ಕಕ್ಕಳಮೇಳಿಯಲ್ಲಿ ನಕಲಿ ವೈದ್ಯ ಪತ್ತೆ


Team Udayavani, Sep 25, 2018, 1:25 PM IST

vij-1.jpg

ಸಿಂದಗಿ: ತಾಲೂಕಿನಲ್ಲಿ ಬೇರೆ ರಾಜ್ಯಗಳಿಂದ ಆಗಮಿಸಿದ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಮಹಾರಾಷ್ಟ್ರದ ವಿವಿಧ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ವೈದ್ಯಕೀಯ ಸರ್ಟಿಫಿಕೇಟ್‌ ಪಡೆದು ನಾವು ಡಾಕ್ಟರ್‌ ಎಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದು ಸೋಮವಾರ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ತಾಲೂಕು ವೈದ್ಯಾಧಿಕಾರಿ ಡಾ| ಆರ್‌.ಎಸ್‌. ಇಂಗಳೆ ನೇತೃತ್ವದಲ್ಲಿ ಐಎಂಎ ತಾಲೂಕಾಧ್ಯಕ್ಷ ಡಾ| ಗಿರೀಶ ಕುಲಕರ್ಣಿ, ತಾಲೂಕು ವೃತ್ತಿಪರ ವೈದ್ಯರ ಸಂಘದ ಕಾರ್ಯದರ್ಶಿ ಡಾ| ಸಂಗಮೇಶ ಪಾಟೀಲ ಅವರ ನೇತೃತ್ವದಲ್ಲಿ ಸೋಮವಾರ ಖಚಿತ ಮಾಹಿತಿ ಮೇರೆಗೆ ತಾಲೂಕಿನ ಕಕ್ಕಳಮೇಳಿ ಗ್ರಾಮದಲ್ಲಿನ ಗ್ರಾಪಂ ಕಾರ್ಯಾಲಯದ ಪಕ್ಕದಲ್ಲಿರುವ ದವಾಖಾನೆ ಮೇಲೆ ನಡೆದ ದಾಳಿಯಲ್ಲಿ ಗ್ರಾಮದಲ್ಲಿ ನಕಲಿ ವೈದ್ಯನಿರುವುದು ಪತ್ತೆಯಾಗಿದೆ. 

ಸೊಲ್ಲಾಪುರ ಜಿಲ್ಲೆಯವನು ಎಂದು ಹೇಳಿಕೊಂಡಿರುವ ನಿಹಾರ ಬೈರಗಿ ಬಾತ್ರೊ ವೈದ್ಯಕೀಯ ಕೆಲಸ ಮಾಡುತ್ತಿದ್ದಾನೆ. ನಿಹಾರ ಬೈರಗಿ ಬಾತ್ರೊ ಇಂಡಿಯನ್‌ ಅಲóನೇಟಿವ್‌ ಮೇಡಿಸಿನ್‌ ಕೌನ್ಸಿಲ್‌ ಮುಂಬೈ ಈ ಸಂಸ್ಥೆ ಅಡಿಯಲ್ಲಿ ಬ್ಯಾಚುಲರ್‌ ಆಫ್‌ ಅಲóನೇಟಿವ್‌ ಸಿಸ್ಟಮ್‌ ಆಫ್‌ ಮೇಡಿಸಿನ್‌ ಸರ್ಟಿಫಿಕೇಟ್‌ ಪಡೆದಿದ್ದಾರೆ. ಈ ಸರ್ಟಿಫಿಕೇಟ್‌ನಲ್ಲಿ ಬಿಎಎಂಎಸ್‌ ಎಂದು ಮುದ್ರಣವಾಗಿದ್ದರಿಂದ ಗ್ರಾಮಸ್ಥರು ಸಹಜವಾಗಿ ವೈದ್ಯಕೀಯ ಸರ್ಟಿಫಿಕೇಟ್‌ ಪಡೆದ ವೈದ್ಯನೆಂದು ಅವನ ಹತ್ತಿರ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸರ್ಟಿಫಿಕೇಟ್‌ಗೆ ರಾಜ್ಯದಲ್ಲಿ ಮಾನ್ಯತೆಯಿಲ್ಲ.

ತಾಲೂಕಿನ ಕಕ್ಕಳಮೇಲಿ ಗ್ರಾಮದ ಗ್ರಾಪಂ ಕಾರ್ಯಾಲಯದ ಪಕ್ಕದಲ್ಲಿ ನಿಹಾರ ಬೈರಗಿ ಬಾತ್ರೊ ಅವರು ಒಂದು ಮನೆಯಲ್ಲಿ ದವಾಖಾನೆ ನಡೆಸುತ್ತಿದ್ದಾರೆ. ಇವರು ಅಲೋಪತಿಕ್‌ ಔಷಧಗಳನ್ನು ಬಳಸುತ್ತಿದ್ದರು. ಅಧಿಕಾರಿಗಳು ದವಾಖಾನೆ ಮೇಲೆ ದಾಳಿ ನಡೆಸಿದಾಗ ನಕಲಿ ವೈದ್ಯ ನಿಹಾರ ಬೈರಗಿ ಬಾತ್ರೊ ಅಲ್ಲಿ ಇರಲಿಲ್ಲ.

ದವಾಖಾನೆಯಲ್ಲಿರುವ ನಕಲಿ ಸರ್ಟಿಫಿಕೇಟ್‌ ಗಳು, ಅಲೋಪತಿಕ್‌ ಔಷಧ ಗಳು, ಚುಚ್ಚುಮದ್ದು, ಸ್ಟೇತಾಸ್ಕೋಪ್‌, ಬಿಪಿ ಅಪರೆràಸ್‌ ಮತ್ತು ನಿಹಾರ ಬೈರಗಿ ಬಾತ್ರೊ ಹೆಸರಿನಲ್ಲಿರುವ ನಕಲಿ ಸರ್ಟಿಫಿಕೇಟ್‌ ಗಳನ್ನು ವೈದ್ಯರ ತಂಡ ವಶಪಡಿಸಿಕೊಂಡರು. ನಂತರ ದವಾಖಾನೆಗೆ ಬೀಗ ಜಡಿದರು. ಈ ಕುರಿತು ಜಿಲ್ಲಾ ಆರೋಗ್ಯಾ ಧಿಕಾರಿ ಅವರಿಗೆ ಮಾಹಿತಿ ನೀಡಿದರು. 

ವೈದ್ಯರ ತಂಡ ದವಾಖಾನೆ ತಪಾಸಣೆ ಮಾಡುವ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯರು ವೈದ್ಯರೊಂದಿಗೆ ವಾಗ್ವಾದ ನಡೆಸಿದರು. ನಮ್ಮೂರಾಗ ಯಾರೂ ಡಾಕ್ಟರ್‌ ಇಲ್ಲ. ಆದರೆ ಸೊಲ್ಲಾಪುರ ಡಾಕ್ಟರ್‌ ನಮ್ಮೂರಿಗೆ ಬಂದು ಇಲ್ಲೆ ಅದಾರ. ರಾತ್ರಿ ಯಾರಿಗಾದರೂ ಆರಾಮ ತಪ್ಪಿದರ ಸೊಲ್ಲಾಪುರ ಡಾಕ್ಟರ್‌ ನೋಡ್ತಾರ. ಆದರೆ ಬಂದ್‌ ಮಾಡಿದರ ನಮ್ಮೂರಿಗೆ ಇನ್ನು 4-5 ಜನ ನಕಲಿ ವೈದ್ಯರು ಬರುತ್ತಾರ ಅವರಿಗೂ ಬಂದ್‌ ಮಾಡ್ರಿ ಎಂದು ವಾಗ್ವಾದ ನಡೆಸಿದ ಘಟನೆ ನಡೆಯಿತು.

ಕಕ್ಕಳಮೇಲಿ ಗ್ರಾಮ ದೊಡ್ಡದಾಗಿದ್ದು ಸುತ್ತಮುತ್ತಲಿನ ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಗ್ರಾಮದಲ್ಲಿ ಸರಕಾರಿ ಆಸ್ಪತ್ರೆ ಪ್ರಾರಂಭಿಸಬೇಕು ಎಂದು ಗುಂಡಯ್ಯ ಕಾಯಕಮಠ, ಶಂಕಲಿಂಗ ಡಂಗಿ, ಸಂಗಮೇಶ ಮಾಲಿಪಾಟೀಲ, ಪ್ರಭಾಕರ ಹಳೆಪ್ಪಗೋಳ, ಶ್ರೀಧರ ಮಾಲಿಪಾಟೀಲ, ಪರಶುರಾಮ ಮಾಹೂರ ಅವರು ತಾಲೂಕು ವೈದ್ಯಾಧಿಕಾರಿ ಡಾ| ಆರ್‌.ಎಸ್‌. ಇಂಗಳೆ ಅವರಿಗೆ ಒತ್ತಾಯಿಸಿದರು.

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.