ಬಹುರೂಪಿ ಗಣಪನ ಸ್ವಾಗತಕ್ಕೆ ಭರ್ಜರಿ ಸಿದ್ಧತೆ


Team Udayavani, Aug 30, 2018, 12:41 PM IST

bell-2.jpg

ಬಳ್ಳಾರಿ: ಗಣೇಶ ಚತುರ್ಥಿಗೆ ಗಣಿನಗರಿ ಭರ್ಜರಿಯಾಗಿ ಸಜ್ಜಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ನಗರದ ವಿವಿಧೆಡೆ ಮಂಟಪ, ವೇದಿಕೆ, ಸಭಾಂಗಣ ನಿರ್ಮಾಣದ ಕಾರ್ಯಗಳು ಭರದಿಂದ ಸಾಗಿವೆ. ನಗರದ ಹೊರ ವಲಯದ ರಾಮೇಶ್ವರ ನಗರದ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಪಶ್ಚಿಮ ಬಂಗಾಳ ಮೂಲದ ಗಣೇಶ ವಿಗ್ರಹ ತಯಾರಕರು ಒಂದು ತಿಂಗಳಿನಿಂದ ಬಿಡಾರ ಹೂಡಿದ್ದು, ತರಹೇವಾರಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಅದರಲ್ಲೂ 10 ರೂ. ನೋಟಿನಲ್ಲಿ ಅರಳಿಸಿರುವ ಗಣೇಶಮೂರ್ತಿ ಯುವಕರ ಗಮನ ಸೆಳೆಯುತ್ತಿದೆ. ಕೇವಲ ಮಣ್ಣಿನಲ್ಲೇ ಸಿದ್ಧಪಡಿಸಿರುವ ಈ ಗಣೇಶಮೂರ್ತಿ ಪರಿಸರ ಸ್ನೇಹಿಯಾಗಿದೆ.

ಕಲ್ಕತ್ತಾ ಮೂಲದ ಮಣ್ಣಿನೊಂದಿಗೆ ಸ್ಥಳೀಯ ಮಣ್ಣನ್ನೂ ಬೆರೆಸಿ ಪರಿಸರ ಸ್ನೇಹಿ ವಿಗ್ರಹ ತಯಾರಿಸಲಾಗುತ್ತಿದೆ. ಐದು ವರ್ಷಗಳ ಹಿಂದೆ ಬಳ್ಳಾರಿಯ ಕನಕದುರ್ಗಮ್ಮ ಮತ್ತು ಸಿಡಿಬಂಡಿ ಮಾದರಿಯಲ್ಲಿ ಗಣೇಶ ಮೂರ್ತಿಯನ್ನು
ಸಿದ್ಧಪಡಿಸಿದ್ದ ಇವರು, ಪ್ರಸಕ್ತ ವರ್ಷ 10 ರೂಪಾಯಿ ನೋಟಿನಲ್ಲಿ ಗಣೇಶ ಮೂರ್ತಿ ತಯಾರಿಸುವ ಮೂಲಕ ಯುವಕರು, ಯುವಕ-ಮಿತ್ರಮಂಡಳಿಗಳ ಗಮನ ಸೆಳೆದಿದ್ದಾರೆ.

ಹೀಗಿದೆ ಗಣೇಶಮೂರ್ತಿ: ಹತ್ತು ರೂಪಾಯಿ ನೋಟಿನ ಮಾದರಿಯಲ್ಲಿ ಸಿದ್ಧಪಡಿಸಲಾಗುತ್ತಿರುವ ಗಣೇಶ ಮೂರ್ತಿಯ ಎಡಕ್ಕೆ ಆನೆಯ ಗುರುತು ಮತ್ತು ಸಿಂಹಘರ್ಜನೆಯ ಮೂರ್ತಿಗಳಿವೆ. ಬಲದಲ್ಲಿ ಗಾಂಧೀಜಿ ಭಾವಚಿತ್ರವಿರುವ ಜಾಗದಲ್ಲಿ ಗಣೇಶ ಮೂರ್ತಿ ಚಿತ್ರಿಸಲಾಗಿದೆ. ಕಲ್ಕತ್ತಾದಿಂದ ತರಲಾಗಿದ್ದ ಮಣ್ಣಿನೊಂದಿಗೆ ಸ್ಥಳೀಯ ಮಣ್ಣನ್ನು ಬೆರೆಸಿ ಸಿದ್ಧಪಡಿಸಲಾಗಿರುವ ಗಣೇಶ ಮೂರ್ತಿಗೆ ರಸಾಯನಿಕ ಸಾಮಗ್ರಿ ಬಳಸದೆ, ನೈಸರ್ಗಿಕ ಬಣ್ಣವನ್ನೇ ಲೇಪನ ಮಾಡಲಾಗುತ್ತಿದೆ. ವಿಗ್ರಹಕ್ಕೆ ಮೊದಲಿಗೆ ಜಿಂಕ್‌ಪೌಡರ್‌ ಲೇಪನ ಮಾಡಲಾಗುತ್ತಿದ್ದು, ಇದರ ಮೇಲೆ ಬಣ್ಣ ಹಚ್ಚಿದರೆ ವಿಗ್ರಹದ ಹೊಳಪು ಮತ್ತಷ್ಟು ಹೆಚ್ಚಲಿದೆ. ಹತ್ತು ರೂಪಾಯಿ ಬಣ್ಣವನ್ನು ಮಾತ್ರ ಸದ್ಯ ಚಲಾವಣೆಯಲ್ಲಿರುವ ನೋಟಿನ ಬಣ್ಣದ ಮಾದರಿಯಲ್ಲೇ ಸಿದ್ಧಪಡಿಸಲಾಗುತ್ತದೆ ಎಂದು ಕಲಾವಿದರು ತಿಳಿಸುತ್ತಾರೆ. ಸ್ಥಳೀಯರೊಬ್ಬರು ಈ ವಿಗ್ರಹ ತಯಾರಿಸುತ್ತಿದ್ದು, ನಗರದ ರಾಯಲ್‌ ಕಾಲೋನಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಎನ್ನಲಾಗುತ್ತಿದೆ.

ಪಶ್ಚಿಮ ಬಂಗಾಳದ ಕಲಾವಿದರು: ಗಣೇಶ ಹಬ್ಬದ ನಿಮಿತ್ತ ನಗರಕ್ಕೆ ಆಗಮಿಸಿರುವ ಪಶ್ಚಿಮ ಬಂಗಾಳದ ಹತ್ತಾರು ಯುವಕರು ಕಳೆದೊಂದು ತಿಂಗಳಿಂದ ಬಿಡಾರ ಹೂಡಿದ್ದು, ಗಣೇಶ ವಿಗ್ರಹಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಪಿಒಪಿ ವಿಗ್ರಹಗಳ ತಯಾರಿಕೆ, ಮಾರಾಟಕ್ಕೆ ಸ್ಥಳೀಯ ಜಿಲ್ಲಾಡಳಿತ ಬ್ರೇಕ್‌ ಹಾಕಿರುವುದರಿಂದ ಸ್ಥಳೀಯ ಯುವಕರು, ಗಣೇಶ ಮಿತ್ರ ಮಂಡಳಿಗಳು ಸಹ ಮಣ್ಣಿನ ಗಣೇಶಮೂರ್ತಿಯನ್ನೇ ತಾವು ಕೋರುವ ಮಾದರಿಯಲ್ಲೇ ತಯಾರಿಸಿಕೊಡುವಂತೆ ಸೂಚಿಸುತ್ತಿದ್ದ ಹಿನ್ನೆಲೆಯಲ್ಲಿ ತಾವು ಸಹ ಹೆಚ್ಚು ಮಣ್ಣಿನ ವಿಗ್ರಹಗಳನ್ನು ಸಿದ್ಧಪಡಿಸುವಲ್ಲೇ
ನಿರತರಾಗಿದ್ದೇವೆ. ಈಗಾಗಲೇ 60ಕ್ಕೂ ಹೆಚ್ಚು ವಿಗ್ರಹಗಳನ್ನು ಸಿದ್ಧಪಡಿಸಿದ್ದೇವೆ. ವಿಗ್ರಹಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿರುವ ಹಿನ್ನೆಲೆಯಲ್ಲಿ ಯುವಕರು ಈಗಿನಿಂದಲೇ ಮುಂಗಡ ಹಣ ನೀಡಿ ತಮಗಿಷ್ಟವಾದ ವಿಗ್ರಹಗಳನ್ನು ನಿಗದಿಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಗ್ರಹ ತಯಾರಕ ಚಂದನ್‌ ಮತ್ತು ಪ್ರದೀಪ್‌ ತಿಳಿಸಿದ್ದಾರೆ.

ಪಿಒಪಿ ಪರಿಸರಕ್ಕೆ ಹಾನಿ: ಮಣ್ಣಿನ ಮೂರ್ತಿಗಳ ಭರಾಟೆ ಕಡಿಮೆಯಾಗಿದ್ದರಿಂದ ಕಳೆದ ವರ್ಷ ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆದರೆ, ಪಿಒಪಿಗೂ ಮಣ್ಣಿನ ಮೂರ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅತ್ಯಂತ ಚಿಕ್ಕದಾದ ಗಣಪತಿಗೆ ಅತ್ಯಂತ ದುಬಾರಿ ದರ ತೆರಬೇಕಾಗಿತ್ತು. ಆದರೆ, ಮಣ್ಣಿನಿಂದ ತಯಾರಿಸಿದ ಗಣಪತಿಗೆ ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು. ಹಾಗೂ ಪರಿಸರ ಸ್ನೇಹಿಯಾಗಿರುತ್ತದೆ. ಹೀಗಾಗಿ ಮಣ್ಣಿನ ಮೂರ್ತಿಯನ್ನೇ ಪ್ರತಿಷ್ಠಾಪಿಸುವುದಾಗಿ ನಿರ್ಧರಿಸಲಾಗಿದ್ದು, ಅದಕ್ಕಾಗಿ ವಿಗ್ರಹ ಖರೀದಿಸಲು ಆಗಮಿಸಿದ್ದೇವೆ ಎಂದು ವಿನಾಯಕ ನಗರ ಯುವಕ ಮಹೇಶ್‌ ತಿಳಿಸಿದ್ದಾರೆ.

ಗಣೇಶಮೂರ್ತಿಗಳ ತಯಾರಿಕೆ ಹೇಗೆ?
ಮೊದಲು ಭತ್ತದ ಹುಲ್ಲಿನಿಂದ ಗಣೇಶ ಮೂರ್ತಿಯ ಮಾದರಿಯನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಬಳಿಕ ಸ್ಥಳೀಯವಾಗಿ ದೊರೆಯುವ ಮಣ್ಣಿನೊಂದಿಗೆ ಕಲ್ಕತ್ತಾದಿಂದ ತರಲಾಗಿದ್ದ ಮಣ್ಣನ್ನು ಮಿಶ್ರಣ ಮಾಡಿ, ಹುಲ್ಲಿನ ಮೇಲೆ ಮೆತ್ತಲಾಗುತ್ತದೆ. ನಂತರ ಇದರ ಮೇಲೆ ಜಿಂಕ್‌ಪೌಡರ್‌ ಲೇಪನ ಮಾಡಲಾಗುತ್ತದೆ. ವಿಗ್ರಹಗಳು ಮತ್ತಷ್ಟು ಹೊಳೆಯುವ ಸಲುವಾಗಿ ಕೊನೆಯದಾಗಿ ಜಾಜಿ ಬಣ್ಣದ ಮಣ್ಣನ್ನು ಲೇಪಿಸಿ, ಅದರ ಮೇಲೆ ನೈಸರ್ಗಿಕವಾದ ಬಣ್ಣವನ್ನು ಲೇಪಿಸಲಾಗುತ್ತದೆ.

ಕಳೆದ ಕೆಲ ವರ್ಷಗಳಿಂದ ಪಶ್ಚಿಮ ಬಂಗಾಳದಿಂದ ಆಗಮಿಸಿ ಬಳ್ಳಾರಿಯಲ್ಲಿ ಗಣೇಶ ವಿಗ್ರಹ ತಯಾರಿಸಲಾಗುತ್ತಿದೆ. ನಮ್ಮ ವಿಗ್ರಹಗಳಿಗೆ ಬಳ್ಳಾರಿಯಲ್ಲಿ ಉತ್ತಮ ಬೇಡಿಕೆಯಿದ್ದು, ಸ್ಥಳೀಯರು ಮುಂಗಡವಾಗಿ ಹೇಳಿ ವಿಗ್ರಹ ತಯಾರಿಸಿಕೊಳ್ಳುತ್ತಾರೆ. ಅಲ್ಲದೇ, ಪ್ರಸಕ್ತ ವರ್ಷ ಪಿಒಪಿ ವಿಗ್ರಹಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಬ್ರೇಕ್‌ ಹಾಕಿದ್ದರಿಂದ ಕೇವಲ ಮಣ್ಣಿನಿಂದ ಮಾತ್ರ ಗಣೇಶ ವಿಗ್ರಹ ತಯಾರಿಸುತ್ತಿದ್ದು, ಅದಕ್ಕೆ ಸ್ಥಳೀಯ ಯುವಕರು ಸಹ ಮಣ್ಣಿನ ವಿಗ್ರಹಗಳನ್ನೇ ಕೇಳುತ್ತಿದ್ದಾರೆ.
ಚಂದನ್‌, ಪ್ರದೀಪ್‌, ವಿಗ್ರಹ ತಯಾರಕರು.

ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.