ಮಾನವೀಯ ಮೌಲ್ಯ ಕುಸಿತ
Team Udayavani, Sep 15, 2017, 12:22 PM IST
ವಿಜಯಪುರ: ಮನುಷ್ಯನ ನೆಮ್ಮದಿಗೆ ಕಸಿಯುವ ದುರಾಸೆಯಿಂದ ದೂರ ಇದ್ದಲ್ಲಿ ಸುಖೀ ಜೀವನ ನಡೆಸಲು ಸಾಧ್ಯ. ದುರಾಸೆ ಫಲವಾಗಿ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ಬಿ.ಎಸ್. ತಮಗೊಂಡ ಹೇಳಿದರು.
ನಗರದ ತುಳಜಾಭವಾನಿ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ
ಕಾರ್ಯಕ್ರಮದಲ್ಲಿ ಶರಣರು ಹಾಗೂ ಕಾಯಕ ಸದೃಢ ಆರೋಗ್ಯ ಹಾಗೂ ಯುವಕರು ವಿಷಯದ ಕುರಿತು ಉಪನ್ಯಾಸ ಮಂಡಿಸಿದ ಅವರು, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಮನುಷ್ಯನಿಂದು ಎಲ್ಲ ರಂಗಗಳಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದಾನೆ. ಆದರೆ ಅತಿಯಾದ ಆಸೆಯಿಂದ ನೆಮ್ಮದಿ ಕಳೆದುಕೊಂಡಿದ್ದಾನೆ ಎಂದರು.
ಶರೀರವು ಸತ್ಯಾತ್ಮಕ ಇಂದ್ರೀಯಗಳ ಜೊತೆಯಲ್ಲಿಯೇ ಜೀವಂತ ಶರೀರವಾಗುತ್ತದೆ. ನಿತ್ಯದ ಊಟದಲ್ಲಿ ಸಿರಿಧಾನ್ಯಗಳ ಬಳಕೆ ಹಾಗೂ ತಪ್ಪಲು, ಕಾಯಿಪಲ್ಲೆ, ಹಣ್ಣು ಹಂಪಲು, ಹಾಲು ತುಪ್ಪ ಇವುಗಳ ಬಳಕೆಯಿಂದ ಸದೃಢ ಕಾಯ ಹೊಂದಲು ಸಾಧ್ಯ. ತ್ರಿದೋಷಗಳಾದ ವಾತ, ಪಿತ್ತ, ಕಪದಲ್ಲಿ ಏರಿಳಿತವಾದರೆ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಎಲ್ಲ ಬೇಕೆಂಬ ಬೇಡಿಕೆಗಳಿಗೆ ಆಸೆಪಟ್ಟು ಒತ್ತಡಕ್ಕೆ ಒಳಗಾಗುತ್ತಿದ್ದೇವೆ. ಶರಣರು ಇದ್ದುದ್ದರಲ್ಲಿಯೇ ಸಂತೃಪ್ತ ಜೀವನ ಕಂಡವರು ಎಂದರು.
ಉಪನ್ಯಾಸ ಮಂಡಿಸಿದ ಜಿಲ್ಲಾಸ್ಪತ್ರೆ ಆಪ್ತ ಸಮಾಲೋಚಕ ರವಿ ಕಿತ್ತೂರ ಮಾತನಾಡಿ, ನಿಮ್ಮಲ್ಲಿ ಏನೆಲ್ಲ ಇದ್ದರೂ ಸದೃಢ
ಆರೋಗ್ಯ ಇಲ್ಲದಿದ್ದರೆ ಎಲ್ಲವೂ ಶೂನ್ಯ. ಅತಿಯಾದ ಸ್ವೇಚ್ಛಾಚಾರದ ಜೀವನ ಭವಿಷ್ಯಕ್ಕೆ ಮಾರಕವಾಗಲಿದೆ. ವ್ಯಕ್ತಿತ್ವವನ್ನೇ ಬಲಿ ಪಡೆಯುವ ಮನೋವಿಕಾರ ಗುಣಗಳನ್ನು ಬಿಡದಿದ್ದರೆ ಜೀವನ ನರಕವಾಗುತ್ತದೆ. ಕಾರ್ಖಾನೆಗಳು ಹೊರ ಸೂಸುವ ಪರಿಸರಕ್ಕೆ ಧಕ್ಕೆ ತರುವ ರಾಸಾಯನಿಕಯುಕ್ತ ತ್ಯಾಜ್ಯ ವಾವು, ನೀರು ಸೇರಿದಂತೆ ಇಡಿ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಇದರಿಂದ
ಮನುಷ್ಯ ಮಾತ್ರವಲ್ಲ ಜಲಚರಗಳು, ಪಶು, ಪಕ್ಷಿಗಳ ಸಂಕುಲಕ್ಕೂ ಸಂಚಕಾರ ತಂದಿದೆ. ಇನ್ನಾದರೂ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಲೂಕಾಧ್ಯಕ್ಷ ಯು.ಎನ್.ಕುಂಟೋಜಿ ಮಾತನಾಡಿದರು. ಡಾ| ಪ್ರಭಾವತಿ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ ಕುರ್ಲೆ, ಎಸ್. ವೈ. ನಡುವಿನಕೇರಿ, ಲಲಿತಾ ಯಲಿಗಾರ, ಮುತ್ತಣ್ಣ ಕಬಾಡೆ, ರಾಜಶೇಖರ ಕಳಕಳಮಠ, ದಿಲೀಪಕುಮಾರ ಮರಾಠೆ, ಹನುಮಂತ ಬತಗುಣಕಿ, ಅಲ್ಪಾ ಡಿ, ಅನಿಲ ತರಣಳ್ಳಿ, ಸೋಮನಾಥ ಬಿರಾದಾರ, ಆದರ್ಶ ನಾಯಕ, ನರಸಿಂಹ ಗುರುವ, ಜಾವೇದ ಮುಲ್ಲಾ, ಶಿವಾನಂದ ಬೀಳಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ