ಮಳೆ, ಗಾಳಿಗೆ ಧರೆಗುರುಳಿದ ಬಾಳೆ ಮರ
Team Udayavani, Jun 4, 2018, 11:16 AM IST
ನಾಲತವಾಡ: ಪಟ್ಟಣ ಸೇರಿದಂತೆ ರವಿವಾರ ಮಧ್ಯಾಹ್ನ ಏಕಾಏಕಿ ವಿಪರಿತ ಗಾಳಿ ಹಾಗೂ ಗುಡುಗು ಸಮೇತ ಸುರಿದ ಭಾರಿ ಮಳೆಗೆ ಸಮೀಪದ ಹಿರೇಮುರಾಳ ಗ್ರಾಮದಲ್ಲಿ ಸಿಡಿಲಿನ ಅಬ್ಬರಕ್ಕೆ ಎರಡು ಕುರಿಗಳು ಮೃತಪಟ್ಟಿದ್ದು ತೆಂಗಿನ ಮರ ಉರುಳಿ ಬಿದ್ದಿದೆ.
ಗ್ರಾಮದ ಶಿವಾಜಿ ಬೈಲಪತ್ತಾರ ಎಂಬುವರಿಗೆ ಸೇರಿದ ಕುರಿಗಳು ಹಾಗೂ ದಾವಲಸಾಬ್ ಎಂಬುವರಿಗೆ ತೆಂಗಿನ ಮರ ಸೇರಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಎ.ಐ. ಸಾಲಿಮಠ ಹಾಗೂ ಪಶು ವೈದ್ಯರಾದ ಸೀತಿಮನಿ ರಾಮಣ್ಣ ವಾಲೀಕಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಸ್ತವ್ಯಸ್ತ: ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಸುರಿದ ಮಳೆಯಿಂದ ಚರಂಡಿ ನೀರು ರಸ್ತೆಯಲ್ಲಿ ಹರಿದಾಡಿ ಅಂಗಡಿಯೊಳಗೆ ನುಗ್ಗಿ ವ್ಯವಹಾರಕ್ಕೆ ಕೆಲ ಹೊತ್ತು ಅಡಚಣೆಯಾಯಿತು. ಇನ್ನೊಂದೆಡೆ ಬಸ್ ನಿಲ್ದಾಣದಲ್ಲೂ ಸಹ ಹರಿದ ಮಳೆ ನೀರು ಪ್ರಯಾಣಿಕರಿಗೂ ತೀವ್ರ ಪರದಾಡಬೇಕಾಯಿತು.
ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲೆಲ್ಲಾ ಹರಿದಾಡಿದ ವಿಪರಿತ ನೀರಿನ ಪರಿಣಾಮ ವಾಹನ ಹಾಗೂ ಬೈಕ್ ಸವಾರರು ಸಂಕಷ್ಟ ಅನುಭವಿಸಿದ ಪ್ರಸಂಗ ನೆಡೆಯಿತು. ಮಳೆ ಗಾಳಿಗೆ ಪಟ್ಟಣದ ಹಲವು ತೋಟಗಳಲ್ಲಿ ಬಾಳೆ ನೆಲಕ್ಕುರುಳಿತು. ರಮೇಶ ಗಂಗನಗೌಡ, ಅಮರಪ್ಪ ಗಂಗನಗೌಡ, ತಿಪ್ಪಣ್ಣ ಕೆಂಭಾವಿ, ರೆವಣೆಪ್ಪ ಕೆಂಭಾವಿ ಅವರಿಗೆ ಸೇರಿದ ಬಾಳೆ ನೆಲಕ್ಕುರುಳಿದ ಪರಿಣಾಮ ರೈತರು ಹಾನಿ ಅನುಭವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು