ಮೌಲ್ಯಾಧಾರಿತ ರಾಜಕೀಯ ಮುಕುಟ ಹೆಗಡೆ
Team Udayavani, Aug 31, 2018, 3:30 PM IST
ವಿಜಯಪುರ: ಇಂದಿನ ಕಲುಷಿತ ರಾಜಕಾರಣಿದ ಮಧ್ಯೆಯೂ ಪರಿಶುದ್ಧ ರಾಜಕೀಯ ಜೀವನ ನಡೆಸಿದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ದೇಶಕ್ಕೆ ಮಾದರಿಯಾದ ಸಾರ್ವಕಾಲಿಕ ಅತ್ಯುತ್ತಮ ರಾಜ್ಯಾಡಳಿತ ನಡೆಸಿ ಮೌಲ್ಯಾಧಾರಿತ ರಾಜಕೀಯ ಎಂಬ ಹೊಸ ಶಕೆಯನ್ನೇ ಆರಂಭಿಸಿದ್ದ ರಾಜಕೀಯ ಆದರ್ಶ ಎಂದು ಎ.ಬಿ. ಜತ್ತಿ ಪ.ಪೂ ಕಾಲೇಜಿನ ಉಪನ್ಯಾಸಕ ಅಮರೇಶ ಸಾಲಕ್ಕಿ ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 93ನೇ ಜನ್ಮದಿನ ಅಂಗವಾಗಿ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ಹೆಗಡೆ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ದೇಶ ಕಂಡ ಅಪರೂಪದ ರಾಜಕೀಯ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ ಅವರ ವ್ಯಕ್ತಿತ್ವ ಮೇರುಗಿರಿಯಾಗಿದ್ದರೂ ಅಧಿಕಾರದ ಸಂದರ್ಭದಲ್ಲಿ ಹಲವು ಏಳು-ಬೀಳು ಕಂಡವರು. ರಾಜಕೀಯ ನೈತಿಕ ಮೌಲ್ಯಗಳಿಗೆ
ಮತ್ತೂಂದು ನಿದರ್ಶನ ಎಂಬಂತಿದ್ದ ಅವರು, ದೂರದೃಷ್ಟಿತ್ವದ ಮಹತ್ವಾಕಾಂಕ್ಷೆಯ ನಾಯಕರಾಗಿದ್ದರು ಎಂದರು.
ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆ ಪ್ರಧಾನ ಕಾರ್ಯದರ್ಶಿ ಸಂತೋಕುಮಾರ ನಿಗಡಿ ಮಾತನಾಡಿ, ಅಧಿ ಕಾರಕ್ಕಾಗಿ ಜೋತುಬಿದ್ದು ಕೊರಗಿದ ರಾಮಕೃಷ್ಣ ಹೆಗಡೆ ಅವರು, ಅಧಿಕಾರ ಸಿಕ್ಕಾಗ ಜನಪರ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದವರು. ಸ್ಥಳೀಯ ಆಡಳಿತ ಬಲವರ್ಧನೆಗೆ ಅಧಿಕಾರ ವಿಕೇಂದ್ರೀಕರಣ ಮಾಡಿ ರಾಜ್ಯದಲ್ಲಿ ಪಂಚಾಯತ ರಾಜ್ಯ ವ್ಯವಸ್ಥೆ ಜಾರಿಗೆ ತಂದರು ಎಂದರು.
ಮಹಾಂತೇಶ ಅಲೆಗಾವಿ ಮಾತನಾಡಿ, ಭಾರತ ಕಂಡ ಚತುರ ರಾಜಕೀಯ ನಾಯಕ ಎನಿಸಿಕೊಂಡಿದ್ದ ಹೆಗಡೆ ಅವರ ವ್ಯಕ್ತಿತ್ವ ತೀರಾ ವಿಭಿನ್ನವಾಗಿತ್ತು. ಅದ್ಭುತ ವಾಕಚಾತುರ್ಯದ ವಾಗ್ಮಿಯಾಗಿದ್ದರು. ಆಡು ಪ್ರತಿ ಮಾತಿನಲ್ಲೂ ಹೊಣೆಗಾರಿಕೆ ಇರುತ್ತಿತ್ತು. ಕರ್ನಾಟಕದ ಭವಿಷ್ಯ ಅಡಗಿರುತ್ತಿತ್ತು. ಭವಿಷ್ಯಕ್ಕೆ ದೊಡ್ಡ ಮಟ್ಟದ ರಾಜಕೀಯ ನಾಯಕರ ಕೊಡುಗೆ ನೀಡುವ ಉದ್ಧಾತ್ತ ಧ್ಯೇಯದೊಂದಿಗೆ ರಾಜಕೀಯ ನಡೆಸಿದರು ಎಂದರು.
ಪಿ.ವಿ.ಕುಲಕರ್ಣಿ, ಮಾರುತಿ ಹುಲ್ಲನ್ನವರ, ಅಮೋಘ ಗವಳಿ, ಬಸವರಾಜ ಜುಮನಗೋಳ, ಸಚಿನ ಒಳಸಂಗ, ಮುತ್ತು ಅಥರ್ಗಾ, ಶಿವಾನಂದ ಕಟಾಯಿ, ಅಶೋಕ ಅಂಬಾಜಿ ಇತರರು ಹಾಜರಿದ್ದರು. ರವಿ ಕುರ್ಲೆ ಸ್ವಾಗತಿಸಿದರು.
ಸತೀಶ ಆಹೇರಿ ನಿರೂಪಿಸಿದರು. ರುದ್ರೇಶ ಜತ್ತಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ
BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ