ವಿಜಯಪುರ: ಅಪ್ರಕಟಿತ ಅರೇಬಿಕ್‌ ಶಾಸನ ಪತ್ತೆ


Team Udayavani, Sep 10, 2018, 3:48 PM IST

bid-6.jpg

ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಅಪ್ರಕಟಿತ ಅರೇಬಿಕ್‌ ಶಾಸನ ಪತ್ತೆಯಾಗಿದೆ. ಅಲಿಕ್‌ ರೋಜಾ ಸಮೀಪದ ಸಾದಾತ್‌ ಮಸೀದಿ ದರ್ಗಾ ಸ್ಥಳದಲ್ಲಿ ಸಂಶೋಧಕ ಡಾ| ಎ.ಎಲ್‌. ನಾಗೂರ ಶಾಸನ ಪತ್ತೆ ಹಚ್ಚಿದ್ದಾರೆ.

ಅಪ್ರಕಟಿತ ಸದರಿ ಶಾಸನ ಮಹ್ಮದ್‌ ಆದಿಲಶಾಹನ ಕಾಲಕ್ಕೆ ಸೇರಿದ್ದು, ಅರೇಬಿಯಾ ದೇಶದ ತುರೇಮಿ ಪಟ್ಟಣ ಸಮೀಪದ ಹಜರ್‌ ಮೌತ್‌ ನಿಂದ ವಿಜಯಪುರ ನಗರಕ್ಕೆ ಆಗಮಿಸಿದ್ದ ಖಾದ್ರಿಯಾ ಶಾಖೆ ಸೂಫಿ ಸಂತರಾದ ಸೈಯದ್‌ ಶಾಹ ಜಾಫರ್‌ ಸಕಾಫ್‌ ಇವರ ನಿಧನದ ಕುರಿತು ಮಾಹಿತಿ ನೀಡುತ್ತಿದೆ. 

ಹತ್ತು ಸಾಲುಗಳನ್ನು ಹೊಂದಿರುವ ಶಾಸನದಲ್ಲಿ 8ನೇ ಸಾಲು ಮಾತ್ರ ಪರ್ಶಿಯನ್‌ ಭಾಷೆ ಬಳಸಲಾಗಿದೆ. ಅಲ್ಲಾಹನು ಪರಮದಯಾಳು; ಆತನೊಬ್ಬನೆ ಮೊಹಮ್ಮದರು (ಸ) ಆತನ ಪ್ರವಾದಿಗಳು. ಅಲ್ಲಾಹನ ಸಂತರ ಮೇಲೆ ಯಾವುದೇ ಭಯ ದುಃಖಗಳು ಉಂಟಾಗವು, ಇದು ನಿಸ್ಸಂಶಯ. ಅವರ ಸಮಾಧಿ  ಪವಿತ್ರವಾದುದು. ಗುರುವಿನ ಗುರುವಾದ ಸಾದಾತರ ಮುಖ್ಯಸ್ಥ ಸೈಯದ್‌ ಶಾಹ ಜಾಫರ್‌ ಸಕಾಫರ್‌ ಅವರಿಗೆ ಗೌರವಾರ್ಪಣೆ. ಅರೇಬಿಯಾದ ತುರೇಮಿ
ಪ್ರದೇಶದಿಂದ ಬಂದು ವಿಜಯಪುರದಲ್ಲಿ ನೆಲೆಸಿದ್ದಾರೆ. ಇವರು ಸೈಯದ್‌ ಅಬ್ದುಲ್ಲಾ ಅವರ ಪುತ್ರ. ತುರೇಮಿ ಪಟ್ಟಣದ ಹಜರ್‌ ಮೌತ್‌ನವರು.

ಪ್ರವಾದಿ ಮೊಹಮ್ಮದರ (ಸ) ನಂತರದ 28ನೇ ತಲೆಮಾರಿಗೆ ಸೇರಿದವರು. ಸೈಯದ್‌ ಶಾಹ ಜಾಫರ್‌ ಸಕಾಫ್‌ ಅವರು 20, ಜಿಲ್ಲಾದಾ 1057ರಲ್ಲಿ (ಹಿ.ಶ.) ಸ್ವರ್ಗಸ್ಥರಾದರು ಎಂದು ಶಾಸನ ಸಾರುತ್ತದೆ. ಸಂತ ಸೈಯದ್‌ ಶಾಹ ಜಾಫರ್‌ ಸಕಾಫ್‌ ಅವರು ವಿಜಯಪುರದಲ್ಲಿ ನೆಲೆಸಿದ್ದಕ್ಕೆ ಸಾಕ್ಷಿಯಾಗಿ ಸೂಫಿ ಮಠ (ಖಾನಖಾ) ಒಂದು ಅಲಿಕ್‌ ರೋಜಾ ಪ್ರದೇಶದಲ್ಲಿ ಇದೆ.  ಈ ಶಾಸನದ ಶೋಧ ಕಾರ್ಯದಲ್ಲಿ ಸಾದಾತ್‌ ದರ್ಗಾದ ಸಜ್ಜಾದೆ ನಶೀನ್‌ (ಪೀಠಾಧಿಪತಿ)
ಮತ್ತು ಖಾನದಾನಿ ಮುತವಲ್ಲಿಗಳಾದ ಸೈಯದ್‌ ಆಮೀರ ಸಕಾಫ್‌ ಸಾದಾತ್‌ ಮತ್ತು ಅವರ ವಂಶಸ್ಥ ಅರೇಬಿಕ ಪಂಡಿತ ಸೈಯದ್‌ ಮುರ್ತುಜಾ ಖಾದ್ರಿ ಸಕಾಫ್‌ ಸಾದಾತ್‌ ಅವರು ನೆರವು ನೀಡಿದ್ದಾರೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.