ಪ್ಲೀಸ್‌! ನಮಗೂ ಬದುಕಲು ಅವಕಾಶ ಕೊಡಿ


Team Udayavani, Aug 17, 2018, 5:29 PM IST

bell-2.jpg

ನಮನ ಹಂಪಿ
ರಾಮಾಯಣದಲ್ಲಿ ಸೀತೆಯನ್ನು ಕಾಪಾಡಲು ಬೆಟ್ಟ ಹಾರಿ ಹನುಮಂತ ಶ್ರೀರಾಮನ ಸಂದೇಶ ನೀಡಿ ಧೈರ್ಯವಾಗಿರುವಂತೆ ಹೇಳಿದ. ಆದರೆ ಇಲ್ಲಿ ಪರಿಸ್ಥಿತಿ ತುಂಬ ಭಿನ್ನ. ಇಲ್ಲಿನ ದೃಶ್ಯ ನೋಡಿದರೆ ನಿಮ್ಮ ಕಂಗಳಲಿ ನೀರು ಬರದೆ ಇರದು. ಮುನಿದುಕೊಂಡ ತುಂಗಭದ್ರೆಯ ರುದ್ರ ನರ್ತನಕ್ಕೆ ನಲುಗಿ ಹೋಗಿದ್ದೇವೆ. ಅಸಹಾಯಕರಾಗಿದ್ದೇವೆ. ನಮ್ಮ ಪರಿಸ್ಥಿತಿಯನ್ನು ತೋರಿಸಲು ಪಾಪಾ.. ಆ ರಾಚಯ್ಯನೇ ಬರಬೇಕಾಯಿತು. ನಮಗೀಗ ರಾಮನಾಮ ಜಪ ಮಾಡದೆ ಬೇರೆ ವಿಧಿಯಲ್ಲ.

ಹೌದು, ಇಂಥ ಪರಿಸ್ಥಿತಿ ವಿಶ್ವಪ್ರಸಿದ್ಧ ಹಂಪಿ ನದಿ ಪಾತ್ರದಲ್ಲಿ ಕಳೆದೆರಡು ದಿನಗಳಿಂದ ಕಂಡು ಬರುತ್ತಿದೆ. ಈ ಕುರಿತು ನಮ್ಮ ಅಹವಾಲು ಹೇಳಿಕೊಳ್ಳಲೇಬೇಕಾಗಿದೆ. ನಾಳೆಯ ಉಳುವೆಗೆ ನಾವು ಅನಾಥರಾಗದೇ ಜೀವಿಸಬೇಕಿದೆ. ಅಂಗೈ ಅಗಲ ತುಂಬ, ತನ್ನ ಕಬಂಧ ಬಾಹುಗಳು ಮೈಕೊರೆಯುವ ಚಳಿಗೆ ಸೋತು ಹೋಗುತ್ತಿವೆ. ಮೈಮರೆತರೆ ಮಡಿಲಿನಲ್ಲಿ ಮುಂಜಾನೆಯ ಕನಸು ಕಾಣುತ್ತಿರುವ ಹಸುಗೂಸುಗಳು ನೆಮ್ಮದಿಯ ನಿದ್ರೆಗೆ ಜಾರುವುದಿಲ್ಲ. ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಸ್ನೇಹಿತ, ಆತ್ಮೀಯ ಎಲ್ಲರೂ ಒಬ್ಬರಿಗೊಬ್ಬರು ಧೈರ್ಯ ತಂದುಕೊಡುತ್ತಿದ್ದೇವೆ. ಯಾಕೋ ಏನೋ ಈ ಬಾರಿ ತುಂಗಭದ್ರೆ ತುಸು ಹೆಚ್ಚೇ ಮುನಿಸಿಕೊಂಡಿದ್ದಾಳೆ.

ಮಲೆನಾಡು, ಪಶ್ಚಿಮಘಟ್ಟದ ಪ್ರಕೃತಿಗೆ ವರುಣ ದೇವನೇನೋ ತಥಾಸ್ತು ಎಂದಿದ್ದಾನೆ. ಆದರೆ ಅದರ ಸಿಟ್ಟು, ಸೆಡುವು ತುಂಗಭದ್ರೆ ತನ್ನ ಒಡಲಾಳ ತುಂಬಿಕೊಂಡು ಇಲ್ಲಿ ತೋರಿಸುತ್ತಿದ್ದಾಳೆ. ಇನ್ನಿಲ್ಲದಂತೆ ಝೇಂಕರಿಸುತ್ತಿದ್ದಾಳೆ. ಈಕೆಯ ಕೋಪ ತಾಪಕ್ಕೆ ನಾವಿರುವ ಸ್ಥಳ ಅಕ್ಷರಶಃ ದಿಕ್ಕಿಲ್ಲದಂತಾಗಿದೆ. ಸುತ್ತಲೂ ತುಂಗಭದ್ರೆಯ ನರ್ತನಕ್ಕೆ ಕಳೆದೆರಡು ದಿನಗಳಿಂದ ಬೆಚ್ಚಿ ಬಿದ್ದಿದ್ದೇವೆ.

ಸಾಕು ಮಾಡು ತಾಯಿ! ನಾವಾದ್ರೂ ಅಲ್ಪಸ್ವಲ್ಪ ತಡೆದುಕೊಳ್ಳಬಹುದು. ಆದರೆ ಪಾಪ ಹಸುಗೂಸುಗಳು ಎದೆಯಲ್ಲಿ ಬೆಚ್ಚನೆಯ ಜಾಗ ಹುಡುಕುತ್ತಿವೆ. ತೋಯ್ದು ತೊಪ್ಪೆಯಾಗಿ ಕೂಳಿಲ್ಲದೇ ಧೋ ಎಂದು ಹರಿಯುವ ನಿನ್ನ ನೋಡಿ ಶಪಿಸಬೇಕೆನಿಸುತ್ತಿದೆ. ಆದರೇನು ಮಾಡೋದು ನಮಗೆ ಮಾತುಬಾರದು. ರಾತ್ರಿ ಕೊರೆಯುವ ಚಳಿಗೆ ಮಕ್ಕಳು ಹೈರಾಣಾಗುತ್ತಿವೆ. ಮನುಷ್ಯರಿಗೆ ಮಾತ್ರ ಜೀವವಿದೆಯಾ? ಮನುಷ್ಯ ಜಾತಿಗೆ ಹೋಲುವ ನಾವಾರೂ ಯಾರಿಗೂ ಕಾಣಿಸುತ್ತಿಲ್ಲವೇ? ನಮ್ಮಂಥವರಿಗೆಂದೇ ಸರ್ಕಾರದ ಇಲಾಖೆಯೊಂದು ಇದೆಯಂತೆ. 

ಆದರೇನು ಮಾಡೋದು ಮನುಜರಿಗಿರುವ ಬೆಲೆ ನಮಗಿಲ್ಲವೇ? ರಾಮಾಯಾಣದಲ್ಲಿ ಶ್ರೀರಾಮನ ನಾಮಬಲವೇ ಶಕ್ತಿಯಾಗಿತ್ತು. ಇದೀಗ ನಮಗೆ ಹಂಪಿಯ ಕೋದಂಡರಾಮನೇ ಬಲ. ಆತನ ದೇಗುಲವೇ ನಮಗೆ ಶ್ರೀರಕ್ಷೆ. ಆ ದೇಗುಲದ ಕಂಬದ ತುದಿಯಲ್ಲಿ ನಾವಿಬ್ಬರೂ ನಮ್ಮ ಮಕ್ಕಳೊಂದಿಗೆ, ಕುಟುಂಬದೊಂದಿಗೆ ಹೇಗಿರಬೇಕು? ಹೇ ಶ್ರೀರಾಮ ಈಗಲೂ ನೀನು ಇದ್ದರೆ ನಮ್ಮನ್ನು ಕಾಪಾಡು! ಅತ್ತು ಅತ್ತು ಅಳು ಬತ್ತಿಹೋಗಿದೆ. ನಮ್ಮನ್ನು ನಾವು ಸಂತೈಸಿಕೊಳ್ಳಬೇಕಿದೆ. ದಿನವೂ ಭಕ್ತರ ಹಣ್ಣು ಹಂಪಲು ಸಿಗುತ್ತಿತ್ತು. ಆದರೆ ಕಳೆದೊಂದು ವಾರದಿಂದ ತುಂಗಭದ್ರೆ ಮೈದುಂಬಿ ಹಂಪಿ ಹೊಳೆಯ ಮೂಲಕ ಹರಿಯುತ್ತಿದ್ದಾಳೆ. ನಿನ್ನೆ ಮೊನ್ನೆಯಂತೂ 2 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಬಿಡುತ್ತಿದ್ದಂತೆ ನದಿ ಪಾತ್ರದ ನಾವೆಲ್ಲ ಕಂಗಾಲಾಗಿದ್ದೇವೆ. ರಭಸದಿಂದ ಹೊಳೆಯಲ್ಲಿ ಬಾಳೆ ದಿಂಡು ಕಿತ್ತು ತಿನ್ನಲು ಹರಸಾಹ ಪಡುತ್ತಿದ್ದೇವೆ. ಆದರೆ ಏನೂ ಉಪಯೋಗವಾಗುತ್ತಿಲ್ಲ. ಸುತ್ತಲೂ ತುಂಗಭದ್ರೆ ಒಂದೇ ಸಮನೆ ಬುಸುಗುಡುತ್ತಿದ್ದಾಳೆ.

ಎತ್ತಲೂ ಹೋಗದ ಪರಿಸ್ಥಿತಿ. ತಿನ್ನಲು ನಮಗೇನೂ ಸಿಗುತ್ತಿಲ್ಲ. ಮಾರುದ್ದ ಈಜಾಡಲು ನಮಗಾಗುವುದಿಲ್ಲ. ಅಲ್ಲಿಯ ಬೋರ್ಗರತೆ ದನಿ ಕೇಳಿಯೇ ಭಯಗೊಂಡಿದ್ದೇವೆ. ಕಳೆದೊಂದು ದಶಕದಿಂದೇಚೆಗೆ ಇಂಥ ಪರಿಸ್ಥಿತಿಯಿದ್ದರೂ ನಮ್ಮನ್ನು ಚಿತ್ರಿಸುವವರು ಕಡಿಮೆಯಿದ್ದರು. ಆದರೆ ಇಂದು ನಮ್ಮವರನ್ನು ನಮಗೆ ತಿಳಿಯದಂತೆ ಸೆರೆ ಹಿಡಿದಿದ್ದಾರೆ.

ಇಂದು ಸಂಜೆಯ ಹೊತ್ತಿಗೆ ಬದುಕಿನ ಭರವಸೆ ಕ್ಷೀಣಿಸುತ್ತಿದೆ. ಒಬ್ಬರಿಗೊಬ್ಬರು ಧೈರ್ಯ ತಂದುಕೊಳ್ಳುತ್ತಿದ್ದೇವೆ. ಆತ್ಮಸ್ಥೈರ್ಯ ಕುಸಿಯುತ್ತಿದೆ. ಆದರೆ ಸೋಲು ಒಪ್ಪಿಕೊಳ್ಳುತ್ತಿಲ್ಲ. ಇನ್ನೇನು ಮಾಡೋದು? ನಾಳೆಯ ಒಂದೊಳ್ಳೆ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಸಾಧ್ಯವಾದರೆ ನಮ್ಮನ್ನು ಕಾಪಾಡಿ. ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಬಿಡಿ. ನಾವು ಬದುಕಬೇಕಿದೆ. ಬದುಕಲು ಅವಕಾಶ ಮಾಡಿಕೊಡಿ! ನಮಗೂ ಬದುಕುವ ಹಕ್ಕಿದೆ. ಹೀಗೆಂದು ನಮಗೆ ಕೇಳಲೂ ಹಕ್ಕಿಲ್ಲವೇ? ಹೌದು ನಾವು ಮೂಕರು. ಆದರೆ ಮನಸು…. ಮೂಕಲ್ಲ. ಸಹಾಯ ಮಾಡಿ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು

Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು

ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು

ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು

Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

bellary

Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು

ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು

Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.