ಬಂಟ್ವಾಳ: ಮಧ್ಯರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ
Team Udayavani, Aug 21, 2018, 1:38 PM IST
ಬಂಟ್ವಾಳ: ಮನೆಮಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣಗಳನ್ನು ದರೋಡೆ ಮಾಡಿದ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಅಮ್ಟಾಡಿ ಲೋರಟ್ಟೋ ಎಂಬಲ್ಲಿ ನಡೆದಿದೆ.
ಅಮ್ಟಾಡಿ ಗ್ರಾಮದ ಲೊರೆಟ್ಟೋ ನಿವಾಸಿ ಜೇಕಬ್ ರೋಡ್ರಿಗಸ್ ಎಂಬವರ ಮನೆಗೆ ಮಧ್ಯೆ ರಾತ್ರಿಯ ವೇಳೆ ನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ.
ರಾತ್ರಿ ಸುಮಾರು ಒಂದುವರೆ ಘಂಟೆಯ ವೇಳೆ ಜೇಕಬ್ ಅವರ ಮನೆಯ ಹಿಂಬದಿಯ ಮನೆಯ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಐದು ಜನ ಮುಸುಕುಧಾರಿಗಳು ಮನೆಯಲ್ಲಿದ್ದ ಜೇಕಬ್ ಮತ್ತು ಅವರ ಮಗಳು ಅಲ್ಮೀರಾ ಅವರ ಕೈಕಾಲುಗಳನ್ನು ಕಟ್ಟಿಹಾಕಿದ್ದರು. ನಂತರ ಜೇಕಬ್ ಅವರ ಪತ್ನಿ ಗ್ರೇಟ ಅವರಲ್ಲಿ ಬಂಗಾರ ತೋರಿಸಿವಂತೆ ಹೆದರಿಸಿ ಕಪಾಟಿನಲ್ಲಿದ್ದ ಬಂಗಾರಗಳನ್ನು ದೋಚಿದ್ದಾರೆ.
ಕಪಾಟಿನಲ್ಲಿದ್ದ ಸುಮಾರು 30 ಗ್ರಾಂನ ಮಂಗಳಸೂತ್ರ, ನಾಲ್ಕು ಉಂಗುರ, ವಾಚು ಹಾಗೂ ಒಪೋ ಮೋಬೈಲನ್ನು ದೋಚಿದ ಘಟನೆ ನಡೆದಿದೆ.
ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸ್ ಠಾಣೆ ಎಡಿಶನಲ್ ಎಸ್ಪಿ ವಿ.ಜೆ.ಸಜಿತ್, ಎ.ಎಸ್. ಪಿ.ಹ್ರಷಿಕೇಶ್ ಸೋನಾವಣೆ, ವೃತ ನಿರೀಕ್ಷಕ ಟಿ.ಡಿ.ನಾಗರಾಜ್, ಎಸ್.ಐ.ಗಳಾದ ಚಂದ್ರಶೇಖರ್, ಹರೀಶ್, ಪ್ರೋಬೆಸನರಿ ಪಿ.ಎಸ್.ಐ.ಸೌಮ್ಯ, ಎ.ಎಸ್.ಐ.ಸಂಜೀವ, ಹೆಚ್.ಸಿ.ಸುರೇಶ್ ಪಡಾರ್, ಸಿಬ್ಬಂದಿಗಳಾದ ಮಲಿಕ್ ಸಾಬ್, ಕುಮಾರ್, ವಿವೇಕ್, ಸುಜು, ಗೋಣಿಬಸಪ್ಪ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ