ತಮ್ಮನಿಂದ ಪತಿಯ ಮರ್ಯಾದೆ ಹತ್ಯೆ; ನೊಂದ ಪತ್ನಿ ಆತ್ಮಹತ್ಯೆ
Team Udayavani, Dec 6, 2018, 11:55 AM IST
ದೇವನಹಳ್ಳಿ: ಪತಿಯ ಮರ್ಯಾದೆ ಹತ್ಯೆ ಬಳಿಕ ತೀವ್ರವಾಗಿ ಮನನೊಂದಿದ್ದ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿದಲೂರು ಗ್ರಾಮದಲ್ಲಿ ನಡೆದಿದೆ.
6 ತಿಂಗಳ ಹಿಂದೆ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ 28 ರ ಹರೆಯದ ಮೀನಾ ಎಂಬಾಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವೆಂಬರ್ 21 ರಂದು ಪತಿ ಹರೀಶ್ನನ್ನು ಮೀನಾಳ ತಮ್ಮ ಬರ್ಬರವಾಗಿ ಹತ್ಯೆಗೈದಿದ್ದ.
ಹತ್ಯೆಗೀಡಾಗಿದ್ದ ಹರೀಶ್ ಮತ್ತು ಮೀನಾ ಸಹೋದರ ವಿನಯ್ ಇಬ್ಬರು ಸ್ನೇಹಿತರಾಗಿದ್ದರು. ವಿನಯ್ ಮನೆಗೆ ಹರೀಶ್ ಆಗಮಿಸಿದಾಗ ಮೀನಾ ಪರಿಚಯವಾಗಿ ಪ್ರೇಮಾಂಕುರವಾಗಿತ್ತು.
ವಿನಯ್ ಮತ್ತು ಮನೆಯವರ ತೀವ್ರ ವಿರೋಧದ ನಡುವೆಯೂ ಮೀನಾ ಮತ್ತು ಹರೀಶ್ ವಿವಾಹವಾಗಿದ್ದರು.
ನವೆಂಬರ್ 21 ರಂದು ಹರೀಶ್ನನ್ನು ಚೀಟಿ ಹಣ ನೀಡಲೆಂದು ಗುಲಾಬಿ ತೋಟಕ್ಕೆ ಕರೆದೊಯ್ದು ವಿನಯ್ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಪೊಲೀಸರಿಗೆ ಶರಣಾಗಿದ್ದ.
ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಮೀನಾ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ