ಸಾಕಾನೆ ಹಿಂಡು ನೋಡಿ ಬೆದರಿದ ಜನತೆ


Team Udayavani, Jun 7, 2018, 1:03 PM IST

bg-2.jpg

ಆನೇಕಲ್‌: ಬನ್ನೇರುಘಟ್ಟದ ಜೈವಿಕ ಉದ್ಯಾನವನದ 8 ಸಾಕಾನೆಗಳ ತಂಡ ಬಾಲಾಜಿ ಕಲ್ಯಾಣ ಮಂಟಪದ ಬಳಿಯ ಬಡಾವಣೆಯಲ್ಲಿ ಬಾರ್‌ ಮುಂದೆ ಪ್ರತ್ಯಕ್ಷವಾಗಿ ಅಕ್ಕ ಪಕ್ಕದಲ್ಲಿದ್ದ ಬಾಳೆ, ಒಣ ಹುಲ್ಲು ತಿಂದು ಅಪಾರ ನಷ್ಟ ಮಾಡಿವೆ.

 ಬನ್ನೇರುಘಟ್ಟ ಕಗ್ಗಲಿಪುರ ರಸ್ತೆಯಲ್ಲಿನ ಜನರು ವಾಕಿಂಗ್‌ ಮಾಡಲು ಬಾಲಾಜಿ ಕಲ್ಯಾಣ ಮಂಟಪದ ಬಡಾವಣೆಯ ರಸ್ತೆಯಲ್ಲಿ ಹೋಗುತ್ತಿದ್ದಂತೆ 8 ಆನೆಗಳ ತಂಡ ಕಂಡು ಕೆಲವರು ದಿಕ್ಕಾಪಾಲಗಿ ಓಡಿದ್ದರು. ಸುದ್ದಿ ತಿಳಿದು ಸ್ಥಳೀಯರು ಗುಂಪು ಸೇರಿ ಆನೆಗಳ ಕಾಲಿಗೆ ಕಬ್ಬಣದ ಸರಪಳಿ ಇರುವುದನ್ನು ಕಂಡು ಪಾರ್ಕಿನ ಆನೆಗಳು ಎಂದು ಸಮಾಧಾನ ದಿಂದ ಹತ್ತಿರ ಬಂದು ಮೊಬೈಲ್‌ಗ‌ಳಲ್ಲಿ ಪೋಟೋ ತೆಗೆದುಕೊಂಡರು ಇನ್ನು ಕೆಲವರು ಸಮೀಪಕ್ಕೆ ಹೋಗಿ ಸೆಲ್ಪಿ ತೆಗೆದು ಕೊಂಡು ಖುಷಿಪಟ್ಟರೆ, ಕೆಲವರು ಫೇಸ್‌ಬುಕ್‌ ಲೈವ್‌ ಸಹ ಬಿಟ್ಟು ಎಲ್ಲರೂ ನೋಡಲು ಅವಕಾಶ ಕಲ್ಪಿಸಿದರು. 

ಇನ್ನೊಂದಷ್ಟು ಮಂದಿ ಹೊಸದಾಗಿ ಬಾರ್‌ ಆಗಿದ್ದು ಅದನ್ನು ನೋಡಲು ಆನೆಗಳು ಬಂದಿವೆ ಎಂದು ತಮಗೆ ತೋಚಿದಂತೆ ಮಾತುಗಳನ್ನು ಆಡುತ್ತ ಹಾಸ್ಯ ಚಟಾಕಿ ಹಾರಿಸಿ ಕುಣಿದಾಡಿದರು. ಸುದ್ದಿ ಹರಡುತ್ತಿದ್ದಂತೆ ಜನ ಸೇರುತ್ತಿದ್ದಂತೆ ಆನೆಗಳು ಬೆಟ್ಟದ ದಾರಿ ಹಿಡಿದವು, ಪಾರ್ಕಿನ ಸಿಬ್ಬಂದಿಗೂ ಸುದ್ದಿ ತಿಳಿದು ಮಾವುತರ ತಂಡ ಬಂದು ಆನೆಗಳನ್ನು ಉದ್ಯಾನವನಕ್ಕೆ ಕರೆದು ಕೊಂಡು ಹೋದರು.

ಕುತೂಹಲ: ಉದ್ಯಾನವನದ ಆನೆಗಳು ಮನೆಗಳ ಹತ್ತಿರ ಬಂದಿದ್ದು ಇದೇ ಮೊದಲು, ಹತ್ತಾರು ವರ್ಷಗಳ ಹಿಂದೆ ಬಡಾವಣೆ ಇದ್ದ ಜಾಗದಲ್ಲಿ ಹೊಲ ತೋಟಗಳಿತ್ತು ಆಗ ಕಾಡಾನೆಗಳು, ಸಾಕಾನೆಗಳು ಬಂದು ಹೋಗುತ್ತಿದ್ದವು. ಆದರೆ
ಸದ್ಯ ಹೊಲ ತೋಟಗಳು ಮಾಯವಾಗಿ ಮನೆಗಳು ತಲೆ ಎತ್ತಿವೆ. ಅಂಗಡಿಗಳು, ಅಷ್ಟೇ ಅಲ್ಲದೆ ಬಾರ್‌ ಸಹ ಆರಂಭವಾಗಿದೆ ಇಂತಹ ಜಾಗದಲ್ಲಿ ಆನೆಗಳು ಬಂದಿದ್ದು , ಇಳಿಜಾರಿನ ಬೆಟ್ಟ ಇಳಿದು ಬಂದಿದ್ದು ಮಾತ್ರ ತೀವ್ರ ಕುತೂಹಲ ಕೆರಳಿಸಿತ್ತು. 

ರದ್ಧಾಂತ: ಉದ್ಯಾನವನದ ಆನೆಗಳು ಕಳೆದ ಮೂರು ನಾಲ್ಕು ದಿನಗಳ ಹಿಂದೆಯೂ ಬೆಟ್ಟದ ಮೇಲಿನ ಶ್ರೀಲಕ್ಷ್ಮೀನರಸಿಂಹ ದೇವಾಲಯದ ಮುಂಭಾಗದಲ್ಲಿ ಭಕ್ತರ ಅನುಕೂಲಕ್ಕೆ ವ್ಯವಸ್ಥೆ ಮಾಡಿದ್ದ ನೀರಿನ ಟ್ಯಾಂಕ್‌, ನಲ್ಲಿ, ಪೈಪ್‌ಗಳನ್ನು ಮುರಿದು ಹಾಕಿ ರದ್ದಾಂತ ಮಾಡಿದ್ದವು. ಆ ಘಟನೆ ಮರೆಯುವ ಮುನ್ನವೇ ಬೆಟ್ಟ ಇಳಿದು ಮನೆಗಳ ಬಳಿ ಬಂದು ಮತ್ತಷ್ಟು ಆತಂಕ ಸೃಷ್ಟಿಸಿವೆ. 

ಆಗ್ರಹ: ಉದ್ಯಾನವನದ ಸಾಕಾನೆಗಳು ದೇವಾಲಯದ ಪೈಪ್‌ ಗಳನ್ನು ಹಾಳುಮಾಡಿದೆ, ಗುರುವಾರ ಸಹ ಒಣಹುಲ್ಲಿನ ಮೆದೆ, ಬಾಳೆ ಗಿಡಗಳನ್ನು ತಿಂದು , ತುಳಿದು ಹಾಕಿದೆ. ಹೀಗೆ 8 ಆನೆಗಳು ಒಮ್ಮೆ ಬಂದರೆ ಎಷ್ಟು ಫ‌ಜೀತಿ ಮಾಡಿ ಹೋಗುತ್ತವೆ. ಪಾರ್ಕಿನ ಅಧಿಕಾರಿಗಳು ಆನೆಗಳನ್ನು ತಮ್ಮ ವ್ಯಾಪ್ತಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಪಾರ್ಕ್‌ ಮುಂದೆ ತೀವ್ರ ಪತ್ರಿಭಟನೆ ಮಾಡ ಬೇಕಾಗುತ್ತದೆ ಎಂದು ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಸಂಪಂಗಿರಾಮಯ್ಯ ಎಚ್ಚರಿಕೆ ನೀಡಿದರು.

ಆನೆ ಬಂದಿದ್ದು ಹೇಗೆ?: ಬನ್ನೇರುಘಟ್ಟ ಸುತ್ತ ಮುತ್ತಲ ಕೆಲ ಹಳ್ಳಿಗಳಲ್ಲಿ ಕಾಡಾನೆಗಳು ಬಂದು ಹೋಗುವುದು ಸಾಮಾನ್ಯ ಸಂಗತಿ ಆದರೆ ಸಾಕಾನೆಗಳು ಬಂದು ಫ‌ಜಿತಿ ಮಾಡುವುದು ಇದೇ ಮೊದಲು. ಸಹಜವಾಗಿ ಉದ್ಯಾನದಲ್ಲಿನ ಸಾಕಾನೆಗಳನ್ನು ರಾತ್ರಿ ವೇಳೆ ಕಾಡಿಗೆ ಬಿಡುವುದು ಮುಂಜಾನೆ ಆನೆ ಶಿಬಿರಕ್ಕೆ ತರೆದು ತರುವುದು ವಾಡಿಕೆ. ರಾತ್ರಿ ವೇಳೆ ಕಾಡಿನಲ್ಲಿ ಸುತ್ತಾಡುವ ಆನೆಗಳು ಹೀಗೆ ಒಂದೊಂದು ಸಾರಿ ಹಳ್ಳಿಗಳತ್ತ ಬಂದು ರದ್ಧಾಂತ ಸೃಷ್ಟಿಸುತ್ತವೆ.

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.