ಆಟೋಗೆ ಬಂತು ಡಿಜಿಟಲ್‌ ಮೀಟರ್‌


Team Udayavani, Aug 4, 2018, 12:09 PM IST

vij-2.jpg

ವಿಜಯಪುರ: ಐತಿಹಾಸಿಕ ವಿಜಯಪುರ ನಗರ ಮಹಾನಗರ ಪಾಲಿಕೆಯಾಗಿ ಮೇಲೆರ್ಜೆಗೆ ಏರಿದ ನಾಲ್ಕು ವರ್ಷಗಳ ಬಳಿಕ ನಗರದಲ್ಲಿ ಓಡಾಡುವ ಮೀಟರ್‌ ಅಳವಡಿಕೆ ಆಟೋಗಳು ಓಡಾಟ ಆರಂಭಿಸಿವೆ. ಅಚ್ಚರಿಯ ವಿಷಯ ಎಂದರೆ ಕಳೆದ ಎರಡು ತಿಂಗಳಿಂದ ನಗರದಲ್ಲಿ ಸಾವಿರಕ್ಕೂ ಮಿಕ್ಕ ಹೊಸ ಆಟೋಗಳಿಗೆ ಮೀಟರ್‌ ಅಳವಡಿಸಿದ್ದು, ಒಂದೇ ಒಂದು ಆಟೋ ಮೀಟರ್‌ ಬಳಸಿ ಪ್ರಯಾಣಿಕರು ಸಂಚಾರ ಮಾಡಿಲ್ಲ, ಬಾಡಿಗೆ ನೀಡಿಲ್ಲ. ಹಳೆಯ ಪದ್ಧತಿಯಲ್ಲೇ ಓಡಾಟ ಆರಂಭಿಸಿವೆ.

ವಿಜಯಪುರ ಮಹಾನಗರದಲ್ಲಿ ಈಗಾಗಲೇ ಹಳೆಯ ಆಟೋ ಹಾಗೂ ಟಂಟಂ ಸೇರಿ 4,468 ಆಟೋಗಳಿದ್ದು ಯಾವ ಆಟೋಕ್ಕೂ ಮೀಟರ್‌ ಅಳವಡಿಕೆ ಇಲ್ಲ. ಬದಲಾಗಿ ನಗರದ ಮಹಾತ್ಮ ಗಾಂಧೀಜಿ ವೃತ್ತವನ್ನು ಕೇಂದ್ರೀಕರಿಸಿಕೊಂಡು
ನಗರದ ಪ್ರಮುಖ ರಸ್ತೆಯಲ್ಲಿ ನಿಗದಿತ ಯಾವುದೇ ಸ್ಥಳಕ್ಕೆ ಪ್ರಯಾಣಿಸಿದರೂ ಕೇವಲ 10 ರೂ. ನಿಗದಿತ ನಿಖರ ಬಾಡಿಗೆ
ಇದೆ. ಪ್ರಮುಖ ರಸ್ತೆಯ ಸಂಚಾರಕ್ಕೆ 10 ರೂ. ನೀಡಿದರೂ, ಬಡಾವಣೆಯಲ್ಲಿ ಹೋಗಲು ಆಟೋ ಚಾಲಕರು ಕೇಳಿದಷ್ಟು
ಹೆಚ್ಚಿನ ಹಣ ನೀಡುವ ವ್ಯವಸ್ಥೆ ಇದೆ.

ಇದೀಗ ಮೇ ತಿಂಗಳಿಂದ ಮಹಾನಗರದಲ್ಲಿ ಹೊಸದಾಗಿ ಆಟೋ ನೋಂದಣಿಗೆ ಸರ್ಕಾರ ಡಿಜಿಟಲ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿದೆ. ಹೀಗಾಗಿ ಕಳೆದ ಎರಡು ತಿಂಗಳಿಂದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 1050 ಹೊಸ ಆಟೋಗಳು ನೋಂದಣಿ ಮಾಡಿ, ಡಿಜಿಟಲ್‌ ಮೀಟರ್‌ ಅಳವಡಿಸಿಕೊಂಡಿವೆ. ಜೂನ್‌ ಆರಂಭದಿಂದಲೇ ಡಿಜಿಟಲ್‌ ಮೀಟರ್‌ ಆಟೋ ಓಡಾಡುತ್ತಿದ್ದರೂ ಒಬ್ಬನೇ ಪ್ರಯಾಣಿಕ ಮೀಟರ್‌ ಶುಲ್ಕ ಭರಿಸಿ ಓಡಾಡಿಲ್ಲ.
 
ಮೀಟರ್‌ ಅಳವಡಿಕೆ ಮಾಡಿಕೊಂಡಿರುವ ಆಟೋ ಹತ್ತಿದ ಪ್ರಯಾಣಿಕರು ಮೊದಲ 1.5 ಕಿ.ಮೀ. 15 ರೂ. ಹಾಗೂ ಮೊದಲ 3 ಕಿ.ಮೀ. 25 ರೂ. ಬಾಡಿಗೆ ಭರಿಸುವ ಎರಡು ಹಂತದಲ್ಲಿ ನಂತರದ ಪ್ರತಿ ಕಿ.ಮೀ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಈ ದರ ಒಂದೂವರೆ ಪಟ್ಟಾಗುತ್ತದೆ. ಅಂದರೆ ಕ್ರಮವಾಗಿ 22.50 ರೂ. ಹಾಗೂ 37.50 ರೂ. ಭರಿಸಬೇಕು ಎಂದು ನಿಗದಿ ಮಾಡಿವೆ.

ಹೊಸ ಆಟೋ ಕೊಂಡು ನೋಂದಣಿ ಮಾಡಿಸುವಾಗ ಡಿಜಿಟಲ್‌ ಮೀಟರ್‌ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಮೀಟರ್‌ ಅಳವಡಿಕೆ ಅನಿವಾರ್ಯವಾಗಿದೆ. ಪ್ರಯಾಣಿಕರು ಈಗಿರುವ 10 ರೂ. ಚಾರ್ಜ್‌ ನೀಡುವುದೇಕ್ಕೇ ಜಗಳ ತೆಗೆಯುತ್ತಿದ್ದು, ಮೀಟರ್‌ ಚಾರ್ಜ್‌ ನೀಡಲು ಒಪ್ಪುತ್ತಿಲ್ಲ. ಹೀಗಾಗಿ ಮೀಟರ್‌ ಅಳವಡಿಕೆ ಸಾಂಕೇತಿಕವಾಗಿದ್ದು, ಪ್ರಯಾಣಿಕರಿಗೂ ಇದರಿಂದ ಒಳಿತಾಗಿಲ್ಲ, ನಮಗೂ ಇದರಿಂದ ಲಾಭವಾಗಿಲ್ಲ ಎಂಬುದು ಆಟೋ ಚಾಲಕರ ಗೊಣಗಾಟ. 

ವಿಜಯಪುರ ಒಟ್ಟು ನಗರದ ಒಳ ಓಡಾಟವೇ 7 ಕಿ.ಮೀ. ಇತಿಮಿತಿಯಲ್ಲಿದೆ. ಹೆಸರಿಗೆ ನಗರದಂತಿರುವ ವಿಜಯಪುರದ
ಬಡವರಿಗೆ ಅದರಲ್ಲೂ ನಿತ್ಯವೂ ಕೂಲಿಗೆ ಓಡಾಡುವ ಬಡ ಪ್ರಯಾಣಿಕರಿಗೆ ಕನಿಷ್ಠ 25 ರೂ. ಮೀಟರ್‌ ಚಾರ್ಜ್‌ ನೀಡುವಷ್ಟು ಶಕ್ತಿ ಖಂಡಿತಾ ಇಲ್ಲ. ಮಹಾನಗರ ಪಾಲಿಕೆ ಆಗಿದ್ದರೂ ವಿಜಯಪುರ ಮಹಾನಗರ ಮಾತ್ರವಲ್ಲ ಇಡಿ
ಜಿಲ್ಲೆಯೇ ಬಡವರಿಂದ ಕೂಡಿದೆ. ಈಗಿರುವ 10 ರೂ. ಬಾಡಿಗೆ ನೀಡುವುದಕ್ಕೆ ಗೊಣಗುತ್ತಿದ್ದು ಮೀಟರ್‌ ಅಳವಡಿಕೆ ಬಾಡಿಕೆ ನೀಡಲು ಸಾಧ್ಯವಿಲ್ಲ ಎಂಬುದು ಪ್ರಯಾಣಿಕರ ದೂರು.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.