ಶಾಸಕ ಗಣೇಶ್ ಬಂಧನಕ್ಕೆ ಒತ್ತಾಯ
Team Udayavani, Jan 24, 2019, 8:32 AM IST
ಹೊಸಪೇಟೆ: ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರವನ್ನು ಖಂಡಿಸಿದ ಶ್ರೀಮಹಾರಾಣ ಪ್ರತಾಪ ಸಂಘದ ಸದಸ್ಯರು, ಹಲ್ಲೆ ನಡೆಸಿದ ಕಂಪ್ಲಿ ಶಾಸಕ ಗಣೇಶ್ ಅವರನ್ನು ಕೂಡಲೇ ಬಂಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬುಧವಾರ ತಹಶೀಲ್ದಾರ್ ಎಚ್.ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.
ಶಾಸಕ ಆನಂದ್ ಸಿಂಗ್ ಸುಮಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಜನ ಪ್ರಿಯತೆಯನ್ನುಗಳಿಸಿದ್ದವರು. ಜತೆಗೆ ಮೂರು ಬಾರಿ ಶಾಸಕರಾಗಿ ಒಂದು ಮಂತ್ರಿಯಾದರು. ಎಲ್ಲಾ ಜಾತಿ ಸಮುದಾಯದವರಿಗೆ ಸಮನಾದ ವೇದಿಕೆ ಕಲ್ಪಿಸುತ್ತಿದ್ದ ಶಾಸಕ ಆನಂದ್ಸಿಂಗ್ ಅವರ ಮೇಲೆ ಅಮಾನುಷ್ಯವಾಗಿ ಹಲ್ಲೆ ನಡೆಸಿರುವುದು ಖಂಡನಿಯ. ಹಾಗಾಗಿ ಹಲ್ಲೆ ನಡೆಸಿರುವ ಶಾಸಕ ಗಣೇಶ ಅವರನ್ನು ಶೀಘ್ರವೇ ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದರೆ ಶ್ರೀ ಮಹಾರಾಣ ಪ್ರತಾಪ ಸಂಘ ಹಾಗೂ ಆನಂದ್ ಸಿಂಗ್ ಅಭಿಮಾನಿ ಬಳಗದಿಂದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆರ್.ಜಿತೇಂದ್ರ ಸಿಂಗ್, ಕಾರ್ಯದರ್ಶಿ ಜಯಸಿಂಗ್ ಮೂಲಿಮನಿ ಇನ್ನಿತರರಿದ್ದರು.
ಗಣೇಶ್ ಅಮಾನತು ಆದೇಶ ಹಿಂಪಡೆಯಲು ಒತ್ತಾಯ
ಕಂಪ್ಲಿ: ಶಾಸಕ ಜೆ.ಎನ್.ಗಣೇಶ್ ವಿರುದ್ಧ ದಾಖಲಿಸಿರುವ ಮೊಕದಮ್ಮೆ ಹಾಗೂ ಕೆಪಿಸಿಸಿಯಿಂದ ಮಾಡಿರುವ ಅಮಾನತು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಜೆ.ಎನ್.ಗಣೇಶ್ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಕೆಪಿಸಿಸಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಹೊಸಕೋಟೆ ಜಗದೀಶ್, ಜೆ.ಎನ್.ಗಣೇಶ್ ಮತ್ತು ಆನಂದಸಿಂಗ್ ಶಾಸಕರಿಬ್ಬರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿಧಾನಸಭಾ ಚುನಾವಣೆಯಲ್ಲಿ ಗಣೇಶ್ ಅವರು ಗೆಲುವು ಸಾಧಿಸುವಲ್ಲಿ ಆನಂದಸಿಂಗ್ ಅವರ ಬೆಂಬಲವಿದೆ. 20 ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಸ್ನೇಹಿತರಾಗಿ ಕೆಲಸ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚೆಗೆ ಯಾವುದೋ ವಿಷಯವಾಗಿ ಗಲಾಟೆ ನಡೆದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ವೈ.ಘೋರ್ಪಡೆ, ಶಾಸಕ ಜೆ.ಎನ್.ಗಣೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಬೇಸರ ಉಂಟಾಗಿದೆ. ಕೂಡಲೇ ಅಮಾನತು ಆದೇಶ ಹಿಂಪಡೆದು ಅವರ ಮೇಲೆ ದಾಖಲಾಗಿರುವ ಮೊಕದ್ದಮೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಶಾಸಕ ಆನಂದಸಿಂಗ್ ಮತ್ತು ಶಾಸಕ ಜೆ.ಎನ್.ಗಣೇಶ್ ಅವರನ್ನು ಒಂದುಗೂಡಿಸಬೇಕಾಗಿದೆ. ಇಬ್ಬರು ಶಾಸಕರನ್ನು ಒಗ್ಗೂಡಿಸಿ, ಮೊದಲಿನಂತೆ ಪಕ್ಷ ಕಟ್ಟೋಣ. ಶಾಸಕ ಗಣೇಶ್ ಅವರು ಮಾಡಿದ ತಪ್ಪು ಮನ್ನಿಸಿ, ಘಟನೆಯನ್ನು ಪುನರ್ ಪರಿಶೀಲಿಸಿ, ಗಣೇಶ್ ವಿರುದ್ಧ ಕೈಗೊಂಡ ಅಮಾನತು ಆದೇಶ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆ.ಎನ್.ಗಣೇಶ್ ಅಭಿಮಾನಿಗಳ ಬಳಗದ ಬಿ.ಹರ್ಷವರ್ಧನ, ಎನ್.ವಾಸು, ರಾಮಲಿಸ್ವಾಮಿ, ವೀರಾಂಜಿನೇಯಲು, ಆನಂದ, ಮಾವಿನಹಳ್ಳಿ ರಮೇಶ್, ಹರೀಶಗೌಡ, ಪುರುಷೋತ್ತಮಗೌಡ, ಕನಕಗಿರಿ ರೇಣುಕಗೌಡ, ಎಂ.ಮಾರುತಿ, ಮೆಟ್ರಿ ಗಿರೀಶ್, ಯರ್ರಿಸ್ವಾಮಿ, ಜಗದೀಶ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ