ಮಕ್ಕಳಲ್ಲಿನ ಪ್ರತಿಭೆ ಪ್ರೋತ್ಸಾಹಿಸಿ
Team Udayavani, Sep 15, 2018, 2:55 PM IST
ಸುರಪುರ: ಮಕ್ಕಳಲ್ಲಿ ವಿವಿಧ ವಿಷಯಗಳ ಕುರಿತು ಕಲಿಕಾ ಆಸಕ್ತಿ ಹೆಚ್ಚಿಸುವಲ್ಲಿ ಕಲಿಕಾ ಮೇಳ ಲಾಭದಾಯಕವಾಗಿವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ ಕಲಿಕಾ ಮೇಳ ಆಯೋಜಿಸಿರುವ ಎಪಿಎಫ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಪಂ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ ಹೇಳಿದರು.
ತಾಲೂಕಿನ ರತ್ತಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮಜೀ ಫೌಂಡೇಷನ್ ಹಮ್ಮಿಕೊಂಡಿದ್ದ ವಿವಿಧ ವಿಷಯಗಳ ಕಲಿಕಾ ಮೇಳದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಮೇಳಗಳು ಮಕ್ಕಳಲ್ಲಿ ಕಲಿಕಾ ಕೌಶಲ್ಯ ಸಾಮರ್ಥ್ಯ ಹೆಚ್ಚಿಸುವ ಮೂಲಕ ಶಿಕ್ಷಕರಲ್ಲಿ ಉತ್ಸಾಹ ಮೂಡಿಸುತ್ತವೆ.
ಪಾಲಕರು ಕೂಡ ಮೇಳದಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಪ್ರತಿಭೆಯನ್ನು ವೀಕ್ಷಿಸಲು ಅನೂಕೂಲ ಆಗುತ್ತದೆ. ಇದರಿಂದ
ಪಾಲಕರಿಗೆ ಮಕ್ಕಳ ಕಲಿಕೆ ಕುರಿತು ಹೆಚ್ಚಿನ ಕಾಳಜಿ ವಹಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ ಮಾತನಾಡಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ವಿಷಯವಾರು ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಮೇಳಗಳು ನೆರವಿಗೆ ಬರುತ್ತವೆ. ತಮ್ಮಲಿ ಅಡಗಿರುವ ಸೂಪ್ತ ಪ್ರತಿಭೆ ಹೊರ ಹಾಕಲು ಮೇಳಗಳು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಈ ಮೇಳಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ ಮಾತನಾಡಿ, ಮೇಳದ
ಯಶಸ್ಸಿನ ಹಿಂದೆ ಶಿಕ್ಷಕರ ಮತ್ತು ಮಕ್ಕಳ ಶ್ರಮ ಅಪಾರವಾಗಿದೆ. ಇದಕ್ಕೆ ಪೂರಕವಾಗಿ ಎಲ್ಲಾ ನೆರವು ನೀಡಿ ಸಹಕರಿಸಿದ ಎಫ್ಎಫ್ ಸಂಸ್ಥೆ ಸೇವೆ ಅನನ್ಯವಾಗಿದೆ ಎಂದು ಬಣ್ಣಿಸಿದರು. ಮೇಳದಲ್ಲಿ ವಿಜಾನ, ಸಮಾಜ, ಗಣಿತ, ಇಂಗ್ಲಿಷ, ಹಿಂದಿ, ವಿಷಯಗಳಿಗೆ ಸಂಬಂದಪಟ್ಟ 30ಕ್ಕೂ ಹೆಚ್ಚು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಎಪಿಎಫ್ ತಾಲೂಕು ಸಂಚಾಲಕ ಅನ್ವರ ಜಮೇದಾರ, ಎಸ್ಡಿಎಂಸಿ ಅಧ್ಯಕ್ಷ ಭೀಮಣ್ಣ ಮೇಸ್ತ್ರೀ, ಗ್ರಾಪಂ ಅಧ್ಯಕ್ಷ
ಮಾಳಪ್ಪ ಆಡಿನ್, ಶಿಕ್ಷಕರಾದ ಸಾಲೇಹ ಯಾಸ್ಮಿನ, ಚಂದ್ರಕಲಾ, ಶ್ವೇತಾ, ಶೈಲಾ, ಭೀಮರಾಯ, ವೀರೇಶ್, ಅರ್ಜುನ, ಭೀಮಶೆಪ್ಪ, ವಿನೋದ ಕುಮಾರ, ಗೌತಮ, ಪರಮಣ್ಣ ಇದ್ದರು. ಮುಖ್ಯಗುರು ದೇವರಾಜ ಪಾಟೀಲ ಸ್ವಾಗತಿಸಿದು. ಸಿಆರ್ಪಿ ಷಣ್ಮೂಖಪ್ಪ ನುಚ್ಚಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ