ಅಕ್ಕಿಂ ತಿಂದಂ ಕೆಟ್ಟಂ, ನವಣೆ ಉಂಡಂ ಗಟ್ಟಂ!
Team Udayavani, Sep 23, 2018, 3:35 PM IST
ಧಾರವಾಡ: “ಸಿರಿಧಾನ್ಯ ಬಳಸಿ- ಆರೋಗ್ಯ ಉಳಿಸಿ’ ಎನ್ನುವ ಧೇಯ ವಾಕ್ಯದೊಂದಿಗೆ ಧಾರವಾಡ ಕೃಷಿ
ಮೇಳ-2018ಕ್ಕೆ ಚಾಲನೆ ಸಿಕ್ಕಿದೆ. ಆದರೆ ಸಿರಿಧಾನ್ಯಗಳಿಂದ ಆರೋಗ್ಯ ವೃದ್ಧಿ ಸಾಧ್ಯ ಎನ್ನುವುದನ್ನು ನಮ್ಮ ದೇಶಜ್ಞಾನ
ಪರಂಪರೆಯಲ್ಲಿ ರೈತರು ನೂರಾರು ವರ್ಷಗಳ ಹಿಂದೆಯೇ ಕಲಿತುಕೊಂಡಿದ್ದಾರೆ.
ಸಿರಿಧಾನ್ಯಗಳನ್ನು ರಾಸಾಯನಿಕ ಗಳನ್ನು ಬಳಸದೆ ನೈಸರ್ಗಿಕ ಕೃಷಿಯ ಮೂಲಕ ಬೆಳೆದು 10 ವರ್ಷಗಳಿಂದ
ಇದರ ಮಹತ್ವವನ್ನು ಪ್ರಚಾರ ಮಾಡುತ್ತಿದ್ದಾರೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಲ್ಲೇಶಪ್ಪ ಕಲ್ಯಾಣಶೆಟ್ಟಿ.
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ನೈಸರ್ಗಿಕ ಕೃಷಿಯಲ್ಲಿ
ತೊಡಗಿಕೊಂಡಿರುವ ಮಲ್ಲೇಶಪ್ಪ ಅವರು, ಅಕ್ಕಿಯಲ್ಲಿನ ಕೆಟ್ಟ ಅಂಶಗಳು ಮತ್ತು ನವಣೆಯಲ್ಲಿ ಉತ್ತಮ ಅಂಶಗಳ
ಕುರಿತು ಕೃಷಿಮೇಳದಲ್ಲಿ ಭಾಗಿಯಾಗುವ ಎಲ್ಲ ರೈತರಿಗೂ ಮಾಹಿತಿ ನೀಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸಕ್ಕರೆ
ಕಾಯಿಲೆಯಿಂದ ಬಳಲುವವರಿಗೆ ಮತ್ತು ಅಪೌಷ್ಟಿಕತೆ ಎದುರಿಸುತ್ತಿರುವವರಿಗೆ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ
ಆಹಾರ ಎಷ್ಟು ಮುಖ್ಯ ಎಂಬುದನ್ನು ಉದಾಹರಣೆಗಳ ಸಮೇತ ಸಲಹೆ ನೀಡುತ್ತಿದ್ದಾರೆ.
27 ತಳಿ ದೇಶಿ ಬೀಜ ರಕ್ಷಣೆ: ಮಲ್ಲೇಶಪ್ಪ ಅವರು ದೇಶಿಯವಾಗಿ ಬೆಳೆಯುವ ನವಣೆ, ಜೋಳ, ಬರಗು ಸೇರಿದಂತೆ 12 ತಳಿಯ ಸಿರಿಧಾನ್ಯಗಳನ್ನು ಮತ್ತು 15 ಪ್ರಕಾರದ ವಿವಿಧ ತರಕಾರಿ ಬೀಜಗಳನ್ನು ಸಂರಕ್ಷಣೆ ಮಾಡಿಟ್ಟುಕೊಂಡು ಅದನ್ನು ರೈತರು ಹೇಗೆ ಬಳಸಿಕೊಳ್ಳಬೇಕು ಎಂಬ ಸಲಹೆಯನ್ನು ಕೃಷಿ ಮೆಳದಲ್ಲಿ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!