ್ಕೆ ಐಎಸ್ಒ ಮಾನ್ಯತೆ
Team Udayavani, Mar 20, 2019, 6:35 AM IST
ಬೆಂಗಳೂರು: ನಗರದ ನಾರಾಯಣ ನೇತ್ರಾಲಯ ಕ್ವಾಲಿಟಿ ಆ್ಯಂಡ್ ಅಕ್ರೆಡಿಟೇಷನ್ ಇನ್ಸ್ಟಿಟ್ಯೂಟ್ನಿಂದ ನಾರಾಯಣ ನೇತ್ರಾಲಯ ಡಯಾಗ್ನೊಸ್ಟಿಕ್ ಲ್ಯಾಬೊರೇಟರಿ ಮತ್ತು ಮಾಲಿಕ್ಯುಲರ್ ಡಯಾಗ್ನೊಸ್ಟಿಕ್ ಲ್ಯಾಬೊರೇಟರಿ (ನಾರಾಯಣ ನೇತ್ರಾಲಯ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯುಲರ್ ಡಯಾಗ್ನೊಸ್ಟಿಕ್ಸ್ ಆ್ಯಂಡ್ ಲ್ಯಾಬೊರೇಟರಿ ಸರ್ವೀಸಸ್)ಗಳಿಗೆ ಐಎಸ್ಒ 15189: 2012 ಮಾನ್ಯತೆ ದೊರೆತಿದೆ.
ಈ ಮಾನ್ಯತೆ ಕುರಿತು ಸಂತೋಷ ವ್ಯಕ್ತಪಡಿಸಿ ಮಾತನಾಡಿದ ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಭುಜಂಗ ಶೆಟ್ಟಿ, ನಾರಾಯಣ ನೇತ್ರಾಲಯದ ಮಾಲಿಕ್ಯುಲರ್ ಡಯಾಗ್ನೊಸಿಸ್ ಲ್ಯಾಬ್ಸ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹಾಗೂ ಉನ್ನತ ತರಬೇತಿ ಪಡೆದ ತಜ್ಞರಿದ್ದಾರೆ. ಎಚ್1ಎನ್1 ಪರೀಕ್ಷೆ ಮಾಡುವ ಕೆಲವೇ ಲ್ಯಾಬ್ಗಳಲ್ಲಿ ಇದು ಒಂದಾಗಿದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುಮೋದನೆ ಪಡೆದಿದೆ.
ಐಎಸ್ಒ ಮಾನ್ಯತೆ ಪಡೆಯುವುದು ಗುಣಮಟ್ಟದ ಆರೋಗ್ಯ ಸೇವೆಯಲ್ಲಿ ನಮ್ಮ ದೃಢೀಕೃತ ಗುಣಮಟ್ಟಕ್ಕೆ ಮಾನ್ಯತೆಯಾಗಿದೆ. ನಾವು ಗುಣಮಟ್ಟದಲ್ಲಿ ಅತ್ಯುತ್ತಮ ಮಾನದಂಡಗಳನ್ನು ಕಾಪಾಡಿಕೊಳ್ಳುವುದನ್ನು ಮತ್ತು ಪೂರೈಸುವುದನ್ನು ಮುಂದುವರೆಸುತ್ತೇವೆ. ಐಎಸ್ಒ ಮಾನ್ಯತೆ ಪಡೆದ ಬೆಂಗಳೂರಿನ ಪ್ರಥಮ ಕಣ್ಣಿನ ಆಸ್ಪತ್ರೆ ನಮ್ಮದು ಎಂದರು.
ಬೆಂಗಳೂರು ನಗರದ ವಿಶ್ರಾಂತ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಕೆ.ಆರ್. ಠಾಗೂರ್, ಕ್ವಾಲಿಟಿ ಅಂಡ್ ಅಕ್ರೆಡಿಟೇಷನ್ ಇನ್ಸ್ಟಿಟ್ಯೂಟ್(ಕ್ಯೂಎಐ), ಭಾರತದ ಲೀಡ್ ಮ್ಯಾನ್ ಡಾ.ಭೂಪೇಂದ್ರ ಕುಮಾರ್ ರಾಣಾ, ಫೌಂಡೇಷನ್ ಫಾರ್ ಕ್ವಾಲಿಟಿ ಇಂಡಿಯಾ (ಎಫ್ಕ್ಯೂಐ) ಸಿಇಒ ಡಾ. ವೆಂಕಟೇಶ್ ತುಪ್ಪಿಲ್ ಅವರು ಡಾ. ಭುಜಂಗಶೆಟ್ಟಿ ಅವರಿಗೆ ಮಾನ್ಯತಾ ಪತ್ರ ಪ್ರದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ