ಕಾರಂಜಾ ಸಂತ್ರಸ್ತರಿಂದ ಉಗ್ರ ಹೋರಾಟಕ್ಕೆ ನಿರ್ಧಾರ
Team Udayavani, Sep 21, 2018, 11:54 AM IST
ಬೀದರ: ಜಿಲ್ಲಾಧಿಕಾರಿಗಳ ಕಚೇರಿ ಎದುರು 43 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿರುವುದರಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದೆ.
ಇದರಿಂದ ಮುಂದಾಗುವ ಅನಾಹುತಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವೇ ಹೊಣೆಯಾಗಿತ್ತದೆ ಎಂದು ಕಾರಂಜಾ
ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚ್ಚಕನಳ್ಳಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತರು ಕಪ್ಪು ಬಟ್ಟೆ ಧರಿಸಿ ಧರಣಿಯಲ್ಲಿ ಭಾಗವಹಿಸುವರು. ಪಂಜಿನ ಮೇರವಣಿಗೆ ನಡೆಸುವರು. ಜನ ಪ್ರತಿನಿಧಿಗಳ ಮನೆ ಎದುರು ಅರೆಬೆತ್ತಲೆ ಮೆರವಣಿಗೆ, ಧರಣಿ ಸ್ಥಳದಲ್ಲಿ ಕೇಶ ಮುಂಡನ ಮಾಡಿಕೊಳ್ಳವುದು ಸೇರಿದಂತೆ ವಿವಿಧ ಮಾದರಿಯಲ್ಲಿ ಹೊರಾಟ ಮಾಡಲಾಗುವುದು. ಬೀದರ ನಗರದಲ್ಲಿ ರಸ್ತೆ ತಡೆ ಚಳವಳಿ, ರೈಲ್ವೆ ನಿಲ್ದಾಣದಲ್ಲಿ ರೈಲು ರೋಖೋ ಆಂದೋಲನ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-65 ರಸ್ತೆ ತಡೆ ಚಳವಳಿ, ಜೈಲ್ ಭರೋ ಆಂದೋಲನ ಹಂತಹಂತವಾಗಿ ನಡೆಸಲಾಗುವುದು. ಹೋರಾಟದ
ಸಂದರ್ಭದಲ್ಲಿ ಯಾವುದೇ ಅಹಿತರಕ ಘಟನೆಗಳು ನಡೆದರೆ ಅದಕ್ಕೆ ನೇರವಾಗಿ ಸರ್ಕಾರವೆ ಹೊಣೆಯಾಗುತ್ತದೆ ಎಂದರು.
1972ರಲ್ಲಿ ಕೇವಲ 9 ಕೋಟಿ ವೆಚ್ಚದ ಕಾರಂಜಾ ಜಲಾಶಯ ಯೋಜನೆ ಇತ್ತು. ಆದರೆ, ಈ ವರೆಗೆ ಕೋಟ್ಯಂತರ ರೂಪಾಯಿ ಖರ್ಚಾಗಿದೆ. ಮುಳುಗಡೆಯಾದ ಬೀದರ ದಕ್ಷಿಣ ಭಾಗದ 14 ಹಳ್ಳಿಗಳು, ಹುಮನಾಬಾದ ತಾಲೂಕಿನ 8 ಹಳ್ಳಿಗಳು, ಭಾಲ್ಕಿ ತಾಲೂಕಿನ 6 ಹಳ್ಳಿಗಳ ಭೂಮಿ ಭಾಗಶಃ ಜಲಾವೃತವಾಗಿದ್ದು, ಈ ಜಲಾಶಯದಲ್ಲಿ 14,550 ಎಕರೆ ಭೂಮಿ ಅಲ್ಲದೆ ಹೆಚ್ಚುವರಿಯಾಗಿ 1200 ಎಕರೆ ಭೂಮಿ ಮುಳುಗಡೆ ಪ್ರದೇಶದಲ್ಲಿ ಸೇರಿರುತ್ತದೆ. ಭೂ ಸ್ವಾ ಧೀನ ಮಾಡಿಕೊಂಡ ಸರಕಾರ ಎಲ್ಲ ಸಂತ್ರಸ್ತ ರೈತರಿಗೆ ಸಮಾನವಾಗಿ ಪರಿಹಾರ ಧನ ನೀಡದೆ ತಾರತಮ್ಯ ಮಾಡಿ ಅನ್ಯಾಯ ಮಾಡಿದೆ. 28 ಹಳ್ಳಿಗಳ 14,550 ಎಕರೆ ಕೃಷಿ ಯೋಗ್ಯಭೂಮಿ ಮತ್ತು 8ರಿಂದ 9 ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿವೆ ಎಂದರು.
5000 ಕುಟುಂಬಗಳು 18,500ಎಕರೆ ಭೂಮಿ ಸಂತ್ರಸ್ತರಿಗೆ ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿ ಪರಿಹಾರ
ನೀಡಬೇಕಾಗಿತ್ತು. ಬೆರಳೆಣಿಕೆಯಷ್ಟು ಜನ ನ್ಯಾಯಾಲಯದ ಮೊರೆ ಹೋದಾಗ ಬಡ್ಡಿ ಸೇರಿಸಿ 12 ಲಕ್ಷ ರೂ. ಪಾವತಿಸುವಂತೆ ಸೂಚಿಸಿದೆ. ಅದೇ ಮಾದರಿಯಲ್ಲಿ ಇನ್ನುಳಿ ಬಡ ರೈತರಿಗೂ ನ್ಯಾಯ ಸಿಗಬೇಕಾಗಿದೆ. ಕಾರಂಜಾ ಸಂತ್ರಸ್ತರ ಮಾದರಿಯಲ್ಲಿಯೇ ಪರಿಹಾರ ಧನ ವಿತರಣೆ ಆಗಬೇಕು ಎಂದು ಆಗ್ರಹಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಜಿಲಾನಿ ಪಟೇಲ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪಾ ಹಚ್ಚಿ, ಜಂಟಿ ಕಾರ್ಯದರ್ಶಿ ದತ್ತಾತ್ರೆಯರಾವ್ ಕುಲಕರ್ಣಿ, ಸಲಹೆಗಾರ ವೀರಭದ್ರಪ್ಪ ಉಪ್ಪಿನ, ಜಾಕೀರ ಪಟೇಲ, ಬಸವರಾಜ ಮೂಲಗೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ