ಮೇಯರ್‌ ವಿರುದ್ಧ ಸದಸ್ಯರ ಸಿಡಿಮಿಡಿ


Team Udayavani, Jun 19, 2018, 3:31 PM IST

vijayapura-1.jpg

ವಿಜಯಪುರ: ನಗರದ ಮಾಸ್ಟರ್‌ಪ್ಲಾನ್‌ ಅನುಷ್ಠಾನಕ್ಕೆ ಮಹಾನಗರ ಪಾಲಿಕೆ 14ನೇ ಹಣಕಾಸು ಯೋಜನೆ ಅನುದಾನ ಬಳಸಿಕೊಳ್ಳುವ ಚಿಂತನೆಗೆ ಮಹಾನಗರ ಪಾಲಿಕೆ ಸದಸ್ಯರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ ಘಟನೆ ಜರುಗಿತು.

ಸೋಮವಾರ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್‌ ಸಂಗೀತಾ ಪೋಳ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಮೇಯರ್‌ ಅವರು ನಿಯಮಿತವಾಗಿ ಸಭೆ ಕರೆಯುವುದಿಲ್ಲ. ಈಗ ಕೇವಲ ಸಣ್ಣ ವಿಷಯಕ್ಕೆ ಸಭೆ ಕರೆದಿರುವ ನಡೆ ಎಷ್ಟು ಸರಿ, ಸಾಮಾನ್ಯ ಸಭೆಯಲ್ಲಿ ನಗರದ ಸಮಗ್ರ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದು ಸದಸ್ಯ ಗೋಪಾಲ ಘಟಕಾಂಬಳೆ, ಸಜ್ಜಾದೇಪೀರಾ ಮುಶ್ರೀಫ್‌, ಪ್ರಕಾಶ ಮಿರ್ಜಿ ಸೇರಿದಂತೆ ಇತರರು ಆಕ್ಷೇಪಿಸಿದರು.

ಹೀಗಾಗಿ ಸಂಡೇ ಬಜಾರ್‌ ಗುತ್ತಿಗೆ ಮುಂದುವರಿಸುವ ವಿಷಯದ ಬದಲಾಗಿ ಮಾಸ್ಟರ್‌ಪ್ಲಾನ್‌ ಅನುಷ್ಠಾನವೇ
ಹೆಚ್ಚಿನ ಸಮಯ ನುಂಗಿ ಹಾಕಿತು. 14ನೇ ಹಣಕಾಸು ಯೋಜನೆಯ ಅನುದಾನ ಮಾಸ್ಟರ್‌ಪ್ಲಾನ್‌ ಯೋಜನೆಗೆ
ಬಳಕೆ ಮಾಡುವುದು ಸೂಕ್ತ. ಇದಲ್ಲದೇ 100 ಕೋಟಿ ರೂ. ಮಾಸ್ಟರ್‌ಪ್ಲಾನ್‌ಗಾಗಿಯೇ ವಿಶೇಷ ಅನುದಾನ
ತರುತ್ತೇವೆ, ಯಾರೂ ಚಿಂತೆ ಮಾಡಬೇಡಿ ಎಂದು ಉಪ ಮೇಯರ್‌ ರಾಜೇಶ ದೇವಗಿರಿ, ಪರಶುರಾಂ
ರಜಪೂತ, ರಾಹುಲ್‌ ಜಾಧವ, ಮೊದಲಾದವರು ಒಪ್ಪಿಗೆ ಸೂಚಿಸಿ ಸಮರ್ಥನೆ ಮಾಡಿಕೊಂಡರು.

ರಾಹುಲ್‌ ಜಾಧವ ಮಾತನಾಡಿ, ಮಾಸ್ಟರ್‌ಪ್ಲಾನ್‌ ಕಾಮಗಾರಿ ಮುಗಿಸಲು ತ್ವರಿ ಕ್ರಮ ಕೈಗೊಳ್ಳುವುದರಿಂದ
ನಗರ ನಾಗರಿಕರಿಗೆ ಅನುಕೂಲವಾಗಲಿದೆ. ನಗರದ ಅಭಿವೃದ್ಧಿಗೆ ಪಾಲಿಕೆ ಅನುದಾನ ಬಳಸಿದರೆ ತಪ್ಪೇನು
ಎಂದು ಸಮರ್ಥಿಸಿದರು. 

ಹಿರಿಯ ಸದಸ್ಯ ವಿಜಯಕುಮಾರ ಮಂಗಳವೇಡೆ ಮಾತನಾಡಿ, ಯಾವ ವಿಷಯಕ್ಕೇ ಆಗಲಿ ಸಭೆಯನ್ನಂತೂ ಕರೆದಿದ್ದೀರಿ. ಹೀಗಾಗಿ ನಗರದ ಸಮಗ್ರ ಸಮಸ್ಯೆ ಚರ್ಚೆಗೆ ಅವಕಾಶ ನೀಡಿ ಎಂದು ಆಗ್ರಹಿಸಿದರು. ಸಂಡೇ ಬಜಾರ್‌ ಟೆಂಡರ್‌ನ್ನು ಮೂರು ವರ್ಷಗಳ ಅವಧಿಗೆ ಮುಂದುವರಿಕೆ ನಿರ್ಧಾರಿದಂದ ಪಾಲಿಕೆಗೆ ನಷ್ಟವಾಗುತ್ತದೆ. ಇದೊಂದೆ ವಿಷಯದ ಚರ್ಚೆಗೆ ಸಭೆ ಕರೆಯಲಾಗಿದೆ.

ಮತ್ತೆ ಮೂರು ವರ್ಷಕ್ಕೆ ಟೆಂಡರ್‌ ಮುಂದುವರಿಸುವ ನಿರ್ಧಾರದ ಹಿಂದಿನ ಉದ್ದೇಶ, ಸಭೆಯಲ್ಲಿ ಇಂತ ನಿರ್ಣಯ ಕೈಗೊಡರೆ ಪಾಲಿಕೆಗೆ ಆರ್ಥಿಕ ನಷ್ಟ ಹಾಗೂ ಹಿನ್ನಡೆ ಆಗಲಿದೆ. ಭವಿಷ್ಯದಲ್ಲಿ ಕಿತ್ತುಹೋದ ಶೌಚಾಲಯದ ಚೇಂಬರ್‌
ಅಳವಡಿಕೆಗೂ ಹಣ ಇಲ್ಲದ ದುಸ್ಥಿತಿ ಬಂದೀತು ಎಂದು ಆಕ್ಷೇಪಿಸಿದ ರವೀಂದ್ರ ಲೋಣಿ, ಸಭೆ ಭಹಿಷ್ಕರಿಸಿ ಹೊರ
ನಡೆದರು.

ಸಂಡೇ ಬಜಾರ್‌ ಟೆಂಡರ್‌ ನೀಡುವ ಬದಲು ಪಾಲಿಕೆಯೇ ನೇರವಾಗಿ ವ್ಯಾಪಾರಿಗಳಿಂದ ಕಡಿಮೆ ಶುಲ್ಕ ಪಡೆಯಲು ಮುಂದಾಗಿ, ಅದಕ್ಕಾಗಿ ಓರ್ವ ಸಿಬ್ಬಂದಿಯನ್ನು ನೇಮಿಸಿಕೊಂಡರೆ ಪಾಲಿಕೆಗೆ ಆದಾಯವಾಗಲಿದೆ ಎಂದು ವಿಜಯಕುಮಾರ ಮಂಗಳವೇಡೆ ಸಲಹೆ ನೀಡಿದರು.

ಒಂದೇ ವಿಷಯಕ್ಕೆ ಸಭೆ ಕರೆದಿರುವ ಮೇಯರ್‌ ಅವರು ಎಂದಾದರೂ ತಮ್ಮ ವಾರ್ಡ್‌ಗೆ ಭೇಟಿ ನೀಡಿ
ಸಾರ್ವಜನಿಕರ ಸಮಸ್ಯೆ ಆಲಿಸಿದ್ದಾರೆಯೇ ಎಂದು ಪ್ರಶ್ನಿಸಿದ ಪ್ರಮಾನಂದ ಬಿರಾದಾರ, ನಮ್ಮ ಬಡಾವಣೆ ನಿವಾಸಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ. ನಮ್ಮ ವಾರ್ಡ್‌ಗೆ ಭೇಟಿ ನೀಡುವಂತೆ ಹತ್ತಾರು ಬಾರಿ ಮಾಡಿಕೊಂಡ ಮನವಿಗೆ ಮೇಯರ್‌ ಸ್ಪಂದಿಸಿಲ್ಲ ಎಂದು ಆಕ್ಷೇಪಿಸಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ವಾರ್ಡ್‌ಗಳ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ವಾರ್ಡ್‌ಗೆ ಸಾಕಷ್ಟು ಅನುದಾನ ನೀಡಿ, ಅಭಿವೃದ್ಧಿ ಮಾಡಲಾಗುತ್ತಿದೆ. ಸಾಯಿಬಾಬಾ ಗುಡಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ್ದೇನೆ ಎಂದು ಮೇಯರ್‌ ಸಮಜಾಯಿಸಿ ನೀಡಿದಾಗ, ದೇವರ ದರ್ಶನಕ್ಕೆ ನನ್ನ ವಾರ್ಡ್‌ಗೆ ಬರದೆ ಸಮಸ್ಯೆ
ಪರಿಹಾರಕ್ಕೆ ನನ್ನ ವಾರ್ಡ್‌ಗೆ ಬನ್ನಿ ಎಂದು ಕುಟಿಕದರು.

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.