ವಿರೂಪಾಕ್ಷೇಶ್ವರ-ಪಂಪಾದೇವಿ ಹೇಮಕೂಟ ಪ್ರದಕ್ಷಿಣೆ


Team Udayavani, Jan 17, 2019, 7:20 AM IST

bell-2.jpg

ಹೊಸಪೇಟೆ: ಉತ್ತರಾಯಣ ಪುಣ್ಯಕಾಲದಲ್ಲಿ ಆರಂಭಗೊಂಡಿರುವ ಮಕರ ಸಂಕ್ರಮಣದ ಅಂಗವಾಗಿ ಹಂಪಿಯ ಶ್ರೀವಿರೂಪಾಕ್ಷೇಶ್ವರಸ್ವಾಮಿ ಹಾಗೂ ಪಂಪಾಂಬಿಕಾದೇವಿ ಉತ್ಸವ ಮೂರ್ತಿಗಳ ಹೇಮಕೂಟ ಪ್ರದಕ್ಷಿಣೆ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

ಗಜ ವಾಹನಾರೂಢ ಉತ್ಸವ ಮೂರ್ತಿಗಳ ಶ್ರೀವಿರೂಪಾಕ್ಷ ದೇವಾಲಯದ ಪ್ರದಕ್ಷಿಣೆಯ ನಂತರ ಹೇಮಕೂಟ ಪ್ರದಕ್ಷಿಣೆ ಆರಂಭವಾಯಿತು. ದೇವಾಲಯದ ಪಟ್ಟದ ಆನೆ ಲಕ್ಷ್ಮೀ ನೇತೃತ್ವದಲ್ಲಿ ದೇವಾಲಯದ ಪುರೋಹಿತರು, ಭಕ್ತರು, ಮಂಗಳವಾದ್ಯ, ದೀವಟಿಗೆಗಳನ್ನು ಒಳಗೊಂಡ ಫ‌ಲಕ್ಕಿ ಮೆರವಣಿಗೆ ಶ್ರೀವಿರೂಪಾಕ್ಷ ರಥ ಬೀದಿ, ಹೇಮಕೂಟ ರಸ್ತೆ, ಕಡ್ಡಿರಾಂಪುರ ರಸ್ತೆ, ನಂತರ ಶ್ರೀಗಾಯತ್ರಿ ಪೀಠದ ಹಿಂಭಾಗ, ಎಂ.ಪಿ.ಪ್ರಕಾಶ ನಗರ, ತುಂಗಭದ್ರಾ ನದಿ ತೀರ, ಮನ್ಮುಖ ಹೊಂಡಗಳನ್ನು ಪ್ರದಕ್ಷಿಣೆ ಹಾಕಿ ತೇರಿನವರೆಗೆ ತೆರಳಿ ಆನಂತರ ದೇವಾಲಯದ ಆವರಣ ಪ್ರವೇಶಿಸಿತು.

ಬಳಿಕ ಕಲ್ಯಾಣ ಮಂಟಪದಲ್ಲಿ ಉತ್ಸವ ಮೂರ್ತಿಗಳಿಗೆ ತೊಟ್ಟಿಲು ಸೇವೆ, ಏಕಾಂತ ಸೇವೆಗಳನ್ನು ಸಲ್ಲಿಸುವ ಮೂಲಕ ಈ ವಿಶೇಷ ಆಚರಣೆ ಪೂರ್ಣಗೊಂಡಿತು.

ಹೇಮಕೂಟ ಪ್ರದಕ್ಷಿಣೆ ಕಾರ್ಯಕ್ರಮದ ಮಾರ್ಗದುದ್ದಕ್ಕೂ ಬರುವ ಎಪ್ಪತ್ತಕ್ಕೂ ಅಧಿಕ ದೇವತೆಗಳಿಗೆ ತೆಂಗಿನಕಾಯಿ ನೈವೇದ್ಯ, ಕರ್ಪೂರ ಆರತಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಜಾತಿ, ಧರ್ಮಗಳ ಬೇಧವಿಲ್ಲದೇ ವಿವಿಧ ಸಮುದಾಯಗಳ ಜನರು ತಮ್ಮ ಮನೆಯ ಮುಂದೆ ಆಗಮಿಸಿದ ದೇವರಿಗೆ ಎಳ್ಳು ಸಕ್ಕರೆ, ಕಬ್ಬು, ಹೂಗಳು, ತೆಂಗಿನಕಾಯಿ, ಕರ್ಪೂರ ಸಮರ್ಪಿಸಿದರು.

ಲೋಕ ಕಲ್ಯಾಣಾರ್ಥ ಗ್ರಾಮದ ಸುಭೀಕ್ಷೆ, ಸಮೃದ್ಧ ಮಳೆ-ಬೆಳೆಗಾಗಿ ಅಂದು ವಿಜಯನಗರ ಸಾಮ್ರಾಜ್ಯದ ಅರಸರು ಶ್ರೀವಿರೂಪಾಕ್ಷ ಸ್ವಾಮಿ ಹಾಗೂ ಪಂಪಾದೇವಿಯರ ಉತ್ಸವ ಮೂರ್ತಿಗಳ ಹೇಮಕೂಟ ಗಿರಿ ಪ್ರದಕ್ಷಿಣೆ ಮಾಡುವ ಸಂಪ್ರದಾಯ ಆರಂಭಿಸಿದರು.

ಈ ಸಂಪ್ರದಾಯವನ್ನು ಇಂದಿಗೂ ಧಾರ್ಮಿಕ ದತ್ತಿ ಇಲಾಖೆ, ದೇವಾಲಯ ಸಮಿತಿ, ಹಂಪಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಂದ ಈ ವಿಶೇಷ ಉತ್ಸವವನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಡನೆ ಜರುಗಿಸಲಾಗುತ್ತಿದೆ. ವರ್ಷದಲ್ಲಿ ಎರಡು ಬಾರಿ ಅಂದರೆ ಮಕರ ಸಂಕ್ರಾಂತಿ ಹಾಗೂ ವೈಶಾಖ ಹುಣ್ಣಿಮೆಯ ದಿನ ಹೇಮಕೂಟ ಗಿರಿ ಪ್ರದಕ್ಷಿಣೆಯನ್ನು ಜರುಗಿಸುತ್ತೇವೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ರಾವ್‌ ತಿಳಿಸಿದರು.

ಹೇಮಕೂಟ ಗಿರಿ ಪ್ರದಕ್ಷಿಣೆಯ ವಿಧಿ ವಿಧಾನಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ಪಿ.ಶ್ರೀನಾಥ ಶರ್ಮಾ, ಮುರಳೀಧರ ಶಾಸ್ತ್ರಿ, ಜೆ.ಎಸ್‌.ಶ್ರೀನಾಥ್‌, ಸಹಾಯಕರಾದ ಮಂಜುನಾಥ್‌, ಅರುಣ್‌ಕುಮಾರ್‌, ಪ್ರಶಾಂತ್‌ ನೆರವೇರಿಸಿದರು. ದೆವಾಲಯ ಸಮಿತಿಯ ಶ್ರೀನಿವಾಸ್‌ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು

Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು

ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು

ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು

Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

bellary

Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು

ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು

Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.