ಅರೆಯದ ಕಬ್ಬು; ಸೊರಗಿದ ಅನ್ನದಾತ
Team Udayavani, Feb 22, 2019, 9:29 AM IST
ಹುಮನಾಬಾದ: ಕಳೆದೊಂದು ತಿಂಗಳ ಹಿಂದೆಯಷ್ಟೇ ಕಬ್ಬು ನುರಿಸುವಿಕೆ ಆರಂಭಿಸಿರುವ ಬೀದರ್ ಸಹಕಾರ ಸಕ್ಕರೆ ಯಂತ್ರೋಪಕರಣ ತಾಂತ್ರಿಕ ದೋಷದಿಂದ ಮತ್ತೆ ಕಳೆದ ಒಂದು ವಾರದಿಂದ ಕಬ್ಬು ನುರಿಸುವಿಕೆ ಸ್ಥಗಿತಗೊಳಿಸಿದೆ. ಇದರಿಂದ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳಹಿಸಿದ ರೈತರ ಕಬ್ಬು ಕಾರ್ಖಾನೆ ಪ್ರಾಂಗಣದಲ್ಲಿ ಒಣಗುತ್ತಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ಕಾರ್ಖಾನೆ ಆರಂಭಿಸುವುದೇ ಕಷ್ಟಸಾಧ್ಯವಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಬಿ. ಪಾಟೀಲ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ತಂದ 2 ಕೋಟಿ ರೂ. ಆರ್ಥಿಕ ನೆರವಿನ ಪೈಕಿ 65 ಲಕ್ಷ ರೂ. ಅನುದಾನ ಜನವರಿ 10ರಂದು ಕಾರ್ಖಾನೆ ಕಬ್ಬು ನುರಿಸುವಿಕೆ ಆರಂಭಿಸಿದ್ದರು. ಆರಂಭದಿಂದ ಈ ವರೆಗೆ ಒಟ್ಟು 68,869 ಸಾವಿರ ಟನ್ ಕಬ್ಬು ಯಶಸ್ವಿಯಾಗಿ ನುರಿಸಲಾಗಿದೆ.
ಆದರೆ ಇದೀಗ ತಾಂತ್ರಿಕ ದೋಷದಿಂದಾಗಿ ಫೆ.14ರಿಂದ ಕಬ್ಬು ನುರಿಸುವಿಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಅನ್ನದಾತರ ಪಾಡು ಹೇಳತೀರದಾಗಿದೆ.
ಒಣಗುತ್ತಿರುವ ಕಬ್ಬು: ಕಬ್ಬು ನುರಿಸುವ ವಿಶ್ವಾಸದಿಂದ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆ ಪ್ರಾಂಗಣದಲ್ಲಿ ಲಾರಿಗಳಲ್ಲಿ ತುಂಬಿ ನಿಲ್ಲಿಸಿರುವ ಕಬ್ಬು ಮತ್ತು ಹೊಲಗಳಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟ ಕಬ್ಬು ದಿನದಿಂದ ದಿನಕ್ಕೆ ಒಣಗುತ್ತಿರಯವುದರಿಂದ ರೈತರ ಮುಖದಲ್ಲಿ ಕಳೆಯೇ ಇಲ್ಲದಂತೆ ಮಾಡಿದೆ.
ಆರ್ಥಿಕ ಸಂಕಷ್ಟದಲ್ಲಿ ರೈತರು: ಸದ್ಯ ಕಾರ್ಖಾನೆ ಪ್ರಾಂಗಣದಲ್ಲಿ ಕಟಾವು ಮಾಡಿ, 200ಕ್ಕೂ ಅಧಿಕ ಲಾರಿಗಳಲ್ಲಿ 2000ಕ್ಕೂ ಅಧಿಕ ಟನ್ ಕಬ್ಬು ದಿನೇ ದಿನೇ ಒಣಗುತ್ತಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅನ್ಯ ಕಾರ್ಖಾನೆಗೆ ಸಾಗಣೆ: ಲಾರಿಯಲ್ಲಿ ತುಂಬಿರುವ ಕಬ್ಬು ಒಣಗುತ್ತಿರುವ ಆತಂಕದಿಂದಾಗಿ ಅದೆಷ್ಟೋ ರೈತರು ಕಬ್ಬನ್ನು ತಾಲೂಕಿನ ಮೊಗದಾಳ ಹತ್ತಿರದ ಬೀದರ್ ಕಿಸಾನ್ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಕಲ್ಬುರ್ಗಿ ಜಿಲ್ಲೆ ಆಳಂದ ಸಹಕಾರ ಸಕ್ಕರೆ ಕಾರ್ಖಾನೆಗೆ ಸಾಗಿಸುವಲ್ಲಿ ನಿರತರಾಗಿದ್ದಾರೆ.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಇನ್ನು ವಿಳಂಬ ಮಾಡದೇ ಸಾಧ್ಯವಾದಷ್ಟು ಶೀಘ್ರ ಕಬ್ಬು ನುರಿಸುವಿಕೆ ಆರಂಭಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆನ್ನುವುದು ಅನ್ನದಾತರ ಅಂಬೋಣ.
ಬೀದರ್ ಸಹಕಾರ ಸಕ್ಕರೆ ಆರಂಭಗೊಂಡಿದ್ದಕ್ಕೆ ಸಂತಸ ಪಟ್ಟಿದ್ದೆ. ನಮ್ಮ 6 ಎಕರೆ ತೋಟದಲ್ಲಿ 160 ಟನ್ಗಿಂತಲೂ ಅಧಿಕ ಕಬ್ಬು ಬೆಳೆಯಲಾಗಿದೆ. ಆ ಪೈಕಿ 100 ಟನ್ ಕಬ್ಬು ನುರಿಸಲಾಗಿದೆ. ಉಳಿದ 30 ಟನ್ ಕಾರ್ಖಾನೆ ಪ್ರಾಂಗಣದಲ್ಲಿ ಒಣಗಿದೆ. ಈಗಾಗಲೇ ಕಟಾವು ಮಾಡಿದ 30 ಟನ್ ಕಬ್ಬು ಸಹ ತನ್ನ ತೂಕ ಕಳೆದುಕೊಳ್ಳುತ್ತಿದೆ. ಈ ಹಾನಿಗೆ ಹೊಣೆ ಯಾರು?.
ರಾಜಣ್ಣ ಹುಡಗೀಕರ್, ಕಬ್ಬು ಬೆಳೆಗಾರ, ಹಣಕುಣಿ
ಬಾಯ್ಲರ್ನಲ್ಲಿ ಕಂಡುಬಂದ ದೋಷ ಈಗಾಗಲೇ ಸರಿಪಡಿಸಲಾಗಿದೆ. ಈಗ ಟರ್ಬನ್ ಎಲೆಕ್ಟ್ರಿಕಲ್ ವಿಭಾಗದಲ್ಲಿ ಮುಖ್ಯ ಬೇರಿಂಗ್ ಕೆಟ್ಟು ಹೋಗಿದ್ದರಿಂದ ಅನಿವಾರ್ಯವಾಗಿ ಕಬ್ಬು ನುರಿಸುವಿಕೆ ಕಾರ್ಯ ಸ್ಥಗಿತಗೊಂಡಿದೆ. ಸರಪಡಿಸಲು ಈಗಾಗಲೇ ಹೈದ್ರಾಬಾದನಿಂದ ತಜ್ಞ ಎಂಜಿನಿಯರ್ಗಳನ್ನು ಬಂದ್ ದುರಸ್ತಿ ಕೈಗೊಳ್ಳುತ್ತಿದ್ದಾರೆ. ಶನಿವಾರ ಅಥವಾ ರವಿವಾರ ಕಬ್ಬು ನುರಿಸುವಿಕೆ ಆರಂಭಗೊಳ್ಳಲಿದೆ.
ಒಬ್ಬಣಗೋಳ್ ವ್ಯವಸ್ಥಾಪಕ ನಿರ್ದೇಶಕರು, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ
ಶಶಿಕಾಂತ ಭಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ