ಕಾಂಗ್ರೆಸ್ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ
Team Udayavani, Mar 3, 2018, 12:18 PM IST
ಭಾಲ್ಕಿ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ನೂತನ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಜಿಲ್ಲಾ ಮತ್ತು ತಾಲೂಕು ಘಟಕಕ್ಕೆ ನೇಮಕಗೊಂಡ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. 9 ವರ್ಷಗಳಲ್ಲಿ ಕೈಗೊಂಡ ಜನಪರ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿದ್ದು ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸೂಚಿಸಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಪಪ್ಪು ಪಾಟೀಲ ಖಾನಾಪುರ, ರಾಜ್ಯ ಕಾರ್ಯದರ್ಶಿ ರಮೇಶ ಬಿರಾದಾರ, ಜಿಲ್ಲಾ ಮತ್ತು ತಾಲೂಕು ಪ್ರಮುಖರಾದ ರವಿಕಾಂತ ಜ್ಯಾಂತಿ, ಎಕಬಲ್, ದೇವರಾಜಸಿಂಗ ಠಾಕೂರ್, ಸುರೇಶ ಬಿರಾದಾರ, ಪ್ರಭು ತರನಳ್ಳಿ, ದಿಲೀಪ ಪಾಟೀಲ, ಮಾರುತಿ ಭಂಗಾರೆ, ಅವಿನಾಶ, ಸುಧಾಕರ ಕೊಳ್ಳೂರ, ರಮೇಶ ಚಿಂಚೋಳಿ, ಬಾಲಾಜಿ ಇದ್ದರು.
ನೂತನ ಪದಾಧಿಕಾರಿಗಳು: ಶಶಿಕುಮಾರ ರಾಜಕುಮಾರ (ಜಿಲ್ಲಾ ಉಪಾಧ್ಯಕ್ಷ), ಶ್ರೀಕಾಂತ ಓಂಕಾರ (ಜಿಲ್ಲಾ ಕಾರ್ಯದರ್ಶಿ), ಸಿದ್ರಾಮ ಭೀಮಣ್ಣ ತುಗಶೆಟ್ಟೆ (ತಾಲೂಕು ಪ್ರಧಾನ ಕಾರ್ಯದರ್ಶಿ), ವಿವೇಕಾನಂದ ರಘುನಾಥ, ಸಂತೋಷ ಸಂಗಪ್ಪ (ಕಾರ್ಯದರ್ಶಿ), ರಾಜಕುಮಾರ ಚಂದ್ರಶೇಖರ (ಉಪಾಧ್ಯಕ್ಷ), ಬಾಲಾಜಿ ಕಾಶಿನಾಥ, ಅನಿಲಕುಮಾರ ವೈಜಿನಾಥ, ಅನಿಲಕುಮಾರ ವಿಜಯಕುಮಾರ ಶೇರಿಕಾರ (ಜಂಟಿ ಕಾರ್ಯದರ್ಶಿ), ಶಿವಕುಮಾರ ಲದ್ದೆ (ಸಂಘಟನಾ ಕಾರ್ಯದರ್ಶಿ), ಅನಿಲಕುಮಾರ ವಿಶ್ವನಾಥ, ಭಜರಂಗ ವೆಂಕಟರಾವ್, ಬಾಬು ತುಕಾರಾಮ (ಸಹ ಕಾರ್ಯದರ್ಶಿ) ಮತ್ತು ಬಸವರಾಜ ಶಿವರಾಜ, ಸಾಹುಲ ಮಧುಕರಾವ್, ಸಂತೋಷ ಕವಿರಾಜ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ