ಸಂಪ್ರದಾಯ ಬದಿಗೊತ್ತಿ ವಿಧವೆಯರಿಂದ ಗೃಹ ಪ್ರವೇಶ
Team Udayavani, Oct 20, 2018, 4:43 PM IST
ಚಿಕ್ಕೋಡಿ: ಮನೆ ನಿರ್ಮಿಸಿ ವಾಸ್ತು ಪೂಜೆ ನೆರವೇರಿಸಲು ಪೂಜೆ ಪುನಸ್ಕಾರ ನೆರವೇರಿಸಿ ಮಂಗಳಕರ ಧಾರ್ಮಿಕ ವಿಧಿ ವಿಧಾನಗಳು ನಡೆಸುವುದು ಸಾಮಾನ್ಯ. ಎಲ್ಲರೂ ನಂಬಿಕೊಂಡು ಬಂದ ಸಂಪ್ರದಾಯ. ಆದರೆ ಇಲ್ಲೊಬ್ಬರು ವಿಧವೆಯರಿಗೆ ಮಹಾನ್ ಪುರುಷರ ಭಾವಚಿತ್ರ ನೀಡಿ ಅವರಿಂದ ಗೃಹ ಪ್ರವೇಶ ಮಾಡುವ ಮೂಲಕ ವಿಧವೆಯರನ್ನು ಸಮಾಜ ಮುಖ್ಯವಾಹಿನಿಗೆ ತರಲು ವಿನೂತನ ಕಾರ್ಯ ಮಾಡಿದ್ದಾರೆ.
ಅಂಕಲಿ ಗ್ರಾಮದ ಸಮೀಪದಲ್ಲಿರುವ ರಾಯಬಾಗ ತಾಲೂಕಿನ ಬಾವನ ಸೌದತ್ತಿ ಗ್ರಾಮದ ರಾಜು ಮರಿನಾಯಿಕ ಎಂಬವರು ಹೊಸ ಮನೆ ನಿರ್ಮಿಸಿದ್ದು, ಅದರ ವಾಸ್ತು ಶುಕ್ರವಾರ ಹಮ್ಮಿಕೊಂಡಿದ್ದರು. ಇದಕ್ಕಾಗಿ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಬದಿಗೊತ್ತಿದ ಅವರು, ಅಮಂಗಲಕರವೆಂದು ಭಾವಿಸಲಾದ ವಿಧವೆಯರ ಗೃಹ ಪ್ರವೇಶಕ್ಕೆ ಪ್ರಾತಿನಿಧ್ಯ ನೀಡಿದ್ದಾರೆ. ರಾಜು ಮರಿನಾಯಿಕ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು. ನಂತರ ರಾಜು ಮರಿನಾಯಿಕ ಮನೆಗೆ ಆಗಮಿಸಿದ ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಮೂಢನಂಬಿಕೆ ನಿವಾರಿಸಲು ಅನೇಕ ಮಹಾತ್ಮರು ಹೋರಾಟ ಮಾಡಿದ್ದಾರೆ. ಆದರೂ ನಮ್ಮ ಜನ ಇವುಗಳ ಮೇಲೆ ಅಗಾಧ ನಂಬಿಕೆ ಇಟ್ಟುಕೊಂಡಿದ್ದು, ಇದನ್ನು ಹೋಗಲಾಡಿಲು ಇಂತಹ ವಿಶಿಷ್ಟ ಕಾರ್ಯಗಳು ನಡೆಯುವ ಮೂಲಕ ಯುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಆದರ್ಶಗಳನ್ನು ಪಾಲನೆ ಮಾಡಿದ್ದೇ ಆದರೆ ಧರ್ಮಗಳ ಮಧ್ಯೆ ಸಂಘರ್ಷ ನಡೆಯುತ್ತಿರಲಿಲ್ಲ, ಅವರ ವಿಚಾರ, ಆದರ್ಶಗಳನ್ನು ತಿಳಿಸುವ ಉದ್ದೇಶದಿಂದ ಮಾನವ ಬಂಧುತ್ವ ವೇದಿಕೆ ಮೂಲಕ ಮೂಡನಂಭಿಕೆ ತೆಗೆದುಹಾಕುವ ಕಾರ್ಯಗಳು ನಡೆಯುತ್ತಿವೆ. ಸ್ಮಶಾನ ಕಾರ್ಯಕ್ರಮ, ಪುರೋಹಿತರು ಇಲ್ಲದೇ ಗೃಹ ಪ್ರವೇಶ, ಅಮವಾಸ್ಯೆ ದಿನ ಅಭಿವೃದ್ಧಿ ಕಾರ್ಯಗಳ ಚಾಲನೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಮನೆ ವಾಸ್ತು ಪೂಜೆಗೆ ಮಾಡುವ ವೆಚ್ಚವನ್ನು ಕಡಿಮೆ ಮಾಡಿ ಅದೇ ಹಣದಲ್ಲಿ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಬೇಕು ಎಂದರು. ಈರಗೌಡ ಪಾಟೀಲ, ಮಹಾವೀರ ಮೋಹಿತೆ, ದುಳಗೌಡ ಪಾಟೀಲ, ಸದಾಶಿವ, ರಾಜು ನಾಯ್ಕರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್