ಬರದಿಂದ ಕಂಗೆಟ್ಟು ಗಣೇಶನನ್ನೇ ಹೂತು ಬಿಟ್ಟ!
Team Udayavani, Sep 12, 2017, 3:44 PM IST
ಚಿಕ್ಕೋಡಿ: ಬರ ಎಷ್ಟರ ಮಟ್ಟಿಗೆ ಜನರನ್ನು ಕಂಗಾಲಾಗಿಸಿದೆ ಎನ್ನುವದಕ್ಕೆ ಈ ಘಟನೆ ಜ್ವಲಂತ
ಸಾಕ್ಷಿ. ಜನರು ಜನಪ್ರತಿನಿಧಿಗಳ ಮೇಲೆ ಮಾತ್ರವಲ್ಲ ದೇವರ ಮೇಲೂ ಆಕ್ರೋಶಗೊಂಡಿರುವುದಕ್ಕೆ ಸಾಕ್ಷಿಯಾಗಿ ಪೂಜೆ ಮಾಡಲಾಗಿದ್ದ ಗಣೇಶನ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ಜಲಸ್ತಂಭನ ಮಾಡುವ ಬದಲು ಹೊಂಡ ತೆಗೆದು ಹೂತ ಘಟನೆ ನಡೆದಿದೆ.
ರಾಯಭಾಗ ತಾಲೂಕಿನ ನಸಲಾಪುರದಲ್ಲಿ ಈ ಘಟನೆ ನಡೆದಿದ್ದು ಶಿವಗೌಡ ಪಾಟೀಲ್ ಎಂಬ ರೈತ ಗಣೇಶನನ್ನು ಪೂಜಿಸಿ ಮಳೆಗಾಗಿ ಪ್ರಾರ್ಥಿಸಿದ್ದ. ಮಳೆ ಬರದೆ ಇದ್ದುದರಿಂದ ಕಂಗಾಲಾಗಿ ಹೊಲದಲ್ಲಿ ಹೊಂಡ ತೆಗೆದು ಗಣೇಶನನ್ನು ಹೂತು ಹಾಕಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಗೌಡ ಕಳೆದ 10 ವರ್ಷಗಳಿಂದ ಮಳೆ ಇಲ್ಲ. ಬಾವಿಗಳಲ್ಲಿ ನೀರಿಲ್ಲ.ಹೀಗಾಗಿ ಜನರು ಬಾವಿಗೆ ಹಾಕುವುದು ಬೇಡ ಅಂದರು. ದೇವರಿಗೂ ಗೊತ್ತಾಗಲಿ ಎಂದು ಬೆಳೆ ಹಾಳಾದ ಹೊಲದಲ್ಲಿ ಹೂತು ಹಾಕಿದ್ದೇವೆ ಎಂದು ಹತಾಶರಾಗಿ ನುಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Nomination: ನಾಮಪತ್ರ ಸಲ್ಲಿಸಿದ ಜಗದೀಶ್ ಶೆಟ್ಟರ್, ಬಿಎಸ್ ವೈ, ಗೋವಾ ಸಿಎಂ ಭಾಗಿ
HDK ವಿರುದ್ಧ ರಾಜ್ಯಾದ್ಯಂತ ಮಹಿಳೆಯರಿಂದ ಪ್ರತಿಭಟನೆ: ಡಿಕೆಶಿ
ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ