ಪರಿಸರ ಸ್ನೇಹಿ ವಿಗ್ರಹಗಳಿಗೆ ಬೇಡಿಕೆ
Team Udayavani, Aug 16, 2017, 3:51 PM IST
ನಾಲತವಾಡ: ಗಣೇಶನ ಚತಿರ್ಥಿ ಹತ್ತಿರವಾಗುತ್ತಿದ್ದಂತೆ ಗಣೇಶನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದ್ದು ಅದರಲ್ಲೂ ಪರಿಸರ ಸ್ನೇಹಿ ಮೂರ್ತಿಗಳಿಗೆ ಬೇಡಿಕೆ ಅತಿಯಾಗಿದೆ. ಆಷಾಢ ಮುಗಿದು ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬಗಳ ಸುಗ್ಗಿ ಜೋರಾಗಿಯೇ ಇರುತ್ತದೆ. ಪರಿಣಾಮ ಪಟ್ಟಣದ ಗಣೇಶ ಮೂರ್ತಿಗಳ ಪ್ರಸಿದ್ಧ ವ್ಯಾಪಾರಿಗಳಾದ ರಾಘವೇಂದ್ರ ಚಿತ್ರಗಾರ್ (ಪೇಟಕರ್) ಈ ಬಾರಿ ಬಗೆ ಬಗೆಯ ಗಣೇಶನ ವಿಗ್ರಹಗಳನ್ನು ತಂದಿದ್ದು ಗಮನ ಸೆಳೆಯುತ್ತಿವೆ. ಕಳೆದ ಒಂದು ವಾರದಿಂದಷ್ಟೇ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಿಂದ ಸುಮಾರು 20ಕ್ಕೂ ಹೆಚ್ಚು ಬಗೆಯ ಸಂಪೂರ್ಣ ಮಣ್ಣಿನ ಗಣೇಶನ ವಿಗ್ರಹಗಳು ಬಂದಿದ್ದು ಪರಿಸರಕ್ಕೆ ಧಕ್ಕೆಯಾಗದಂತಹ ಬಗೆಯ ಸುಣ್ಣ ಬಣ್ಣ ನೀಡುವ ಕಾರ್ಯ ನಡೆದಿದ್ದರೆ ಇನ್ನೊಂದೆಡೆ ತಮಗೀಷ್ಟವಾದ ಗಣಪನ ಖರೀದಿಗೆ ಬುಕಿಂಗ್ ಜೋರಾಗಿ ನಡೆದಿದೆ. ಪರಿಸರದ ಮೇಲೆ ಪರಿಣಾಮ ಬೀರಬಹುದಾದ ಪಿಒಪಿ ಗಣಪತಿ ಮೂರ್ತಿಗಳಿಗೆ ಕಡಿವಾಣ ಹಾಕಿದ ಜಿಲ್ಲಾಡಳಿತ ಆದೇಶದ ಹಿನ್ನೆಲೆ ರಾಘವೇಂದ್ರ ಪೇಟಕರ್ ಎಂಬುವರು ಸುಮಾರು 30ಕ್ಕೂ ನಾನಾ ರೂಪಕ ಮಣ್ಣಿನ ಮೂರ್ತಿಗಳನ್ನೇ ಮಾರಾಟಕ್ಕೆ ತಂದಿದ್ದು ವಿಶೇಷವಾಗಿದೆ. ವಿಭಿನ್ನ ಶೈಲಿಯ ಗಣಪತಿಗಳು: ಈ ಬಾರಿ ಖರೀದಿದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಕಲಾಕಾರರು ಸಿದ್ಧ ಪಡಿಸಿದ ಮೂರ್ತಿಗಳ ಆಗಮನವಾಗಿದ್ದು ಕಿನ್ನಾಳದಲ್ಲಿ ಸುಮಾರು 100 ಕಲಾಕಾರರಿಗೆ ಗಣೇಶ ಮೂರ್ತಿಯನ್ನೇ ಸಿದ್ದಪಡಿಸಲು ಸರಕಾರವೇ ನೀಡಿದ 5 ಎಕರೆ ಜಮೀನಿನ ಉತ್ತಮ ಜೇಡಿ ಮಣ್ಣಿನ ಮೂರ್ತಿಗಳನ್ನು ಮಾರಾಟಕ್ಕೆ ತರಲಾಗಿದೆ. 400 ರೂ.ದಿಂದ 20 ಸಾವಿರ ರೂ. ಬೆಲೆ ಬಾಳುವ 1 ಅಡಿಯಿಂದ 7 ಅಡಿ ಎತ್ತರದ ಗಣಪತಿಗಳನ್ನು ತರಲಾಗಿದೆ. ವಿವಿಧ ಬಗೆಯ ಪರಮೇಶ್ವರ, ಶಂಕು, ಅಂಶ, ಭೂಮಿ, ಭೂಮಂಡಲ, ಕೃಷ್ಣ, ಆನೆ, ನವಿಲು, ಬಾಹುಬಲಿ, ಮಹಾರಾಜ. ನಂದಿ ಪರಮೇಶ್ವರ, ಬಾತುಕೋಳಿ ಇನ್ನೂ ಹಲವು ದೇವ ದೇವತೆಯರು ಹೊತ್ತ ಮೂರ್ತಿಗಳನ್ನು ಮಾರಾಟಕ್ಕೆ ಬಂದಿದ್ದು ಗಮನ ಸೆಳೆಯುತ್ತಿವೆ.
ಲಕ್ಷ್ಮೀ ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..