ವಿಶ್ವದ ಅತೀ ದೊಡ್ಡ ವಯೋಲಿನ್ ವಾದಕ ಕುಟುಂಬ
Team Udayavani, Jun 15, 2017, 2:49 PM IST
ಮಂಗಳೂರು: ಈ ಎನ್ಆರ್ಐ ಕುಟುಂಬದ ಹನ್ನೊಂದು ಮಂದಿಯೂ ವಯೋಲಿನ್ ವಾದನದಲ್ಲಿ ಪಳಗಿದವರು. ಅಷ್ಟೇ ಅಲ್ಲ ಇದು ವಿಶ್ವದ ಅತೀ ದೊಡ್ಡ ವಯೋಲಿನ್ ವಾದಕ ಕುಟುಂಬವೂ ಹೌದು. ಅಷ್ಟಕ್ಕೂ ಇವರು ಮಂಗಳೂರು ಮೂಲದವರು ಎಂಬುದು ವಿಶೇಷ.
ಅಮೆರಿಕದ ಟೆಕ್ಸಾಸ್ನಲ್ಲಿ ನೆಲೆಸಿ ರುವ ಮೂಲತಃ ಮಂಗಳೂರಿನ ಕುಲಶೇಖರದವರಾದ ಹೃದ್ರೋಗ ತಜ್ಞ ಡಾ| ಜೆರಾರ್ಡ್ ಅಬ್ರಿಯೊ ಅವರ ಕುಟುಂಬ ವಯೋಲಿನ್ ವಾದನದಲ್ಲಿ ತೊಡಗಿಸಿಕೊಂಡವರು. ಜೆರಾಲ್ಡ್ ಅವರ ಪತ್ನಿ ನಿಕೋಲ್ ವಯೋಲಿನ್ ವಾದಕಿಯಾಗಿದ್ದರೆ, ಒಂಬತ್ತು ಮಕ್ಕಳು ಕೂಡ ವಯೋಲಿನ್ ವಾದನ ಕಲಿತು ನುಡಿಸುತ್ತಿದ್ದಾರೆ. ಮಂಗಳೂರಿನ ಸಿಟಿ ಸೆಂಟರ್ ಮಾಲ್ನ ಹಾಮ್ಸ್ ಮಾರ್ಟ್ ಮಳಿಗೆಯಲ್ಲಿ ಬುಧವಾರ ಈ ಮಕ್ಕಳು ವಯೋಲಿನ್ ನುಡಿಸಿದರು.
ಪಾಶ್ಚಾತ್ಯ ಶಾಸ್ತ್ರೀಯ ಶೈಲಿಗನುಗುಣ ವಾಗಿ ಮಕ್ಕಳು ವಯೋಲಿನ್ ತಂತಿಗಳ ಮೂಲಕ ಸಂಗೀತ ನುಡಿಸಿದರು. ಅಬ್ರಿಯೋ ಅವರ ಪ್ರಥಮ ಪುತ್ರ, 18ರ ಹರೆಯದ ಮೈಕಲ್, 17ರ ಹರೆಯದ ಡೇನಿಯಲ್, 15ರ ಹರೆಯದ ಕ್ರಿಸ್ತೀನಾ, 13ರ ಹರೆಯದ ಮರಿಯಾ, 11ರ ಹರೆಯದ ಜೇನ್, 9ರ ಹರೆಯದ ರಾಚೆಲ್, ಏಳರ ಹರೆಯದ ಜಾನ್, 5ರ ಹರೆಯದ ಲೂಕ್ ವಾಯ್ಲಿನ್ ಬಾರಿಸುತ್ತಾರೆ. ಇನ್ನು 3ರ ಹರೆಯದ ಜೋಸೆಫ್ ಕೂಡ ಇದೇ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಕಳೆದ ಮೂರು ತಿಂಗಳಿನಿಂದ ವಯೋಲಿನ್ ಕಲಿಕೆ ಆರಂಭಿಸಿದ್ದಾರೆ.
ತಾಯಿಯೇ ಸಂಗೀತ ಗುರು!
ಮಕ್ಕಳಿಗೆ ತಾಯಿ ನಿಕೋಲ್ ಅವರೇ ಸಂಗೀತ ಗುರು. ಮೂರು ವರ್ಷ ತುಂಬುತ್ತಲೇ ಮಕ್ಕಳಿಗೆ ನಿಕೋಲ್ ವಯೋಲಿನ್ ಬಾರಿಸುವ ತರಬೇತಿ ಆರಂಭಿಸಿದ್ದಾರೆ. ಏಳನೇ ತರಗತಿಯ ಬಳಿಕ ಸಂಗೀತ ತರಗತಿಯ ಮೂಲಕ ತರಬೇತಿ ಕೊಡಿಸಲಾಗುತ್ತದೆ. ಮಕ್ಕಳು ಪಿಯಾನೊ ಕೂಡ ಬಾರಿಸುತ್ತಾರೆ ಎನ್ನುತ್ತಾರೆ ಡಾ| ಜೆರಾರ್ಡ್. ನಿಕೋಲ್ ಅಬ್ರಿಯೋ ಅವರ ಸಂಬಂಧಿ ಫ್ರಾಕ್ ಲೋಬೋ ಅವರು ಕಳೆದ 60 ವರ್ಷಗಳಿಂದ ವಯೋಲಿನ್ವಾದಕರಾಗಿ ಖ್ಯಾತರಾಗಿದ್ದಾರೆ. ಆರಂಭದಲ್ಲಿ ಅವರಿಂದಲೇ ನಿಕೋಲ್ ವಯೋಲಿನ್ ವಾದನ ಕಲಿತಿದ್ದರಲ್ಲದೇ, ನಿಕೋಲ್ ಅವರ ತಂದೆ ಜೆರಾಲ್ಡ್ ಲೋಬೋ ಸಂಗೀತಗಾರರಾಗಿದ್ದರಿಂದ ಕಲಿಕೆ ಸುಲಭವಾಯಿತು ಎನ್ನುತ್ತಾರೆ.
ಇಂದು ಬಜ್ಜೋಡಿ ವೃದ್ಧಾಶ್ರಮದಲ್ಲಿ ಸಂಗೀತ
ಡಾ| ಜೆರಾರ್ಡ್ ಅವರ ಕುಟುಂಬಿಕರು ಮಂಗಳೂರಿನಲ್ಲೇ ನೆಲೆಸಿರುವು ದರಿಂದ ಎರಡು ವರ್ಷಗಳಿಗೊಮ್ಮೆ ಪತ್ನಿ ಹಾಗೂ ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸುತ್ತಾರೆ. ಹೀಗೆ ಬರುವಾಗ ನಗರದ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಭೇಟಿ ನೀಡಿ ಸಂಗೀತ ಕಛೇರಿ ಏರ್ಪಡಿಸುತ್ತಾರೆ.
ಡಾ| ಜೆರಾರ್ಡ್ ಅಬ್ರಿಯೊ ಅವರ ಮಕ್ಕಳಿಂದ ನಂತೂರು ಸಮೀಪದ ಬಜೊjàಡಿಯ ಲಿಟಲ್ ಸಿಸ್ಟರ್ಸ್ ಆಫ್ ದಿ ಪುವರ್- ವೃದ್ಧಾಶ್ರಮದಲ್ಲಿ ಜೂ. 15ರಂದು ಸಂಜೆ 3.30ಕ್ಕೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ