ಇಂದು ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆ


Team Udayavani, Feb 22, 2019, 11:18 AM IST

bell-1.jpg

ಹೂವಿನಹಡಗಲಿ: ನಾಡಿನ ಹೆಸರಾಂತ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಫೆ.22 ಶುಕ್ರವಾರ ಸಂಜೆ ನಡೆಯಲಿದೆ. ಜಾತ್ರೆಗಾಗಿ ನಾಡಿನ ವಿವಿಧ ಮೂಲೆ ಮೂಲೆಗಳಿಂದಲೂ ಭಕ್ತ ಸಮೂಹ ಹರಿದು ಬರುತ್ತಿದೆ. ಸುಕ್ಷೇತ್ರಕ್ಕೆ ಆಗಮಿಸಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಕ್ತರು ವಿಶೇಷವಾಗಿ ಪಾಲ್ಗೊಳ್ಳುವುದು. ಜಾತ್ರೆಯ ಸಂಪ್ರದಾಯಗಳಲ್ಲಿ ಒಂದಾಗಿದೆ.

ಆ ಹಿನ್ನೆಲೆಯಲ್ಲಿ ಭಕ್ತರು ತಮ್ಮ ಗ್ರಾಮಗಳಿಂದಲೂ ಜಾತ್ರೆಗೆ ಬರುವ ಸಂದರ್ಭದಲ್ಲಿ ಕಟ್ಟಿಕೊಂಡು ಬಂದಿರುವ ಬುತ್ತಿಯನ್ನು ಮೀಸಲು ಬುತ್ತಿ ಎಂದು ಮೊದಲು ಸ್ವಾಮಿಗೆ ಸಮರ್ಪಣೆ ಮಾಡುವುದು ಮೈಲಾರಲಿಂಗ ಸಂಪ್ರದಾಯಗಳಲ್ಲಿ ಒಂದು. ಹೀಗಾಗಿ ಭಕ್ತರು ತಾವು ತಂದಿರುವ ಮೀಸಲು ಬುತ್ತಿಯನ್ನು ದೇವಸ್ಥಾನದ ಮುಂದೆ ಕುಳಿತಿರುವ ಗೊರವಯ್ಯವರ ದೋಣಿಗೆ ಹಾಕುವ ಮೂಲಕ ದೋಣಿಗೆ ಮೀಸಲು ಬುತ್ತಿ ನೀಡುವುದು ವಾಡಿಕೆ. ನಂತರದಲ್ಲಿ ಜಾತ್ರೆಗಾಗಿ ನಡೆದುಕೊಂಡು ಬರುವುದು ಜಾತ್ರೆಯ ಸಂಪ್ರದಾಯಗಳಲ್ಲಿ ಒಂದು. 

ಭಕ್ತರು ತಾವು ಬೇಡಿಕೊಂಡಿದ್ದನ್ನು ಇಷ್ಟಾರ್ಥಿ ಸಿದ್ಧಿಗಾಗಿ ಜಾತ್ರೆಯ ಬಂಡಿ ಜೊತೆಯಲ್ಲಿ ಒಬ್ಬರು ಕಾಲ್ನಡಿಗೆಯಲ್ಲಿ ಬರುವುದಾಗಿ ಹರಕೆ ಹೊತ್ತಿರುತ್ತಾರೆ. ಅದರಂತೆ ಸುಕ್ಷೇತ್ರ ಮೈಲಾರಕ್ಕೆ ಕಾಲ್ನಡಿಗೆಯಲ್ಲಿ ಬಂದು ತಲುಪಿದ ತಕ್ಷಣ ದೂಳ್‌ ದುಡ್ಡು ಎಂದು ಕಾರ್ಣಿಕದ ಹುಂಡಿಗೆ ತಮಗೆ ಅನುಕೂಲವಾಗುಷ್ಟು ಕಾಣಿಕೆ ಹಾಕುತ್ತಾರೆ. ನಂತರದಲ್ಲಿ ದೇವರ ಸೇವೆ ಮಾಡುವ ಸಂಪ್ರದಾಯದಲ್ಲಿ ದೀವಟಿಗೆ ಬೆಳಗುವುದು. ಕುದುರೆ ಕಾರು ಸೇವೆ ಮಾಡುವುದು. ಹೀಗೆ ವಿಶಿಷ್ಟ ಧಾರ್ಮಿಕ ಸೇವೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.

ಮಾರನೇಯ ದಿವಸ ತಾವು ಬೀಡು ಬಿಟ್ಟಿದ್ದ ಜಾತ್ರೆಯ ಸ್ಥಳದಿಂದಲೇ ಮೀಸಲು ಬುತ್ತಿಯನ್ನು ಮಾಡಿಕೊಂಡು ದೋಣಿ ತುಂಬಿಸುವ ಕಾರ್ಯವನ್ನು ಮಾಡುತ್ತಾರೆ. ಅ ಸಂದರ್ಭದಲ್ಲಿ ಹಣ್ಣು- ತುಪ್ಪ ನೀಡುವುದು ಮೈಲಾರಲಿಂಗ ಸ್ವಾಮಿ ಸಂಪ್ರದಾಯಗಳಲ್ಲಿ ಒಂದಾಗಿದೆ. 

ಅಲ್ಲದೆ ಬೆಲ್ಲದ ಬಂಡಿ ಸೇವೆ ಎಂದು ಭಕ್ತರು ಸುಕ್ಷೇತ್ರದಲ್ಲಿ ಹರಿಯುತ್ತಿರುವ ತುಂಗಾಭದ್ರಾ ನದಿಗೆ ಬೆಳಗ್ಗೆ ಮಡಿಯಿಂದ ಹೋಗಿ ಗಂಗೆಗೆ ಪೂಜೆ ಮಾಡಿ ಎತ್ತಿನ ಬಂಡಿಯಲ್ಲಿ ನದಿ ನೀರನ್ನು ತುಂಬಿಕೊಂಡು ಅದಕ್ಕೆ ತಕ್ಕದಾದ ಪ್ರಮಾಣದಲ್ಲಿ ಬೆಲ್ಲ ಮಿಶ್ರಣ ಮಾಡಿ ಬೆಲ್ಲದ ನೀರನ್ನು ಕಾರ್ಣಿಕ ನುಡಿಯುವ ಡೆಂಕನ ಮರಡಿಗೆ ಕೊಂಡೊಯ್ದು ಭಕ್ತರಿಗೆ ವಿತರಣೆ ಆಡುತ್ತಾರೆ. ಇದರಿಂದಾಗಿ ಎಲ್ಲವೂ ಒಳಿತಾಗುತ್ತದೆ ಎನ್ನುವುದು ನಂಬಿಕೆಯಾಗಿದೆ.

ರೈತರ ಜಾತ್ರೆ: ಪ್ರಸ್ತುತ ಜಾತ್ರೆಯಲ್ಲಿ ಎಲ್ಲಾ ವರ್ಗದ ಜಾತಿ, ಜನಾಂಗದವರು ಬಂದು ಸೇರುತ್ತಾರೆಯಾದರೂ ಸಹ ಹೆಚ್ಚಾಗಿ ರೈತಾಪಿ ವರ್ಗದವರೆ ಸಂಖ್ಯೆ ಹೆಚ್ಚು ಕಾಣುತ್ತದೆ. ಇದಕ್ಕೆ ಕಾರಣ ವರ್ಷಾನುಗಟ್ಟಲೇ ದುಡಿದು ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ದಣಿದ ರೈತರ ದೇಹಕ್ಕೆ ದಣಿವಾರಿಸಿಕೊಳ್ಳುವ ಸಂದರ್ಭದಲ್ಲಿಯೇ ಮೈಲಾರಲಿಂಗ ಜಾತ್ರೆ ಬರುವುದರಿಂದಾಗಿ ಈ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುತ್ತಾರೆ. ಇದರಿಂದಾಗಿ ಅವರಿಗೆ ಮನರಂಜನೆಯು ಸಹ ದೊರಕಿದಂತಾಗುತ್ತದೆ. ಒಟ್ಟಾರೆಯಾಗಿ ಮೈಲಾರಲಿಂಗ ಸ್ವಾಮಿ ದೇವರ ಜಾತ್ರೆ ಒಂದು ಕಡೆ ವಿಶಿಷ್ಠತೆಯಿಂದ ಕೂಡಿದ ಜಾನಪದದ ಬಗ್ಗೆ ಬೆಳಕು ಚೆಲ್ಲುತ್ತಿದ್ದರೆ ಮತ್ತೂಂದು ಕಡೆಯಲ್ಲಿ ಐತಿಹಾಸಿಕ ಪೌರಾಣಿಕ ಹಿನ್ನೆಲೆಯಲ್ಲಿ ಬೆಳಕು ಚೆಲ್ಲುವ ಮೂಲಕವಾಗಿ ಇತರೆ ಜಾತ್ರೆಗಳಿಗಿಂತ ವಿಭಿನ್ನ ಎನ್ನುವುದನ್ನು ಸಾಬೀತು ಮಾಡುತ್ತದೆ. 

„ವಿಶ್ವನಾಥ ಹಳ್ಳಿಗುಡಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

ಚುನಾವಣೆ ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.