ಅನೈತಿಕ ಸಂಬಂಧ ಬಿಡು ಎಂದ ಅಪ್ಪನಿಗೇ ಸುಪಾರಿ ಕೊಟ್ಟ ಮಗಳು!
Team Udayavani, Jul 21, 2017, 11:07 AM IST
ಬೆಳಗಾವಿ : ಅನೈತಿಕ ಸಂಬಂಧ ಎನ್ನುವುದು ತಂದೆ, ತಾಯಿ , ಮಗ, ಮಗಳು, ಪತಿ, ಪತ್ನಿ, ಸ್ನೇಹಿತ ಯಾರನ್ನೂ ಬಲಿ ಪಡೆಯ ಬಲ್ಲುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ . ವಿವಾಹಿತ ಪುತ್ರಿಯ ಅನೈತಿಕ ಸಂಬಂಧ ಪ್ರಶ್ನಿಸಿದ ತಂದೆಯನ್ನೇ ಮಗಳು ಸುಪಾರಿ ನೀಡಿ ಕೊಲೆಗೈದು ನಾಪತ್ತೆ ಕಥೆ ಕಟ್ಟಿದ ಬೆಚ್ಚಿ ಬೀಳಿಸುವ ಘಟನೆ ಗೋಕಾಕ್ನ ಕಡಬಗಟ್ಟಿ ಬಳಿ ನಡೆದಿದೆ.
ಏನಿದು ಸಿನಿಮಾ ಮಾದರಿ ಘಟನೆ?
ಕೈತನಾಳ ಹೊಸುರು ನಿವಾಸಿಯಾದ ಕೆಂಚಪ್ಪ ನೊಗನಿಹಾಳ ಎಂಬಾತ ತನ್ನ ಪುತ್ರಿಯ ಸಿದ್ದವ್ವಾ ಕಟ್ಟಿಕಾರ್ ಳ ಅನೈತಿಕ ಸಂಬಂಧ ಪ್ರಶ್ನಿಸಿ ನಿಗೂಢವಾಗಿ ಹತ್ಯೆಗೀಡಾಗಿದ್ದಾರೆ. ಮಗಳು 70 ಸಾವಿರ ಸುಪಾರಿ ನೀಡಿ ಕೊಲೆ ಮಾಡಿಸಿ ನಾಪತ್ತೆಯಾಗಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ . ಎಲ್ಲಾ ವಿಚಾರಗಳು ಪೊಲೀಸರ ತನಿಖೆ ವೇಳೆ ಬಹಿರಂಗೊಂಡಿವೆ. ಸಿದ್ದವ್ವಾ ಕೃತ್ಯಕ್ಕೆ ಆಕೆಯ ತಾಯಿ (ಕೆಂಚಪ್ಪನ ಪತ್ನಿ) ಯೂ ಸಾಥ್ ನೀಡಿರುವುದು ಕಂಡು ಬಂದಿದೆ.
ಕೆಂಚಪ್ಪ ನಾಪತ್ತೆಯಾಗಿರುವ ಸುದ್ದಿ ಊರೆಲ್ಲಾ ಹಬ್ಬಿದ ಬಳಿಕ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅನುಮಾನದಲ್ಲಿ ವಿಚಾರಣೆಗಿಳಿದಾಗ ಭಯಾನಕ ಸತ್ಯ ಬಹಿರಂಗವಾಗಿದೆ.
ಕೆಂಚಪ್ಪನನ್ನು ಬರ್ಬರವಾಗಿ ಕೊಲೆಗೈದು ಹೂತು ಹಾಕಲಾಗಿದ್ದು, ಪೊಲೀಸರು ಸ್ಥಳ ಪರೀಕ್ಷೆ ನಡೆಸಿ ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಪ್ರಮುಖ ಆರೋಪಿಗಳಾದ ಗೌರವ್ವ ನೊಗನಿಹಾಳ ಹಾಗೂ ಸಿದ್ದವ್ವ ಕಟ್ಟಿಕಾರ ಸುಪಾರಿ ಪಡೆದ ಆರೋಪಿಗಳಾದಶಿವಾಜಿ ಹೊಳೆವ್ವಗೋಳ, ಶಂಕರ ದೇಶಿಂಗೆ, ದುರ್ಗಪ್ಪಾ ನಂದಿ, ರಾಮಸಿದ್ದಪ್ಪ ನಂದಿ ಅವರನ್ನು ಬಂಧಿಸಿದ್ದಾರೆ.ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ