ಬಸವಕಲ್ಯಾಣ: ಶೋಕ ಸಾಗರದಲ್ಲಿ ಬಸವಾಭಿಮಾನಿಗಳು
Team Udayavani, Oct 21, 2018, 12:52 PM IST
ಬಸವಕಲ್ಯಾಣ: ಜನಪರ ಜಗದ್ಗುರು ಹಾಗೂ ಬಸವತತ್ವದ ಕಣ್ಮಣಿಯಾದ ಶ್ರೀ ತೊಂಟದಾರ್ಯ ಸಂಸ್ಥಾನ ಮಠದ ಡಾ| ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳ ಸಾವು ಇಲ್ಲಿನ ಬಸವಾಭಿಮಾನಿಗಳು ಮತ್ತು ಭಕ್ತರನ್ನು ಶೋಕ ಸಾಗರದಲ್ಲಿ ಮುಳಗುವಂತೆ ಮಾಡಿದೆ.
ಡಾ| ತೋಂಟದಾರ್ಯ ಮಹಾಸ್ವಾಮಿಗಳು ಅಪ್ಪಟ ಬಸವ ಅನುಯಾಯಿಗಳು ಆಗಿರುವುದರಿಂದ ವಿಶ್ವಗುರು ಬಸವಣ್ಣನವರ ಕರ್ಮಭೂಯಿಯಾದ ಬಸವಕಲ್ಯಾಣದಲ್ಲಿ ನಡೆಯುವ ಪ್ರತಿಯೊಂದು ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಿದ್ದರು. ಕಳೆದ ವರ್ಷ ನಡೆದ ಅನುಭವ
ಮಂಟಪ ಉತ್ಸವದಲ್ಲಿ ಶ್ರೀಗಳು ಭಾಗವಹಿಸಿದ್ದರು. ಇವರ ಆಕಸ್ಮಿಕ ಸಾವು ಎಲ್ಲರಿಗೂ ನೋವು ತಂದಿದೆ. ಅನುಭವ ಮಂಟಪ ಅಧ್ಯಕ್ಷ ಹಾಗೂ ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ