ಮಳೆ ನಿಂತು ಹೋದ ಮೇಲೆ ಇದು.. ಧೂಳಗಾವಿ


Team Udayavani, Sep 3, 2018, 3:47 PM IST

3-september-20.jpg

ಬೆಳಗಾವಿ: ಮಳೆ ಸ್ವಲ್ಪ ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆದರೆ ಸಾಕು ನಗರದ ಬಹುತೇಕ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗುತ್ತದೆ. ಮಳೆ ನಿಂತು ಹೋದ ಮೇಲೆ ಎಲ್ಲ ರಸ್ತೆಗಳೂ ಧೂಳುಮಯವಾಗುತ್ತವೆ. ಕಣ್ಣು ತೆರೆಯಲು ಸಾಧ್ಯವಾಗದಷ್ಟು ಧೂಳು ಆವರಿಸಿಕೊಳ್ಳುತ್ತದೆ. ಧೂಳಿನಿಂದಾಗಿ ಕೇವಲ ಕಣ್ಣಿಗೆ ಹಾನಿ ಮಾಡುವುದಷ್ಟೇ ಅಲ್ಲದೇ ರಸ್ತೆ ಅಪಘಾತಕ್ಕೂ ಕಾರಣವಾಗಿದೆ. 

ಕಳೆದ 15 ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾದಾಗಿನಿಂದ ರಸ್ತೆಗಳ ದುಸ್ಥಿತಿ ಹೇಳತೀರದಾಗಿದೆ. ರಸ್ತೆಗಳ ತುಂಬ ಆವರಿಸುವ ಧೂಳು ಜನರ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಳಪೆ ಮಟ್ಟದ ಕಾಮಗಾರಿಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ನಗರದ ಬಹುತೇಕ ಪ್ರಮುಖ ರಸ್ತೆಗಳ ಸ್ಥಿತಿ ಇದೇ ರೀತಿಯಾಗಿದೆ. ಗುಂಡಿಗಳಿಂದ ಅಪಘಾತ: ಮಳೆಯಿಂದಾಗಿ ಎಲ್ಲ ರಸ್ತೆಗಳೂ ಅಧೋಗತಿಗೆ ಹೋಗಿವೆ. ಎಲ್ಲಿ ನೋಡಿದರಲ್ಲಿ ಧೂಳು, ರಸ್ತೆ ಗುಂಡಿಗಳನ್ನೇ ನೋಡುವುದಾಗಿದೆ. ಧೂಳಿನಿಂದ ಕಣ್ಣು ಉಜ್ಜಿಕೊಳ್ಳುತ್ತ ಬೈಕ್‌ ಸವಾರರು ಸಂಚರಿಸುವಾಗ ಅನೇಕ ಅಪಘಾತಗಳೂ ಸಂಭವಿಸಿವೆ. ಒಂದೆಡೆ ರಸ್ತೆ ರಿಪೇರಿಯ ಕಾಟವಾದರೆ, ಇನ್ನೊಂದೆಡೆ ಧೂಳಿನ ಸಮಸ್ಯೆಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದು ಜನರ ಆರೋಪ.

ಬೆಳಗಾವಿಯ ಮಳೆ ಎಂದರೆ ಒಮ್ಮೆ ಶುರುವಾದರೆ ಕಡಿಮೆಯಾಗೋದು ವಿರಳ. ಸುಮಾರು 2-3 ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಮಳೆ ಕಡಿಮೆ ಆಯಿತೆಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಧೂಳಿನ ಕಾರುಬಾರು ಹೆಚ್ಚಾಗಿದೆ. ಮಳೆ ಇದ್ದರೆ ಧೂಳು ಹಾರುವುದಿಲ್ಲ. ಆದರೆ ಕಡಿಮೆ ಆಯಿತೆಂದರೆ ರಸ್ತೆ ಮೇಲೆ ಎದ್ದು ನಿಲ್ಲುವ ಸಣ್ಣ ಸಣ್ಣ ಕಲ್ಲುಗಳು ಚೂರುಗಳಾಗಿ ಧೂಳಿನ ಪ್ರಮಾಣ ಮತ್ತಷ್ಟು ಹೆಚ್ಚಿಸುತ್ತವೆ.

ಬೈಕ್‌ ಸ್ಕಿಡ್‌ ಜಾಸ್ತಿ
ಮಳೆ ನಿಂತಾಗ ರಸ್ತೆಗಳ ಮೇಲಿನ ಚಿಕ್ಕ ಚಿಪ್ಪು ಕಲ್ಲುಗಳು ಎದ್ದು ನಿಲ್ಲುತ್ತವೆ. ವಾಹನಗಳು ವೇಗವಾಗಿ ಸಂಚರಿಸಿದಾಗ ರಸ್ತೆ ಪಕ್ಕ ಕಲ್ಲು ಚಿಪ್ಪುಗಳು ಬಂದು ಬೀಳುತ್ತವೆ. ಇದರಿಂದ ರಸ್ತೆ ಬದಿಯಿಂದ ವಾಹನಗಳು ಸಂಚರಿಸುವಾಗ ಜಾರಿ ಬೀಳುವುದು ಗ್ಯಾರಂಟಿ. ಹೀಗೆ ಅನೇಕ ಬೈಕ್‌ ಸವಾರರು ಸ್ಕಿಡ್‌ ಆಗಿ ಬಿದ್ದು ಕೈ-ಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ.

ಎಲ್ಲೆಲ್ಲಿ ಗುಂಡಿ ?
ಕಾಲೇಜು ರಸ್ತೆಯಿಂದ ಸಾಗುವ ಬೋಗಾರ್‌ವೇಸ್‌, ಕ್ಯಾಂಪ್‌ ಮಾರ್ಗ, ಕಾಂಗ್ರೆಸ್‌ ರಸ್ತೆ, ಉದ್ಯಮಭಾಗವರೆಗೂ ಸಾಗುವ ರಸ್ತೆ, ನಗರ ಮಧ್ಯಭಾಗದ ಟಿಳಕ ಚೌಕ್‌, ಮಹಾತ್ಮಾ ಫುಲೆ ರಸ್ತೆ, ರಾಮಲಿಂಗ ಖೀಂಡ ಗಲ್ಲಿ, ಕೋನವಾಳ ಗಲ್ಲಿ, ಪಿ.ಬಿ. ರೋಡ್‌, ಮಹಾದ್ವಾರ ರೋಡ್‌, ಶನಿ ಮಂದಿರ ರಸ್ತೆ, ಹೇಮು ಕಲಾನಿ ಚೌಕ್‌, ಕೋರ್ಟ್‌ ರಸ್ತೆ, ರಾಣಿ ಚನ್ನಮ್ಮ ವೃತ್ತ, ಕ್ಲಬ್‌ ರಸ್ತೆ, ಆರ್‌ಟಿಒ ಸರ್ಕಲ್‌, ಬಾಕ್ಸೈಟ್‌ ರೋಡ್‌ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಸಂಚರಿಸುವ ಜನ ಧೂಳು ಹಾಗೂ ಗುಂಡಿಗಳಿಂದ ಬೇಸತ್ತಿದ್ದಾರೆ. 

ರಸ್ತೆ ಮೇಲಿನ ವಿಪರೀತ ಧೂಳಿನಿಂದ ಕಣ್ಣಿನ ಇಂಪೆಕ್ಶನ್‌ ಆಗುವ ಸಾಧ್ಯತೆ ಇದೆ. ಧೂಳು ಹೆಚ್ಚಾದಂತೆ ಕಣ್ಣಿನ
ವೈರಲ್‌ ಹಾಗೂ ಬ್ಯಾಕ್ಟಿರಿಯಲ್‌ ಇಂಪೆಕ್ಶನ್‌ ಕೂಡ ಆಗುತ್ತದೆ. ಮಳೆ ಕಡಿಮೆಯಾದಾಗ ರಸ್ತೆಗಳ ಮೇಲೆ ಹೆಚ್ಚಿನ ಧೂಳು ಕಂಡು ಬರುತ್ತದೆ. ಹೀಗಾಗಿ ಇಂಥ ಧೂಳಿನಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್‌ ಹಾಗೂ ಕನ್ನಡಕ ಬಳಸಬೇಕಾದ ಅಗತ್ಯವಿದೆ.
 ಡಾ| ಅಲ್ಫೇಶ್‌ ಟೋಪ್ರಾಣಿ,
ವೈದ್ಯರು, ನೇತ್ರದರ್ಶನ ಕಣ್ಣಿನ ಆಸ್ಪತ್ರೆ

ಬೆಳಗಾವಿ ಈಗ ಸ್ಮಾರ್ಟ್‌ ಸಿಟಿಯತ್ತ ದಾಪುಗಾಲು ಹಾಕುತ್ತಿದೆ. ಆದರೆ ಈ ಹೆಸರಿಗೆ ತಕ್ಕಂತೆ ರಸ್ತೆಗಳು ಆಗದಿರುವುದೇ ಬೇಸರ ತಂದಿದೆ. ಸ್ಮಾರ್ಟ್‌ ಸಿಟಿ ಎಂದರೆ ಕಳಪೆ ಮಟ್ಟದ ರಸ್ತೆಗಳು ಇರದೇ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಬೇಕು. ಕಾಂಕ್ರೀಟ್‌ ರಸ್ತೆಗಳು ನಿರ್ಮಾಣವಾದರೆ ಇಂಥ ಧೂಳು-ಗುಂಡಿಗಳಿಂದ ಮುಕ್ತಿ ಪಡೆಯಬಹುದಾಗಿದೆ. 
. ಮುನಿರಾಜ ಜೈನ, ಸ್ಥಳೀಯ ನಿವಾಸಿ

ನಾವು ನಿತ್ಯವೂ ಬೈಕ್‌ ಮೇಲೆ ಸಂಚರಿಸುತ್ತೇವೆ. ಧೂಳಿನಿಂದ ಕಣ್ಣಿಗೆ ಸಮಸ್ಯೆಯಾಗುತ್ತಿದೆ. ಮಳೆ ನಿಂತ ಮೇಲೆ ಧೂಳು ಬರುವುದು ಸಹಜ. ಧೂಳು ಹಾರುವುದರಿಂದ ರೋಗ-ರುಜಿನಗಳು ಬರುತ್ತವೆ. ಮಳೆ ನಿಂತಾಗ ರಸ್ತೆ ಮಾಡುವುದಾಗಿ ಪಾಲಿಕೆ ಹೇಳಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
. ರಾಜೇಶ ಎಂ. ಗೌಡ,
  ವ್ಯಾಪಾರಿ

ಭೈರೋಬಾ ಕಾಂಬಳೆ 

ಟಾಪ್ ನ್ಯೂಸ್

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

police crime

ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ

Belagavi; ಸೋಲಿನ ಭಯದಿಂದ ಮೃಣಾಲ್‌ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ

Belagavi; ಸೋಲಿನ ಭಯದಿಂದ ಮೃಣಾಲ್‌ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.