ಅಗಲಿದ ನಾಯಕಿಗೆ ಗಣ್ಯರ ನಮನ
Team Udayavani, Jul 24, 2018, 2:36 PM IST
ನಾಲತವಾಡ: ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅಗಲಿಕೆಗೆ ಗಣ್ಯರ ನುಡಿನಮನಗಳ ಅರ್ಪಣೆಗಾಗಿ ನಿವಾಸದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ದಪಡಿಸಲಾಗಿತ್ತು.
ವೇದಿಕೆಯಲ್ಲಿ ದಿ| ವಿಮಲಾಬಾಯಿ ದೇಶಮುಖರ ಅಂತಿಮ ದರ್ಶನಕ್ಕೆ ತಂಡೋಪ ತಂಡವಾಗಿ ಆಗಮಿಸಿದ ಮಾಜಿ ಹಾಗೂ ಹಾಲಿ ಸಚಿವರು, ಶಾಸಕರು, ಗಣ್ಯರು ಹಾಗೂ ಶ್ರೀಗಳು ದೇಶಮುಖ ಅವರ ಆತ್ಮಕ್ಕೆ ಶಾಂತಿ ಕೋರಿ ನುಡಿನಮನಗಳನ್ನು ಅರ್ಪಿಸಿದರು.
ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಎಂದಿಗೂ ಹಟ ಮಾಡಿ ಅಧಿಕಾರ ಪಡೆಯದ ದೇಶಮುಖ ಮನೆತನದ ಸರಳ, ಸಜ್ಜನಿಕೆ ಇಂದಿನ ರಾಜಕಾರಣಿಗಳು ಕಲಿಯಬೇಕು. ನನಗೂ ದೇಶಮುಖ-ನಾಡಗೌಡ ಕುಟುಂಬಕ್ಕೆ ಅನೋನ್ಯ ಸಂಬಂಧವಿದೆ. ಸಾವಿರಾರು ಎಕರೆ ಜಮೀನು ದಾನ ನೀಡಿ ಇಂದಿಗೂ ಈ ಭಾಗದ 40 ಹಳ್ಳಿಗಳ ಬಡವರ ಪಾಲಿಗೆ ದೇವರೆಂದೇ ಖ್ಯಾತಿಗಳಿಸಿದ ವಿಮಲಾಬಾಯಿ ದೇಶಮುಖ ಅವರ ಅಗಲಿಕೆ ನೋವನ್ನು ನಾಡಗೌಡ-ದೇಶಮುಖ ಮನೆತನಕ್ಕೆ ಭರಿಸುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುವೆ ಎಂದರು.
ಶಾಕರಾದ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ದೇಶಮುಖ ಅವರ ರಾಜಕೀಯ ಬದುಕು ಮಾದರಿಯಾಗಿದೆ ಎಂದರು. ಮಾಜಿ ಸಚಿವ ಸಿ.ಎಸ್. ನಾಡಗೌಡ ಮಾತನಾಡಿ, ವಿಮಲಾಬಾಯಿ ದೇಶಮುಖ ಅವರ ಅಗಲಿಕೆಯಿಂದ ನಾಡಗೌಡ ಮನೆತನಕ್ಕೆ ಆಘಾತ ಉಂಟಾಗಿದೆ. ಈ ಭಾಗದಲ್ಲೇ ಬಡವರ ಸಮಸ್ಯೆಗಳಿಗೆ ದೇಶಮುಖರ ಮನೆಯೇ ನ್ಯಾಯಾಲಯವಾಗಿತ್ತು ಎಂದರು.
ಶ್ರದ್ಧಾಂಜಲಿ ಸಭೆ ವೇದಿಕೆಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಿರೂರಿನ ಡಾ| ಬಸವಲಿಂಗ ಮಹಾಸ್ವಾಮಿಗಳು, ಗದಗ ಕಪ್ಪತಗುಡ್ಡದ ಶಿವಕುಮಾರ ಮಹಾಸ್ವಾಮಿಗಳು, ಬಿದರಕುಂದಿಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಹಾದೇವ್ ಶಾಸ್ತ್ರಿಗಳು, ಮಾಜಿ ಸಚಿವ ಮುರುಗೇಶ ನಿರಾಣಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಎಂ.ಬಿ. ನಾವದಗಿ, ಎಂ.ಎ. ಖಾಲೆಬಾಗ್, ಅಡಿವೆಪ್ಪ ಕಡಿ, ಚನ್ನವೀರ ಸಗರನಾಳ, ಅಬ್ದುಲ್ ರಹೆಮಾನ್ ಬಿದರಕುಂದಿ, ಬಿ.ಎಂ. ಹಿರೇಮಠ, ಚಿ.ಎಸ್. ಹಿರೇಮಠ, ಎಲ್.ಆರ್. ಗೊಳಸಂಗಿ, ಸಚಿನ ದೇಶಮುಖ, ಎಂ.ಪಿ. ನಾಡಗೌಡ, ಎಸ್.ಆರ್. ಪಾಟೀಲ, ಮಹಾಂತೇಶ ಕೌಜಲಗಿ, ಮಾಜಿ ಶಿವಪುತ್ರಪ್ಪ ದೇಸಾಯಿ, ಬಿ.ಎಸ್. ಪಾಟೀಲ ಯಾಳಗಿ, ಅರವಿಂದ ಕೊಪ್ಪ, ಮಾಜಿ ಸಚಿವ ಎಸ್.ಆರ್. ಪಾಟೀಲ ಅಂತಿಮ ನುಡಿ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ