ಮ್ಯಾಕ್ಸಿಕ್ಯಾಬ್ ಉರುಳಿ ವ್ಯಕ್ತಿ ಸಾವು-16 ಜನರಿಗೆ ಗಾಯ
Team Udayavani, Jan 22, 2018, 1:21 PM IST
ಬಸವಕಲ್ಯಾಣ: ಮ್ಯಾಕ್ಸಿಕ್ಯಾಬ್ ಉರಳಿ ವ್ಯಕ್ತಿಯೋರ್ವ ಮೃತಪಟ್ಟು 16 ನಜರಿಗೆ ಗಾಯವಾದ ಘಟನೆ ತಾಲೂಕಿನ
ಹುಲಸೂರು ಬಳಿ ನಡೆದಿದೆ. ಮಹಾರಾಷ್ಟ್ರದ ಕಾಸರ ಬಾಲಕುಂದಾ ಗ್ರಾಮದ ಸೋಪಾನ ಗಣಪತಿ ತೆಗಂಪಲ್ಲೆ (50) ಮೃತ ವ್ಯಕ್ತಿ. ನಗರದಿಂದ ಹುಲಸೂರು ಕಡೆಗೆ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದ್ದು, ಒರ್ವ ಬಾಲಕಿ, 7 ಜನ ಮಹಿಳೆಯರು ಸೇರಿದಂತೆ ಒಟ್ಟು 16 ಜನರಿಗೆ ಗಾಯಗಳಾಗಿವೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಹುಲಸೂರು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪಾರ್ವತಿ ದಿಲೀಪ ಎನ್ನುವ ಮಹಿಳೆ ಸೇರಿದಂತೆ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅಲ್ಲಿಸಾಬ್, ಪಿಎಸ್ಐ ಬಾಬುರಾವ ಬಾವುಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.