ಎಂಎಲ್‌ಎಗಳು ಫಾರೇನ್‌ ಹೋಕ್ತಾರ, ನಾವ್‌ ಶಿಮ್ಲಾಕ್ಕೆ ಹೋಗೀವಿ


Team Udayavani, Sep 27, 2018, 4:20 PM IST

27-sepctember-19.gif

ಬೆಳಗಾವಿ: ಎಂಎಲ್‌ಎ, ಎಂಪಿಗಳು ಅಧ್ಯಯನದ ಹೆಸರಿನಲ್ಲಿ ಫಾರೇನ್‌ ಟೂರ್‌ ಹೋಗಿ ಫೈವ್‌ ಸ್ಟಾರ್‌ ಹೊಟೇಲ್‌ನಲ್ಲಿ ಇರ್ತಾರೆ. ಆದರೆ ನಾವು ಕಾರ್ಪೊರೇಟರ್‌ಗಳು ಶಿಮ್ಲಾಕ್ಕೆ ಹೋಗಿ ಅಡ್ಡಾಡಿ ಅಲ್ಲಿಯ ಪಾಲಿಕೆಯಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ಅಧ್ಯಯನ ಪ್ರವಾಸ ಮಾಡುವುದರಲ್ಲಿ ತಪ್ಪೇನಿದೆ. 
ಅಧ್ಯಯನದ ಹೆಸರಿನಲ್ಲಿ ನಾಲ್ಕು ದಿನಗಳ ಶಿಮ್ಲಾ ಮಹಾನಗರ ಪಾಲಿಕೆಗೆ ಭೇಟಿ ನೀಡಲಿರುವ ಬೆಳಗಾವಿ ಪಾಲಿಕೆಯ ಬಹುತೇಕ ಸದಸ್ಯರ ಪ್ರಶ್ನೆ ಇದು. ಬೆಳಗಾವಿಯನ್ನೂ ಶಿಮ್ಲಾದಂತೆ ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶ ಇಟ್ಟುಕೊಂಡು ಪ್ರವಾಸ ಕೈಗೊಂಡಿದ್ದೇವೆ ಎನ್ನುತ್ತಿದ್ದಾರೆ ಈ ಸದಸ್ಯರು.

ಬೆಳಗಾವಿಯಿಂದ ಮುಂಬೈ ಮೂಲಕ ವಿಮಾನದಲ್ಲಿ ಮಂಗಳವಾರ ಶಿಮ್ಲಾಕ್ಕೆ ಪಾಲಿಕೆಯ 40 ಸದಸ್ಯರು ಪ್ರವಾಸ ಬೆಳೆಸಿದ್ದಾರೆ. ಮೊದಲೇ ಆರ್ಥಿಕ ಮುಗ್ಗಟ್ಟಿನಿಂದಾಗಿ ಪೌರ ಕಾರ್ಮಿಕರಿಗೆ ಸಂಬಳ ಕೊಡಲು ಒದ್ದಾಡುತ್ತಿರುವ ಮಹಾನಗರ ಪಾಲಿಕೆ ಈಗ ಸದಸ್ಯರ ಅಧ್ಯಯನಕ್ಕಾಗಿ ಪ್ರವಾಸ ಆಯೋಜಿಸಿದೆ. ಆದರೆ ಈ ಅಧ್ಯಯನ ಪ್ರವಾಸದಿಂದ ನಗರಕ್ಕೇನು ಲಾಭ ಎಂಬುದು ನಾಗರಿಕರ ಪ್ರಶ್ನೆ. ಪ್ರವಾಸಿ ತಂಡದೊಂದಿಗೆ ಪಾಲಿಕೆ ಅಧಿಕಾರಿಯೊಬ್ಬರು ಇದ್ದಾರೆ. ಸುಮಾರು ಐದಾರು ದಿನಗಳ ಕಾಲ ಪ್ರವಾಸ ನಡೆಸಲಿರುವ ಈ ತಂಡ ಶಿಮ್ಲಾ ನಂತರ ಇನ್ನೂ ಯಾವ್ಯಾವ ನಗರಕ್ಕೆ ಭೇಟಿ ನೀಡುತ್ತಾರೆ ಎಂಬುದು ಖಚಿತವಾಗಿಲ್ಲ. ಅಲ್ಲಿನ ಪಾಲಿಕೆಗೆ ಭೇಟಿ ನೀಡಿ ನಗರದ ಅಧ್ಯಯನ ಕೈಗೊಂಡು ಅಧಿಕಾರಿಗಳಿಗೆ ವರದಿ ನೀಡಲಿದ್ದಾರೆ. ಶಿಮ್ಲಾದಂತೆ ಬೆಳಗಾವಿಯನ್ನೂ ಸಿದ್ಧಗೊಳಿಸುವುದೇ ಈ ಪ್ರವಾಸಿ ಸದಸ್ಯರ ಉದ್ದೇಶವಾಗಿದೆ. ಅಧ್ಯಯನ ಪ್ರವಾಸದ ತಂಡದಲ್ಲಿ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್‌ ಮಧುಶ್ರೀ ಪೂಜಾರಿ ಸೇರಿದಂತೆ 40 ಸದಸ್ಯರಿದ್ದಾರೆ.

ಪಾಲಿಕೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ಸಂಬಳ ಕೊಡಲು ದುಡ್ಡು ಇಲ್ಲ. ಜತೆಗೆ ನಗರದಲ್ಲಿ ಮಳೆಯಿಂದಾಗಿ ಗುಂಡಿಗಳು ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಆದರೆ ಈಗ ಲಕ್ಷಾಂತರ ರೂ. ವೆಚ್ಚ ಮಾಡಿ ಅಧ್ಯಯನದ ನೆಪದಲ್ಲಿ ಪ್ರವಾಸ ಕೈಗೊಂಡಿರುವುದಕ್ಕೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಶಿಮ್ಲಾ ನಗರದಲ್ಲಿ ಕೈಗೊಂಡ ಯೋಜನೆಗಳನ್ನು ಬೆಳಗಾವಿಯ ಸ್ಮಾರ್ಟ್‌ ಸಿಟಿ ಅಳವಡಿಸುವ ಯೋಜನೆ ಈ ತಂಡದ್ದಾಗಿದೆ. ಪ್ರವಾಸ ಕೈಗೊಂಡಿರುವ ಎಲ್ಲ ಸದಸ್ಯರೂ ತಮ್ಮ ಅಭಿಪ್ರಾಯಗಳನ್ನು ಬೆಳಗಾವಿ ಪಾಲಿಕೆಯಲ್ಲಿ ಮಂಡಿಸಲಿದ್ದಾರೆ. ಈಗಾಗಲೇ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಪಾಲಿಕೆ ಸದಸ್ಯರು ಚಂಡೀಗಢ, ನಾಸಿಕ, ಕೊಲ್ಲಾಪುರ ನಗರಗಳಿಗೆ ಭೇಟಿ ನೀಡಿ ಬಂದಿದ್ದಾರೆ. ಅಲ್ಲಿಯ ಅಧ್ಯಯನದ ವರದಿಯನ್ನೂ ನೀಡಿದ್ದಾರೆ. ಆದರೆ ಅದನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಳ್ಳಲಾಗಿದೆ ಎಂಬುದು ನಾಗರಿಕರ ಪ್ರಶ್ನೆ.

2-3 ತಿಂಗಳ ಹಿಂದೆಯಷ್ಟೇ ಶಿಮ್ಲಾದ ಸದಸ್ಯರು ಬೆಳಗಾವಿಗೆ ಬಂದು ಹೋಗಿದ್ದರು. ಇಲ್ಲಿಯ ಕಾಮಗಾರಿ ನೋಡಿ ಹೋಗಿದ್ದರು. ಈಗ ಬೆಳಗಾವಿ ಪಾಲಿಕೆಯ ಐದು ವರ್ಷದ ಅಧಿಕಾರವಧಿ ಮುಗಿಯಲು ಇನ್ನೂ ಮೂರ್‍ನಾಲ್ಕು ತಿಂಗಳು ಬಾಕಿ ಇದೆ. ಈಗ ಶಿಮ್ಲಾಕ್ಕೆ ಅಧ್ಯಯನ ಪ್ರವಾಸಕ್ಕೆ ಹೋಗಿ ಬಂದು ಅದನ್ನು ಎಷ್ಟರ ಮಟ್ಟಿಗೆ ಜಾರಿಗೆ ತರುತ್ತಾರೆ. ಸದಸ್ಯರು ಯಾವ ವರದಿ ಕೊಡುತ್ತಾರೆ. ಅಧಿಕಾರಿಗಳು ಅದನ್ನು ಹೇಗೆ ಜಾರಿಗೊಲಿಸುತ್ತಾರೆ ಎನ್ನುವ ಕುತೂಹಲ ಜನರಲ್ಲಿದೆ. 

ಮಹಾನಗರ ಪಾಲಿಕೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿಯೇ ಮೀಸಲಿಟ್ಟಿರುವ ನಿಧಿ ಮರಳಿ ಹೋಗುತ್ತದೆ ಎಂಬ ಉತ್ತರವನ್ನು ಸದಸ್ಯರು ನೀಡುತ್ತಿದ್ದು, ಇದೇ ಹಣವನ್ನು ಯಾವುದಾದರೂ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದಾಗಿತ್ತು ಎಂಬ ಸಲಹೆ ಸಾರ್ವಜನಿಕರು ನೀಡಿದ್ದಾರೆ.  ಅಧ್ಯಯನ ಪ್ರವಾಸಕ್ಕೆ ಸದಸ್ಯರೇ ಹೋಗಬೇಕಾಗಿಲ್ಲ. ಯೋಜನಾ ಸಮಿತಿಯ ಅಧಿಕಾರಿಗಳು ಹೋದರೆ ಅದಕ್ಕೊಂದು ಅರ್ಥ ಬರುತ್ತದೆ. ಪಾಲಿಕೆಯ ಸದಸ್ಯರು ಹೋಗಿರುವುದು ಯಾವ ಕಾರಣಕ್ಕೆ ಎಂಬುದು ಅರ್ಥವಾಗುತ್ತಿಲ್ಲ. ಈ ಬಾರಿಯ ಅಧ್ಯಯನ ಪ್ರವಾಸ ಬಿಟ್ಟು ಕೊಡಗಿನ ನೆರೆ ಸಂತ್ರಸ್ತರಿಗೆ ಹಣ ಕೊಟ್ಟಿದ್ದರೆ ಎಷ್ಟೋ ಅನುಕೂಲವಾಗುತ್ತಿತ್ತು. ಜತೆಗೆ ನಮ್ಮ ಸದಸ್ಯರಿಗೂ ಪುಣ್ಯ ಪ್ರಾಪ್ತಿ ಆಗುತ್ತಿತ್ತು. ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿರುವ ಇಂಥ ಸದಸ್ಯರಿಗೆ ಏನು ಹೇಳ್ಳೋದು ಅರ್ಥವಾಗುತ್ತಿಲ್ಲ.
. ಅಶೋಕ ಚಂದರಗಿ, ಕನ್ನಡ ಹೋರಾಟಗಾರರು

ಐದು ವರ್ಷಗಳ ಅವಧಿಯಲ್ಲಿ ಮೂರ್‍ನಾಲ್ಕು ಪ್ರವಾಸ ಮಾಡಿ ಬಂದವರು ಯಾವುದನ್ನು ಬೆಳಗಾವಿ ನಗರದಲ್ಲಿ ಅಳವಡಿಸಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಚಂಡಿಗಢಕ್ಕೆ ಹೋಗಿ ಬಂದವರು ಅಲ್ಲಿಯ ಯೋಜನೆಯನ್ನು ಅಲವಡಿಸಿದ್ದಾರೆಯೇ, ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗೆ ಕೊಡಲು ಹಣ ಇಲ್ಲ. ಸುಮ್ಮನೇ ಸದಸ್ಯರು ಅಧ್ಯಯನದ ನೆಪ ಹೇಳಿ ಹೋಗಿದ್ದಾರೆ. ಇಲ್ಲಿಯವರೆಗೆ ಯಾವುದೋ ಪ್ರವಾಸಕ್ಕೂ ನಾನು ಹೋಗಿಲ್ಲ. ಅಧ್ಯಯನ ಎಂದರೆ ಅದು ಸರಿಯಾಗಿ ಜಾರಿಗೆ ಬರಬೇಕು ಎಂಬುದೇ ನಮ್ಮ ಅಭಿಪ್ರಾಯ.
. ಸರಳಾ ಹೇರೇಕರ, ಪಾಲಿಕೆ ಸದಸ್ಯರು

 ಭೈರೋಬಾ ಕಾಂಬಳೆ 

ಟಾಪ್ ನ್ಯೂಸ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

2-news

Liquor: ಮದ್ಯ ಸಾಗಿಸುವ ವಾಹನ ಪಲ್ಟಿಯಾಗಿ ನೂರಾರು ಬಾಕ್ಸ್‌‌ ಚೆಲ್ಲಾಪಿಲ್ಲಿ

Belagavi; ಕಾಂಗ್ರೆಸ್ ನವರು ಭಯದಿಂದ ಈಗ ಕೇಸರಿ ಧ್ವಜ ಹಿಡಿದಿದ್ದಾರೆ: ರವಿಕುಮಾರ್ ಟೀಕೆ

Belagavi; ಕಾಂಗ್ರೆಸ್ ನವರು ಭಯದಿಂದ ಈಗ ಕೇಸರಿ ಧ್ವಜ ಹಿಡಿದಿದ್ದಾರೆ: ರವಿಕುಮಾರ್ ಟೀಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.