ಶತಾಯುಷಿ ಶಾಲೆಯ ಛಾವಣಿ ಶಿಥಿಲ
Team Udayavani, Oct 25, 2017, 4:26 PM IST
ಕಂಬಳಬೆಟ್ಟು: ವಿಟ್ಲಮುಟ್ನೂರು ಗ್ರಾಮದ ಕಂಬಳಬೆಟ್ಟು ಹಿ.ಪ್ರಾ. ಶಾಲೆಯು ಶತಮಾನೋತ್ಸವ ಆಚರಿಸುವ ಸಿದ್ಧತೆಯಲ್ಲಿದೆ. ಆದರೆ ಶಾಲೆಯ ಒಂದು ಕಟ್ಟಡದ ಛಾವಣಿ ಅಪಾಯಕಾರಿ ಸ್ಥಿತಿಯಲ್ಲಿದೆ. ಮಕ್ಕಳು, ಶಿಕ್ಷಕರು ಇದರೊಳಗೆ ಇರುವುದೇ ಅಪಾಯ ಎಂದು ಹೆತ್ತವರು ಭಯ ವ್ಯಕ್ತಪಡಿಸಿದ್ದಾರೆ.
ಛಾವಣಿಯ ಒಂದು ಮರದ ಪಕ್ಕಾಸು ಕೆಳಗೆ ಬಿದ್ದಿದೆ. ಇನ್ನೂ ಒಂದು ಬೀಳುವ ಹಂತದಲ್ಲಿದೆ. ಛಾವಣಿ ಪೂರ್ತಿಯಾಗಿ ಬೀಳುವ ಸಾಧ್ಯತೆಯಿದ್ದು, ಸದ್ಯ ಅಲ್ಲಿನ ತರಗತಿಯನ್ನು ಅದೇ ಕಟ್ಟಡದ ಮತ್ತೂಂದು ಭಾಗಕ್ಕೆ ವರ್ಗಾಯಿಸಲಾಗಿದೆ.
ಶಾಲೆಯ ಪ್ರವೇಶ ದ್ವಾರದ ಎಡ ಭಾಗದಲ್ಲಿರುವ ಕಟ್ಟಡ, ಛಾವಣಿ ಶಿಥಿಲಗೊಂಡಿದೆ. ಈ ಕಟ್ಟಡಕ್ಕೆ ಸುಮಾರು 40-50
ವರ್ಷಗಳಾಗಿರಬಹುದು. ಛಾವಣಿ ಮೇಲ್ಭಾಗದಲ್ಲಿ ಉಂಟಾಗಿರುವ ಏರುತಗ್ಗು ಗಳು ಅಪಾಯವನ್ನು ಸೂಚಿಸುತ್ತವೆ. ಪಕ್ಕಾಸುಗಳು ಶಿಥಿಲಗೊಂಡಿವೆ. ಗೋಡೆಯೂ ಸುಭದ್ರವಾಗಿಲ್ಲ. ಆದ್ದರಿಂದ ಅಪಾಯವನ್ನು ಅರಿತು, ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಹೆತ್ತವರು ಮತ್ತು ಪೋಷಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ