ದಸರಾ: ಗಮನ ಸೆಳೆದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ
Team Udayavani, Oct 22, 2018, 4:51 PM IST
ಚಿಕ್ಕೋಡಿ: ಗಡಿ ಭಾಗದ ಬೇಡಕಿಹಾಳದ ಸಿದ್ದೇಶ್ವರ ದೇವರ ದಸರಾ ಮಹೋತ್ಸವದ ಅಂಗವಾಗಿ ನಡೆದ ಭಾರತ ಮತ್ತು ರಷ್ಯಾ ಪೈಲವಾನರ ಮಧ್ಯೆ ನಡೆದ ಅಂತಾರಾಷ್ಟ್ರೀಯ ಜಂಗಿ ಕುಸ್ತಿಯಲ್ಲಿ ರಷ್ಯಾದ ಮಾಸ್ಕೋ ಚಾಂಪಿಯನ್ ಓಮರ್ ಓಮಾರೋವ್ ಅವರನ್ನು ಭಾರತದ ಬಾಳಾರಫೀಕ ಶೇಖ್ ಕುಸ್ತಿ ಮಾಡುವ ಮೂಲಕ ಸಿದ್ದೇಶ್ವರ ಕೇಸರಿ ಪ್ರಶಸ್ತಿಗೆ ಭಾಜಿನರಾಗಿ ದಸರಾ ವೈಭವನ್ನು ಹೆಚ್ಚಿಸಿದರು. ಚಿಕ್ಕೋಡಿ ತಾಲೂಕಿನ ಗಡಿ ಗ್ರಾಮವಾದ ಬೇಡಕಿಹಾಳದಲ್ಲಿ ಸಿದ್ದೇಶ್ವರ ದಸರಾ ಮಹೋತ್ಸವ ಕಳೆದ 11 ದಿನಗಳ ಅದ್ಧೂರಿಯಾಗಿ ನಡೆಯಿತು.
ಕೊನೆ ದಿನಾವಾದ ರವಿವಾರ ನಡೆದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಕುಸ್ತಿಯಲ್ಲಿ ಭಾರತ ಪರವಾಗಿ ಮಹಾರಾಷ್ಟ್ರದ ಪೈ ಬಾಳಾರಫೀಕ ಶೇಖ್ ಅವರು ರಷ್ಯಾದ ಫೈ, ಓಮರ ಓಮಾರೋವ ನಡುವೆ ನಡೆದ ತೀವ್ರ ಹಣಾಹಣಿಯಲ್ಲಿ ಕೇವಲ ಒಂದು ನಿಮಿಷದಲ್ಲಿ ಕುಸ್ತಿ ಮಾಡುವ ಮೂಲಕ ಪ್ರಥಮ ಸ್ಥಾನ ಪಡೆದರು.
ಎರಡನೇ ಕುಸ್ತಿಯಲ್ಲಿ ಭಾರತ ಕೇಸರಿ ಯೋಗೇಶ ಬೊಂಬಾಳೆ ಕೊಲ್ಲಾಪುರ ಮತ್ತು ರಷ್ಯಾದ ತಮಿರಲಾನ ಬೊಸ್ತಾನೋವ ನಡುವೆ ನಡೆದ ಕುಸ್ತಿಯಲ್ಲಿ ಭಾರತದ ಕೇಸರಿ ಯೋಗೇಶ ಬೊಂಬಾಳೆ ಜಯ ಸಾಧಿಸಿದರು. ಮೂರನೇ ಕ್ರಮಾಂಕದಲ್ಲಿ ಭಾರತ ಕೇಸರಿ ದಿಲ್ಲಿತ ಸನ್ನಿ ಜಾನ್ ಮತ್ತು ಸಂತೋಷ ಸುತಾರ ಮಧ್ಯೆ ನಡೆದ ಕುಸ್ತಿಯಲ್ಲಿ ಸಂತೋಷ ಸುತಾರಗೆ ಸ್ವಲ್ಪ ಗಾಯವಾಗಿದ್ದರಿಂದ ಸನ್ನಿ ಜಾನ್ ಜಯ ಸಾಧಿಸಿದರು. ಕುಸ್ತಿ ಪಂದ್ಯಾವಳಿಗೆ ಸಂಸದ ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್ ಮಾಜಿ ಸದಸ್ಯ ವೀರಕುಮಾರ ಪಾಟೀಲ, ಮಹಾರಾಷ್ಟ್ರದ ಮಾಜಿ ಸಚಿವ ಪ್ರಕಾಶ ಅವಾಡೆ ಸೇರಿದಂತೆ ಗಡಿ ಭಾಗದ ಲಕ್ಷಾಂತರ ಜನ ಕುಸ್ತಿ ವೀಕ್ಷಿಸಲು ಸಾಕ್ಷಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್