108 ಆರೋಗ್ಯ ಕವಚಕ್ಕೆ ವ್ಯಾಧಿ!


Team Udayavani, Jun 22, 2018, 3:18 PM IST

bidar-2.jpg

„ಉದಯಕುಮಾರ ಮುಳೆ
ಬಸವಕಲ್ಯಾಣ
: ತುರ್ತು ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗೆ ನೆರವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳ ಎರಡು
108 ಆ್ಯಂಬೂಲೆನ್ಸ್‌ ವಾಹನಗಳೇ ರೋಗಗ್ರಸ್ತವಾಗಿ ಮೂಲೆ ಹಿಡಿದಿವೆ! ಗ್ರಾಮೀಣ ಭಾಗದ ಜನತೆಗೆ ತಕ್ಷಣ
ನೆರವಾಗಲಿ ಎನ್ನುವ ಉದ್ದೇಶದಿಂದ ಆರೋಗ್ಯ ಕವಚ ಯೋಜನೆಯಡಿ ರಾಜ್ಯ ಸರ್ಕಾರ ಆರಂಭಿಸಿರುವ ಆ್ಯಂಬೂಲೆನ್ಸ್‌ ಗಳು ಕೆಟ್ಟು ನಿಂತಿದ್ದು ನೋಡಿದರೆ ಈ ಮಾತುಗಳು ಅಕ್ಷರಶಃ ಸತ್ಯವೆನಿಸುತ್ತವೆ.

ಆದರೆ ಆ್ಯಂಬೂಲೆನ್ಸ್‌ಗಳ ಸೇವೆಯಿಂದ ರೋಗಿಗಳು ವಂಚಿತರಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಜನತೆಗೆ ಸೇವೆ ಕಲ್ಪಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯಿಂದ ತಾಲೂಕಿಗೆ ಮೂರು ಆ್ಯಂಬೂಲೆನ್ಸ್‌ಗಳನ್ನು ನೀಡಲಾಗಿದೆ. ಪ್ರತಿ 30 ಕಿ.ಮೀ. ವ್ಯಾಪ್ತಿಗೆ ಒಂದರಂತೆ ಹುಲಸೂರ, ಮುಡಬಿ ಹಾಗೂ ಬಸವಕಲ್ಯಾಣಕ್ಕೆ ತಲಾ ಒಂದೊಂದು ಆ್ಯಂಬೂಲೆನ್ಸ್‌ಗಳ ಸೇವೆ ಇದೆ. 

ಇದರಲ್ಲಿ ಬಸವಕಲ್ಯಾಣ ಆ್ಯಂಬೂಲೆನ್ಸ್‌ ಬಿಟ್ಟರೆ ಉಳಿದ ಎರಡು ವಾಹಗಳು ಕೆಟ್ಟು ನಿಂತಿವೆ. ಹುಲಸೂರ ಹಾಗೂ ಮುಡಬಿ ಆ್ಯಂಬೂಲೆನ್ಸ್‌ಗಳು ಸೇವೆ ಸ್ಥಗಿತಗೊಳಿಸಿದ ಕಾರಣ ತಾಲೂಕಿನ ಯಾವ ಭಾಗದಲ್ಲಾದರೂ ಅಪಘಾತ ಸಂಭವಿಸಿದಲ್ಲಿ ಬಸವಕಲ್ಯಾಣ ಆಂಬ್ಯೂಲೆನ್ಸ್‌ ಮಾತ್ರ ಹಾಜರಾಗಬೇಕು.  ಈ ಆ್ಯಂಬೂಲೆನ್ಸ್‌ ಒಂದು ಭಾಗಕ್ಕೆ ತೆರಳಿದ ಸಮಯದಲ್ಲಿ ಮತ್ತೂಂದು ಭಾಗದಲ್ಲಿ ಅಪಘಾತವಾದರೆ ಅಲ್ಲಿಯ ಗಾಯಾಳು ಸ್ಥಿತಿ ದೇವರೆ ಬಲ್ಲ ಎನ್ನುವಂತಾಗಿದೆ.

ರಾಜೇಶ್ವರದಿಂದ ಮಹಾರಾಷ್ಟ್ರದ ಗಡಿಯವರೆಗೆ ರಾಷ್ಟ್ರಿಯ ಹೆದ್ದಾರಿ-65 ಹಾದು ಹೋಗಿರುವ ಕಾರಣ ಹೆಚ್ಚು
ಅಪಘಾತಗಳು ಸಂಭವಿಸಿ ಜನ ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಗಾಯಾಳುಗಳನ್ನು ಸಾಗಿಸುವುದು ಹಾಗೂ ಹೆರಿಗೆಗಾಗಿ ಗ್ರಾಮೀಣ ಭಾಗದಿಂದ ನಗರಕ್ಕೆ ಆಗಮಿಸುವ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸುವುದು ಸವಾಲಿನ ಕೆಲಸವಾಗಿದೆ. ಆದರೆ ಇಲ್ಲಿಯ ಆ್ಯಂಬೂಲೆನ್ಸ್‌ ಗಳ ಸ್ಥಿತಿ-ಗತಿ ಬಗ್ಗೆ ಗೊತ್ತಿದ್ದರೂ ಸಹ ಸಂಬಂಧಪಟ್ಟ ಮೇಲಾಧಿಕಾರಿಗಳು ದುರಸ್ತಿಗೆ ಏಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮುಡಬಿ ಭಾಗದ ಆ್ಯಂಬೂಲೆನ್ಸ್‌ಕೆಟ್ಟು ನಿಂತು ಸುಮಾರು ಎರಡು ತಿಂಗಳಾಗಿವೆ. ಹೀಗಾಗಿ ಮುಡಬಿ ವ್ಯಾಪ್ತಿಯಲ್ಲಿ
ನಡೆಯುವ ಘಟನೆಗಳಿಗೆ ನಗರದಲ್ಲಿ ಆ್ಯಂಬೂಲೆನ್ಸ್‌ ಕಳುಹಿಸಲಾಗುತ್ತಿತ್ತು. ಆದರೆ ಈಗ ಹುಲಸೂರ ಹಾಗೂ ಮುಡಬಿ ಆಂಬ್ಯೂಲೆನ್ಸ್‌ಗಳು ಏಕ ಕಾಲಕ್ಕೆ ಸೇವೆಗೆ ಲಭ್ಯವಿಲ್ಲದ ಕಾರಣ ನಗರದ ಆಂಬ್ಯೂಲೆನ್ಸ್‌ ವಾಹನ ಒಂದು ಭಾಗಕ್ಕೆ ತೆರಳಿದಲ್ಲಿ ಮತ್ತೂಂದು ಭಾಗದಲ್ಲಿ ನಡೆಯುವ ಅಪಘಾತಗಳಿಗೆ ಆಂಬ್ಯೂಲೆನ್ಸ್‌ ಸೇವೆ ಇಲ್ಲದಂತಾಗಿದೆ.

ಹುಲಸೂರ ಹಾಗೂ ಮುಡಬಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5 ಆ್ಯಂಬೂಲೆನ್ಸ್‌ ಕೆಟ್ಟು ನಿಂತಿವೆ. ಈ ಹಿಂದೆ ಆಂಬ್ಯೂಲೆನ್ಸ್‌ಗಳ ದುರಸ್ತಿಗಾಗಿ ಮಾಡಲಾದ 4 ಲಕ್ಷ ರೂ. ಬಿಲ್‌ ಸಹ ಬಂದಿಲ್ಲ. ಕಳೆದ ಎರಡು ತಿಂಗಳಿಂದ ನಮ್ಮ ಸಂಸ್ಥೆ ಸಿಬ್ಬಂದಿಗಳಿಗೆ ಸಂಬಳ ಸಹ ಸಿಕ್ಕಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹುಲಸೂರ ಹಾಗೂ ಮುಡಬಿ ಆಂಬ್ಯೂಲೆನ್ಸ್‌ಗಳಿಗೆ ಟೈರ್‌ ಸೇರಿದಂತೆ ಇತರೆ ಸಮಸ್ಯೆಗಳಿದ್ದು, ಟೈರ್‌ಗಳು ಬಂದ ಕೂಡಲೇ ಈ ಎರಡು ವಾಹನಗಳು ಸೇವೆಗೆ ಲಭ್ಯವಾಗಲಿವೆ. 
ಮೋಶಿನ್‌ ಅಸ್ಲಮ್‌, ಜಿವಿಕೆ ಇಎಂಆರ್‌ಐ 108 ಜಿಲ್ಲಾ ವ್ಯವಸ್ಥಾಪಕರು

ಆ್ಯಂಬೂಲೆನ್ಸ್‌ ಸೇವೆ ಸಿಗದ ಹಿನ್ನೆಲೆಯಲ್ಲಿ ಜನ ಖಾಸಗಿ ವಾಹನಗಳನ್ನು ಆಶ್ರಯಿಸಬೇಕಾಗುತ್ತಿದೆ. ಕೆಟ್ಟು
ನಿಂತಿರುವ ಎರಡು ವಾಹನಗಳನ್ನು ತಕ್ಷಣ ದುರಸ್ತಿ ಮಾಡುವ ಜತೆಗೆ ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಮಂಠಾಳಕ್ಕೂ ಒಂದು ಹೆಚ್ಚುವರಿ ಆಂಬ್ಯೂಲೆನ್ಸ್‌ ನೀಡಿ ಜನರಿಗೆ ಅನುಕೂಲ ಕಲ್ಪಿಸಬೇಕು.
ಬಂಡೆಪ್ಪ ಮಾಳಿ, ಮಂಠಾಳ ನಿವಾಸಿ

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

rape

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.