ಭಕ್ತಿ ಉದ್ದೀಪನಗೊಳಿಸುವುದು ಶ್ರಾವಣ: ಅನ್ನಪೂರ್ಣತಾಯಿ
Team Udayavani, Jul 26, 2017, 10:27 AM IST
ಬೀದರ: ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದಿಂದ ಶ್ರಾವಣದ ಮೊದಲನೆ ಸೋಮವಾರ ಬೆಳಗ್ಗೆ “ಸಾಮೂಹಿಕ ಇಷ್ಟಲಿಂಗ’ ಪೂಜೆಯೊಂದಿಗೆ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು.
ವಚನ ಪಠಣ ಅಭಿಯಾನಕ್ಕೆ ಚಾಲನೆ ನೀಡಿದ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಭಾರತೀಯ ಹಬ್ಬಗಳಲ್ಲಿ ಶ್ರಾವಣ ಸಂಭ್ರಮ ವಿಶೇಷ. ಉಳಿದೆಲ್ಲ ಹಬ್ಬಗಳು ಉಂಡು ಉಟ್ಟು ಸಂಭ್ರಮಿಸುವ ಹಬ್ಬಗಳಾದರೆ ಶ್ರಾವಣ ಭಕ್ತಿಯನ್ನು
ಉದ್ದೀಪನಗೊಳಿಸುವ ಮತ್ತು ಸತ್ಪಥದತ್ತ ಮುನ್ನಡೆಸುವ ಹಬ್ಬವಾಗಿದೆ. ಒಬ್ಬ ವ್ಯಕ್ತಿ ಶರಣನಾಗಿ ವಿಕಾಸ ಹೊಂದಲು ಈ ಮಾಸ ಪೂರಕ ಎಂದು ಹೇಳಿದರು.
ಶರಣನಾಗಲು ಮೂರು ಸೂತ್ರಗಳನ್ನು ಳವಡಿಸಿಕೊಳ್ಳಬೇಕು. ಪ್ರತಿದಿನ ಲಿಂಗಪೂಜೆಯೇ ಸಂಭ್ರಮವಾಗಬೇಕು. ಜಂಗಮ (ಸಮಾಜಕ್ಕಾಗಿ) ದಾಸೋಹ ಗೈಯುವ ಸಂಭ್ರಮಿಯಾಗಬೇಕು. ಮತ್ತು ಅನುಭಾವ ಓದುವ ಮೂಲಕ ಭವ ಗೆಲ್ಲಬೇಕು. ಅಂತೆಯೇ 12ನೇ ಶತಮಾನದ ಶರಣರ ಅನುಭಾವ ಪೂರ್ಣವಾದ ವಚನಗಳನ್ನು ನಿರಂತರವಾಗಿ ಓದುವುದನ್ನು ರೂಢಿಗೊಳಿಸಲು 1999-2000 ರಿಂದ “ವಚನ ಪಠಣ ಅಭಿಯಾನ’ ಆರಂಭಿಸಲಾಗಿದೆ ಎಂದರು.
ಶ್ರಾವಣ ಮಾಸದಲ್ಲಿ ನಿತ್ಯ 108 ವಚನಗಳನ್ನು ಪಠಿಸುವ ನಿಯಮಕ್ಕೊಳಪಟ್ಟು ವಚನಗಳ ಅಧ್ಯಯನ ಮಾಡಬೇಕೆಂದು ಕರೆ ನಿಡಿದರು. ಅದರಂತೆ ಈಗಾಗಲೇ ಸಾವಿರಾರು ಕುಟುಂಬಗಳು ವಚನ ಪಠಣ ಅಧ್ಯಯನದಲ್ಲಿ ತೊಡಗಿವೆ.
ಕುಟುಂಬದ ಪ್ರತಿ ಸದಸ್ಯರು ಕಡ್ಡಾಯವಾಗಿ ವಚನಗಳನ್ನು ಓದಬೇಕು. ಇನ್ನು ವರ್ಷದ 365 ದಿನಗಳ ಕಾಲವೂ ಪ್ರತಿದಿನ ಐದು ವಚನ ಕಡ್ಡಾಯವಾಗಿ ಓದಬೇಕು. ಬದುಕಿನಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳಿಗೆ ವಚನಗಳಲ್ಲಿ
ಪರಿಹಾರವಿದೆ. ಅಂಥ ವಚನ ಓದಿ, ಅದರಂತೆ ಆಚರಿಸಿದವರ ಬದುಕು ಬಂಗಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಪ್ರಾಣಲಿಂಗಾರ್ಚನೆಯ ವಿಧಾನವನ್ನು ರಮೇಶ ಮಠಪತಿಯವರು ತೋರಿಸಿಕೊಟ್ಟರು. ಪ್ರಭುದೇವರು ನೇತೃತ್ವ ವಹಿಸಿದ್ದರು. ಡಾ| ವಿಜಯಶ್ರೀ ಬಶೆಟ್ಟಿ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಕಾಂತ ಮಿರ್ಚೆ ಮತ್ತು ಬೀಜ ನಿಮಗದ ಸಹಾಯಕ ನಿರ್ದೇಶಕ ಶರಣಪ್ಪ ಚಿಮಕೊಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಲ್ಪನಾ ಬೀದೆ ವಚನ ಗಾಯನ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ