ಸಂಗೀತ-ಸಾಂಸ್ಕೃತಿಕ ಕಾರ್ಯಕ್ರಮ ರಸದೌತಣ


Team Udayavani, Sep 15, 2018, 12:27 PM IST

bid-2.jpg

ಹುಮನಾಬಾದ: ನಗರದಲ್ಲಿ 49ವರ್ಷಗಳನ್ನು ಪೂರ್ಣಗೊಳಿಸಿ 50ರ ಸಂಭ್ರಮದಲ್ಲಿರುವ ಹಳೆ ಅಡತ್‌ ಬಜಾರ ಗಣೇಶ ಉತ್ಸವ ಸಮಿತಿ, ಅತ್ಯಾಕರ್ಷಕ ಮಂಟಪದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಅಂತಾರಾಷ್ಟ್ರೀಯ ಕಲಾವಿದರಿಂದ ಸಂಗೀತೋತ್ಸವ, ನಿತ್ಯ ಚಂಡಿ ಹವನ, ಪ್ರವಚನ ಇತ್ಯಾದಿ ಕಾರ್ಯಕ್ರಮ ಆಯೋಜಿಸಿ ಭಕ್ತರಿಗೆ ರಸದೌತಣ ನೀಡುತ್ತಿದೆ.

ಆಟದಿಂದ ಪೀಠಕ್ಕೆ: 1969ರಲ್ಲಿ ಇಲ್ಲಿನ ಹಳೆ ಅಡತ್‌ ಬಜಾರ ಭಗೋಜಿ ನಿವಾಸ ಓಣಿ ಜನರಿಗೆಲ್ಲ ದೇಶಿ ಆಟಗಳ ಕ್ರೀಡಾಂಗಣವಾಗಿತ್ತು. ಆ ವೇಳೆ ಆ ಪರಿವಾರ ಪ್ರತಿಷ್ಠಾಪಿಸಿದ ನಂತರ ಬಣ್ಣ ಹೋಗಿದ್ದ ಗೌರೀಗಣೇಶ ಪ್ರತಿಮೆ ಅಂಗಳದಲ್ಲಿ ಆಡುತ್ತಿದ್ದ 10-12 ವರ್ಷದ ಬಾಲಕರ ಗುಂಪಿನ ಕೈಗಿತ್ತಿದ್ದರು.
 
50ನೇ ವರ್ಷಾಚರಣೆಯ ಈ ಶುಭ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಗೆ ಈ ಬಾರಿ ಬೆಂಗಳೂರಿನ ಖ್ಯಾತ ಮೂರ್ತಿ ಶಿಲ್ಪಿ ಧರ್ಮೇಂದ್ರಾಚಾರ್ಯ ಅವರು ಪಂಚಲೋಹದ 5.5ಅಡಿ ಅಡಿ ಎತ್ತರದ ಅತ್ಯಾಕರ್ಷಕ ಮೂರ್ತಿಯನ್ನು 3ತಿಂಗಳಲ್ಲಿ ಸಿದ್ಧಪಡಿಸಿ ಕೊಟ್ಟಿದ್ದಾರೆ. 

ಮಹಾದ್ವಾರ ಮಂಟಪ: ಬಸವೇಶ್ವರ ವೃತ್ತದ ಬಲಬದಿಗೆ ಹೈದರಾಬಾದ್‌ ಬಿರ್ಲಾ ಮಂದಿರ ಮಾದರಿ ಮಹಾದ್ವಾರ ಸಿದ್ಧಪಡಿಸಲಾಗಿದೆ. 300ಉದ್ದ 60ಅಡಿ ಅಗಲ ಮಂಟಪದಲ್ಲಿ ಪ್ರೇಕ್ಷರಿಗಾಗಿ 1000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. 

ಆ ಪೈಕಿ ಅತೀ ಗಣ್ಯ, ಗಣ್ಯ ಮತ್ತು ಮಾಧ್ಯಮದವರಿಗೆ ಪ್ರತ್ಯೇಕ ಸೌಲಭ್ಯವಿದೆ. ಆಕಸ್ಮಾತಾಗಿ ಮಳೆ ಬಂದರೂ ಪ್ರೇಕ್ಷಕರು ಮತ್ತು ಕಲಾವಿದರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯಕ್ರಮ ನಡೆಯಲು ಅಗತ್ಯ
ವ್ಯವಸ್ಥೆ ಮಾಡಲಾಗಿದೆ. ಈ ಮಂಟಪ ಕಾರ್ಯವನ್ನು 30ಜನರು 15 ದಿನಗಳಲ್ಲಿ ನಿರ್ವಹಿಸಿದ್ದಾರೆ.

ಪ್ರವಚನ, ಸಂಗೀತ ರಸದೌತಣ: ಸೆ.14ರಿಂದ ಸೆ.21ರ ವರೆಗೆ ಪ್ರತಿನಿತ್ಯ ಪ್ರವಚನ ಮತ್ತು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಕಾರ್ಯಕ್ರಮಗಳ ವಿವರ ಇಂತಿದೆ. ರಾಜೇಶ್ವರ ಶಿವಾಚಾರ್ಯರ ಪ್ರವಚನ, ಸಂಗೀತ ವಿದೂಷಿ ಸಂಗೀತಾ ಕುಲಕರ್ಣಿ(ಕಟ್ಟಿ), ಚಿದಂಬರಾಶ್ರಮ ಶಿವಕುಮಾರ ಸ್ವಾಮೀಜಿ ಪ್ರವಚನ, ಕಾರ್ತಿಕ ಎಲ್‌.ಎಸ್‌. ಅವರಿಂದ ವಾದ್ಯ ಸಂಗೀತ, ಸಿದ್ಧಲಿಂಗ ಶಿವಾಚಾರ್ಯರಿಂದ ಪ್ರವಚನ, ಶಶಿಧರ ಕೋಟೆ ತಂಡದಿಂದ ಸಂಗೀತ ಸಂಭ್ರಮ, ಶಂಭು ಬಳಿಗಾರ ಅವರಿಂದ ಜನಪದ ಹಾಸ್ಯೋತ್ಸವ, ರಿಚರ್ಡ್‌ ಲೂಯಿಸ್‌ ಅವರಿಂದ ಹರಟೆ, ಶಿವಲಿಂಗೇಶ್ವರ ಸ್ವಾಮೀಜಿ ಪ್ರವಚನ, ಉಸ್ತಾದ ಫಯಜಖಾನ್‌ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಡಿ.ಅಜೇಂದ್ರ ಸ್ವಾಮೀಜಿ ಅವರಿಂದ ಪ್ರವಚನ, ಜಯರ್ತೀಥ ಮೇವುಂಡಿ ಹಿಂದೂಸ್ಥಾನಿ ಸಂಗೀತ, ಡಾ| ಜ್ಞಾನರಾಜಶ್ರೀ ಪ್ರವಚನ, ರವಿ ಮೂರೂರ ಸುಗಮ ಸಂಗೀತ, ಹಾರಕೂಡ ಡಾ| ಚನ್ನವೀÃರಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರವಚನ, ಬೆಂಗಳೂರಿನ ಸ್ವರ ಲಹರಿ ತಂಡದಿಂದ ಚಲನಚಿತ್ರ ರಸಸಂಜೆ ಹಮ್ಮಿಕೊಳ್ಳಲಾಗಿದೆ. ಆಧ್ಯಾತ್ಮ ಹಾಗೂ ಸಂಗೀತ ದಾಸೋಹವೇ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ ಜಿ.ರಘೋಜಿ ಹೇಳುತ್ತಾರೆ.

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

1-eqwewqeqwe

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

Bidar; ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ; ಮಾವು ಬೆಳೆಗಾರರಿಗೆ ನಷ್ಟ

Bidar; ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ; ಮಾವು ಬೆಳೆಗಾರರಿಗೆ ನಷ್ಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.