ಮಾದಕ ವಸ್ತು ಸೇವನೆ ವಿದ್ಯಾವಂತರಲ್ಲೇ ಹೆಚ್ಚು


Team Udayavani, Sep 9, 2018, 4:01 PM IST

bid-3.jpg

ಹುಮನಾವಾದ: ಮಾದಕ ವಸ್ತು ಸೇವನೆಯಿಂದ ಪ್ರಾಣಹಾನಿ ಜೊತೆಗೆ ನಿಮ್ಮನ್ನೇ ನಂಬಿದ ಕುಟುಂಬ ಸದಸ್ಯರು
ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ. ಮಾದಕ ವಸ್ತು ಸೇವನೆಯಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತರ
ಸಂಖ್ಯೆಯೇ ಹೆಚ್ಚು ಇರುವುದು ವಿಪರ್ಯಾಸ ಎಂದು ಪಿಎಸ್‌ಐ ಎಲ್‌.ಟಿ. ಸಂತೋಷ ಹೇಳಿದರು.

ಇಲ್ಲಿನ ಯಲಾಲ್‌ ಶಿಕ್ಷಣ ದತ್ತಿ ಎಸ್‌.ಬಿ. ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಯಾರೊಬ್ಬರು ಮಾದಕ ದ್ರವ್ಯ ಸೇವನೆಯತ್ತ ಚಿತ್ತ ಹರಿಸದೇ ಪೌಷ್ಠಿಕ ಆಹಾರ ಸೇವಿಸಿ, ನೆಮ್ಮದಿ ಜೀವನ ಸಾಗಿಸಬೇಕು. ಒಳ್ಳೆ ಹವ್ಯಾಸ, ಆಚರಣೆಗಳು ಉತ್ತಮ ನಾಗರಿಕರ ಲಕ್ಷಣ. ಆದರೇ ಬಹುತೇಕ ಮಂದಿ ಬೇರೆ ಬೇರೆ ಕಾರಣಗಳಿಂದಾಗಿ ದುಶ್ಚಟಗಳಿಗೆ ಬಲಿಯಾಗಿ  ತೊಂದರೆ ಅನುಭವಿಸುತ್ತಾರೆ.

ಸರ್ಕಾರ ಈ ನಿಟ್ಟಿನಲ್ಲಿ ಮಾದಕ ಉತ್ಪನ್ನಗಳ ಮೇಲೆ ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಮೂದಿಸುತ್ತದೆ. ಆದರೂ ಸೇವಿಸಿ ಅನಾರೋಗ್ಯದಿಂದ ನರಳುತ್ತಾರೆ ಎಂದು ಹೇಳಿದರು.

ಪ್ರೊಬೇಶನರಿ ಪಿಎಸ್‌ಐ ಗೌತಮ ಮಾತನಾಡಿ, ಸಂಚಾರ ನಿಯಮ ಪಾಲನೆಯಿಂದ ಪ್ರಾಣ ರಕ್ಷಣೆ ಸಾಧ್ಯ.
ಆದರೆ ಪ್ರತಿ ವರ್ಷ ಕನಿಷ್ಟ 50 ಜನ ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡಿದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ವಾಹನ ಚಾಲಕರು ಹೆಲ್ಮೆಟ್‌ ಧರಿಸಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಯಲಾಲ್‌ ಶಿಕ್ಷಣ ದತ್ತಿ ಮುಖ್ಯಧರ್ಮದರ್ಶಿ ಶಾಂತವೀರ ಎನ್‌.ಯಲಾಲ್‌ ಮಾತನಾಡಿ, ಫ್ಯಾಶನ್‌ ಆಗುತ್ತಿರುವ ಮೊಬೈಲ್‌ ಬಳಕೆಯಿಂದ ಅವಾಂತರ ಸಂಭವಿಸುತ್ತಿರುವ ಕಾರಣ ಮಹಾವಿದ್ಯಾಲಯದಲ್ಲಿ ಮೊಬೈಲ್‌
ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಯಾವುದಕ್ಕೂ ತೊಂದರೆ ಇರುವುದಾದರೇ ವಿದ್ಯಾರ್ಥಿನಿಯರು ಸಮೀಪದ ಪೊಲೀಸ್‌ ಠಾಣೆಗೆ ಕರೆ ಮಾಡಿದಲ್ಲಿ ಇಲಾಖೆ ಅಧಿಕಾರಿಗಳು ನೆರವಾಗುತ್ತಾರೆ ಎಂದರು.

ಪ್ರಾಚಾರ್ಯ ಶಿಲ್ಪಾರಾಣಿ ಶೇರಿಕಾರ, ಉಪಪ್ರಾಚಾರ್ಯ ಆನಂದಕುಮಾರ ಚಾಕೂರೆ, ಪ್ರೌಢಶಾಲಾ ವಿಭಾಗದ
ಮುಖ್ಯಶಿಕ್ಷಕ ತುಕಾರಾಮ ಬೈನೋರ್‌, ಪೊಲೀಸ್‌ ಸಿಬ್ಬಂದಿ ವಿಜಯಕುಮಾರ ವೇದಿಕೆಯಲ್ಲಿದ್ದರು. ಪೂಜಾ
ಪ್ರಾರ್ಥಿಸಿದರು. ಮಮತಾರಾಣಿ ಮಿತ್ರಾ ಸ್ವಾಗತಿಸಿದರು. ಪ್ರೊ| ಗೌರಮ್ಮ ಪಂಚಮಠ… ನಿರೂಪಿಸಿದರು. ಪ್ರೊ| ಶಿವಲೀಲಾ ಕೋರಿ ವಂದಿಸಿದರು. 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.