ನೆಲಕಚ್ಚಿದ ಬೆಲೆ ಖುಷಿಯಲ್ಲಿ ಗ್ರಾಹಕರು ಸಂಕಷ್ಟದಲ್ಲಿ ರೈತರು


Team Udayavani, Jan 8, 2018, 1:38 PM IST

vij-3.jpg

ಸಿಂದಗಿ: ದೇಶದ ಬೆನ್ನೆಲುಬು ರೈತ, ಅನ್ನದಾತ ರೈತ, ರೈತ ದೇವರು, ಜೈ ಜವಾನ್‌ ಜೈ ಕಿಸಾನ್‌ ಎಂದೆಲ್ಲ ಹೇಳುತ್ತೇವೆ. ಒಂದು ಸಲ ರೈತನ ಜೀವನದ ಕಡೆಗೆ ತಿರುಗಿ ನೋಡಿದರೆ ಎಂದೂ ರೈತನಾಗಬಾರದು ಎಂದಿನಿಸುವಷ್ಟು ಕಷ್ಟಕರ ಜೀವನ. ರೈತ ಅಭಿವೃದ್ಧಿಯಾದರೇ ದೇಶದ ಅಭಿವೃದ್ಧಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಅರಿಯಬೇಕು.

ರೈತ ಏನೇ ಬೆಳೆದರು ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಮಾರಾಟ, ಮರಣ ಯಾರಿಗೂ ತಿಳಿಯುವುದಿಲ್ಲ ಎಂದು ಸಮಾಧಾನ ಮಾಡಿಕೊಂಡು ರೈತ ಹೊರಟಿದ್ದಾನೆ. ಸಾಲ ಸೊಲ ಮಾಡಿ ಕೃಷಿ ಜೀವನ ನಡೆಸುತ್ತಿದ್ದಾನೆ. ಹೆಂಡತಿ ಮಕ್ಕಳ ಭವಿಷ್ಯ ಲೆಕ್ಕಿಸದೇ ಅವರನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ.

ಮಳೆ ನಂಬಿ ಮತ್ತು ಕಾಲುವೆ ನೀರನ್ನು ನಂಬಿ ಕೃಷಿ ಜೀವನ ನಡೆಸುತ್ತಿರುವ ರೈತ ತೊಗರಿ ಬೆಳೆದರೆ ಅದಕ್ಕೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ, ಕಬ್ಬು ಬೆಳೆದರೆ ಕಬ್ಬಿನಲ್ಲಿ ಸಕ್ಕರೆ ಅಂಶ ಕಡಿಮೆಯಿದೆ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಇವೆರಡು ಬೇಡ ಎಂದು ತೋಟಗಾರಿಕೆ ಬೆಳೆಯಿಂದ ಆದಾಯ ಬರುತ್ತದೆ ಎಂದು ನಿಂಬೆ ಮಾಡಿದರೆ ಕಳೆದ 2-3 ವರ್ಷಗಳಿಂದ ನಿಂಬೆಗೆ ಸೂಕ್ತ ಧಾರಣಿಯಿಲ್ಲ. ದಾಳಿಂಬೆ ಹಚ್ಚಿದರೆ ಕಾಯಿ ಕೊರೆಯುವ ರೋಗದ ಭಯ, ಹೀಗೆ ರೈತ ಭಯದಿಂದ ಕೃಷಿ ಜೀವನ ನಡೆಸುತ್ತಿದ್ದಾನೆ.

ದೀರ್ಘಾವಧಿ ಬೆಳೆ ನಿಂಬೆ, ದಾಳಿಂಬೆ ಬೆಳೆದರೂ 2-3 ವರ್ಷಗಳಿಂದ ಬೆಲೆ ಇಲ್ಲ. ಆರ್ಥಿಕತೆ ಹೆಚ್ಚಿಸಿಕೊಳ್ಳಲು ಅಲ್ಪಾವಧಿ ತೋಟಗಾರಿಕೆ ಬೆಳೆ ಕಾಯಿಪಲ್ಲೆ ಮಾಡಿದರೂ ರೈತನ ಕೈ ತುಂಬುತ್ತಿಲ್ಲ. ಕನಿಷ್ಠ 5-10 ರೂ.ಗೆ ಮಾರಾಟವಾಗಬೇಕಾದ ಮೆಂತೆ ಪಲ್ಲೆ, ಕೊತ್ತಂಬರಿ, ಕೆರಬೇವು, ರಾಜಗೀರಿ ಪಲ್ಲೆ, ಹುಣಸಿ ಪಲ್ಲೆ, ಮೂಲಂಗಿ, ಸೊಬ್ಬಸಿಗೆ, ತಪ್ಪಲ ಉಳ್ಳಾಗಡ್ಡಿ ಮುಂತಾದ ಕಾಯಿಪಲ್ಲೆಗಳು 5 ರೂ.ಗೆ 3 ಸುಡು, 10 ರೂ.ಗೆ 8 ಸೂಡು, 10 ರೂ.ಗೆ ದೀಡ ಕೆಜಿ ಟೊಮೇಟೋ ಮಾರಾಟವಾದರೆ ನಮ್ಮ ಗತಿಯೇನು ಎಂಬುವುದು ಮುಗ್ದ ರೈತರ ಪ್ರಶ್ನೆಯಾಗಿದೆ. 

20-30 ರೂ. ಕೊಟ್ಟ ಗುಟ್ಕಾ, ಮಾವಾ ತಿಂತಾರ 20 ರೂ. ಕೊಟ್ಟ ದಾಳಿಂಬರ ತೊಳಂಗಿಲ್ಲ, ಅರ್ಧ ಕೆಜಿಯಷ್ಟಿರುವ ದಾಳಿಂಬರ 20 ರೂ. ತೊಗೋರಿ ಎಂದ್ರ 20 ರೂ.ಗೆ 3 ಕೊಡ್ತಿಯೇನ, 4 ಕೋಡ್ತಿಯೇನ್‌ ಅಂತಾರ. 2 ಎಕರೆ ದಾಳಿಂಬರ ಮಾಡಿನಿ ಅದಕ್ಕ ಧಾರಣಿನೆ ಇಲ್ಲ. ಭಾಗಪ್ಪ ಪೂಜಾರಿ, ದಾಳಿಂಬೆ ಬೆಳೆಗಾರ, ಕನ್ನೋಳ್ಳಿ

ನಮಗ ಹೊಲಾಯಿಲ್ಲ. ರಟ್ಟಿಮ್ಯಾಲೆ ನಮ್ಮ ಜೀವನ. ರೈತರಿಂದ ಕೊಂಡು ಕೊಂಡ ಕಾಯಿಪಲ್ಲೆ ಸಂಜಿತಕಾ ಕುಂತ ಮಾರಿದ್ರೂ 50 ರೂ. ಉಳಿಯಲ್ಲ. ಮಾರುಕಟ್ಟೆಯಲ್ಲಿ ಕಾಯಿಪಲ್ಲೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಯಿಪಲ್ಲೆ ಮಾರಾಕ ಕುತ್ತಿನಿ. ಬರತಾರ ಒಂದ ರೂ., ಎರಡು ರೂ.ಗೆ ಒಂದ ಸೂಡ ಕೆಳತಾರ. 
ಸಾಯಿರಾಬಾನು ಬಾಗವಾನ, ಕಾಯಿಪಲ್ಲೆ ಮಾರಾಟಗಾರ್ತಿ

ಒಂದ ಎಕರೆ ಕೊತಂಬರಿ ಮಾಡಿನಿ. 10 ರೂ.ಗೆ ಒಂದ ಸೂಡ ಮಾರೋದು ಇವತ್ತ 2 ರೂ.ಗೆ ಒಂದ ಸೂಡ ಮಾರಾಕತ್ತದ. ತಂದ ಕೂಲಿಯಾಗುವುದಿಲ್ಲ. ಬರುವಾಗ ಟಂಟಂಗೆ ಮತ್ತು ಇಲ್ಲಿ ಜಕಾತಿಗೆ 10 ರೂ. ಕೊಡಬೇಕು. ಏನು ಉಳಿಯುವುದಿಲ್ಲ. ಕಾಯಿಪಲ್ಲೆ ಧಾರಣಿ ಇಳಿದಾಗ ನಮಗೂ ಏನಾದರು ಸರಕಾರ ಪರಿಹಾರ ನೀಡಬೇಕು.
 ಯಮನಪ್ಪ ಕುಂಬಾರ, ಕಾಯಿಪಲ್ಲೆ ಬೆಳೆದ ರೈತ, ಚಿಕ್ಕಸಿಂದಗಿ

ರೈತರು ತೋಟಗಾರಿಕೆ ಬೆಳೆ ಬೆಳೆದು ತಮ್ಮ ಆರ್ಥಿಕ ಜೀವನ ಸುಧಾರಿಸಿಕೊಳ್ಳಬೇಕು. ಬಹು ವಾರ್ಷಿಕ ಬೆಳೆ ಬೆಳೆಯುವ ಜೊತೆಗೆ ಅಲ್ಪಾವಧಿ ಬೆಳೆ ಬೆಳೆಯಬೇಕು. ಕೃಷಿಯಲ್ಲಿ ಹನಿ ನಿರಾವರಿ ಬಳಸಿಕೊಳ್ಳುವ ಮೂಲಕ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಪಟ್ಟಣದಲ್ಲಿನ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬೇಕು.
 ಬಿ.ಆರ್‌. ಲಕ್ಕೊಂಡ, ಸಹಾಯಕ ತೋಟಗಾರಿಕೆ ನಿದೇರ್ಶಕರು, ಸಿಂದಗಿ

ರಮೇಶ ಪೂಜಾರ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.