ಒತ್ತಡ ನಿವಾರಣೆಗೆ ಯೋಗ ಮದ್ದು
Team Udayavani, Nov 26, 2018, 3:49 PM IST
ಬಳ್ಳಾರಿ: ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿ ಮತ್ತು ಯುವಕರು ಅನೇಕ ಒತ್ತಡಕ್ಕೆ ಸಿಲುಕಿ ಆರೋಗ್ಯವನ್ನು ಹದಗೆಡೆಸಿಕೊಳ್ಳುತ್ತಿದ್ದಾರೆ. ಒತ್ತಡದ ನಿವಾರಣೆಗಾಗಿ ನಿತ್ಯ ಒಂದು ತಾಸು ಯೋಗಾಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಉತ್ತಮ ಆರೋಗ್ಯ ಕಂಡುಕೊಳ್ಳಬೇಕೆಂದು ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಹೇಳಿದರು.
ನಗರದ ಮುನ್ಸಿಪಲ್ ಮೈದಾನದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಬಿಮಾನ್, ಯುವಭಾರತ್ ಕಿಸಾನ್ ಸಮಿತಿ, ಹಾಗೂ ಮಹಿಳಾ ಯೋಗ ಸಮಿತಿ, ವಿವಿಧ ಕನ್ನಡ ಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಯೋಗ ಮ್ಯಾರಥಾನ್ ಜಾಥಾಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯುವಭಾರತ್ ಅಧ್ಯಕ್ಷ ಲಕ್ಷ್ಮೀರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಮೌನಾಚರಣೆ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಜಾಥಾವು ಮುನ್ಸಿಪಲ್ ಮೈದಾನದಿಂದ ರಾಯಲ್ ಸರ್ಕಲ್, ಬ್ರೂಸ್ ಪೇಟೆ, ಮೋತಿ ಸರ್ಕಲ್, ಸ್ಟೇಷನ್ ರಸ್ತೆ, ರಾಜಕುಮಾರ್ ರಸ್ತೆ ಮೂಲಕ ತೆರಳಿ ಮೈದಾನಕ್ಕೆ ಬಂದು ಸಮಾವೇಶಗೊಂಡಿತು.
ಪಾಲಿಕೆ ಸದಸ್ಯ ಮಲ್ಲನಗೌಡ, ಪತಂಜಲಿ ಸಮಿತಿ ಜಿಲ್ಲಾಧ್ಯಕ್ಷ ಪಿ.ಎಂ.ನಟರಾಜ್, ಸಂಯೋಜಕರಾದ ಇಸ್ವಿ ಪಂಪಾಪತಿ,
ಕಣೆಕಲ್ ಎರ್ರಿಸ್ವಾಮಿ, ಕಿಸಾನ್ ಸಮಿತಿ ಅಧ್ಯಕ್ಷ ಎಸ್.ಪಿ.ಚಂದ್ರೇಗೌಡ, ಸ್ವಾಬಿಮಾನ್ ಅಧ್ಯಕ್ಷ ಅಶೋಕ್ದಿನ್ನಿ, ಕೃಷ್ಣಮೂರ್ತಿ, ಸಂತೋಷ್ ಮೆಹತಾ, ಕಿರಣ್, ವೇಮಣ್ಣ, ದೊಡ್ಡಗಟ್ಟಿ ಶಿವಪ್ಪ, ಶಿವರಾಜ್, ಗೋವಿಂದ, ಪ್ರಾಚಾರ್ಯ ಸಿದ್ದರಾಮನಗೌಡ, ಕಟ್ಟೆಗೌಡ, ರಾಮಕಿರಣ್, ವೆಂಕಟೇಶ್ವರರಾವ್, ಜಾಕೀರ್ ಸೇರಿದಂತೆ 28 ಕೇಂದ್ರಗಳ ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು, ಪ್ರಭಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಂಪ್ಲಿ: ಪತಂಜಲಿ ಯೋಗ ಸಮಿತಿ ಕಂಪ್ಲಿ ತಾಲೂಕು ಸಮಿತಿ ವತಿಯಿಂದ ಭಾನುವಾರ ಬೆಳಗಿನ ಜಾವ ಪಟ್ಟಣದಲ್ಲಿ
ಬೃಹತ್ ಯೋಗ ಮ್ಯಾರಥಾನ್ (ಯೋಗ ನಡಿಗೆ) ಏರ್ಪಡಿಸಿದ್ದರು. ಇಂದು ಬೆಳಗ್ಗೆ ಪಟ್ಟಣದ ವೀರಶೈವ ಸಂಘದ ಶಾರದಾ ಶಾಲೆಯ ಆವರಣದಲ್ಲಿ ದೈನಂದಿನ ಯೋಗಾಭ್ಯಾಸದ ನಂತರ ಕಂಪ್ಲಿ ಸಿಪಿಐ ಡಿ.ಹುಲುಗಪ್ಪ ಬೃಹತ್ ಯೋಗಾ ಮ್ಯಾರಥಾನ್ಗೆ ಚಾಲನೆ ನೀಡಿದರು.
ನಂತರ ಪಟ್ಟಣದ ನೂರಾರು ಯೋಗ ಸಾಧಕರು, ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿ
ಪದಾಧಿ ಕಾರಿಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಯೋಗ ನಡಿಗೆ ನಡೆಸಿದರು. ಕೊನೆಗೆ ಪಟ್ಟಣದ ಸತ್ಯನಾರಾಯಣ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಮಾವೇಶಗೊಂಡಿತು. ಈ ವೇಳೆ ಮಾತನಾಡಿದ ಸಿಪಿಐ ಡಿ.ಹುಲುಗಪ್ಪ, ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.
ಯುವಕರನ್ನು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಉತ್ತಮ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಮಿತಿಯವರು ಯೋಗ ಕೇಂದ್ರಗಳನ್ನು ಆರಂಭಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆ.ಎಂ.ಹೇಮಯ್ಯಸ್ವಾಮಿ, ಡಿ.ಮೌನೇಶ್, ಟಿ.ಕೊಟ್ರೇಶ್, ಕೆ.ನಾಗಪ್ಪ, ಐ.ಶಾಂತಮೂರ್ತಿಗೌಡ, ಕೊಟ್ರೇಶ್, ಕಲ್ಗುಡಿ ರತ್ನಮ್ಮ, ಶ್ಯಾಮಲಮ್ಮ, ನಾಗರತ್ನಮ್ಮ, ಶಶಿಕಲಾ, ಬಸಮ್ಮ, ಪರಮೇಶ್ವರಪ್ಪ, ಯಣ್ಣಿ ಮಂಜುನಾಥ್, ಕಿಶೋರ್, ಭೀಮನಗೌಡ, ಮೋಹನ್ ವರಪ್ರಸಾದ್, ಸತೀಶ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು
ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು
Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು
Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು
Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ