ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ
Team Udayavani, Dec 9, 2018, 12:17 PM IST
ಆಲಮಟ್ಟಿ: ದೈಹಿಕ ಶಿಕ್ಷಕರು ಎಂದರೆ ಶಿಕ್ಷಣ ಇಲಾಖೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದನ್ನು ಹೋಗಲಾಡಿಸಲು ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಸಂಘಟಿತರಾಗಬೇಕು ಎಂದು ಕಲಬುರಗಿ ಆಯುಕ್ತರ ಕಚೇರಿ ದೈಹಿಕ ಶಿಕ್ಷಣ ಉಪನಿರ್ದೇಶಕ ಟಿ.ಎಚ್. ಮೇಲಿನಕೇರಿ ಹೇಳಿದರು.
ಇಲ್ಲಿಯ ಮಂಜಪ್ಪ ಹಡೇಕರ ಸ್ಮಾರಕ ಸಭಾಭವನದಲ್ಲಿ ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ, ಎಂಎಚ್ಎಂಪ್ರೌಢಶಾಲೆ ಆಲಮಟ್ಟಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ-ಪ್ರೌಢಶಾಕೆ
ದೈಹಿಕ ಶಿಕ್ಷಕರ ವಿಷಯ ವೇದಿಕೆ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ರಂಗದಲ್ಲಿ ಉಳಿದ ವಿಷಯಗಳಂತೆ ದೈಹಿಕ ಶಿಕ್ಷಣವೂ ಅತಿ ಮುಖ್ಯವಾಗಿದೆ. ಇದರಿಂದ ಮಕ್ಕಳು ಕೊಠಡಿಯಲ್ಲಿ ಆರೋಗ್ಯಭರಿತವಾಗಿ ಉತ್ಸಾಹಿಗಳಾಗಿ ಉಳಿದ ವಿಷಯಗಳ ಕುರಿತು ಶಿಕ್ಷಕರು ಬೋಧನೆ ಮಾಡಿರುವುದನ್ನು ತದೇಕಚಿತ್ತದಿಂದ ಆಲಿಸಲು ದೈಹಿಕ ಶಿಕ್ಷಣವೂ ಅತಿ ಮುಖ್ಯವಾಗಿದೆ. ಆದರೂ ಇಲಾಖೆಯಲ್ಲಿ ಉಳಿದ ವಿಷಯ ಶಿಕ್ಷಕರಿಗೆ ಸಿಗುವ ಅಧಿಕಾರ, ಗೌರವ ಸಿಗುವಂತಾಗಲು ದೈಹಿಕ ಶಿಕ್ಷಕರಲ್ಲಿ ಮುಂದಾಳತ್ವ-ನಾಯಕತ್ವದ ಗುಣ ಮೂಡಿಬರಬೇಕು. ಅಂದಾಗ ದೈಹಿಕ ಶಿಕ್ಷಣ ಬಲಿಷ್ಠವಾಗಿ ಬೆಳೆದು ಬರಲು ಸಾಧ್ಯ ಎಂದು ಹೇಳಿದರು.
ದೈಹಿಕ ಶಿಕ್ಷಣ ಎನ್ನುವುದು ಒಂದು ಯಂತ್ರವಿದ್ದ ಹಾಗೆ. ಬಟನ್ ಅದುಮಿದಾಗ ತನ್ನಿಂದ ತಾನೆ ಕೆಲಸ ಆರಂಭಗೊಳ್ಳುವಂತೆ ಶಿಕ್ಷಕರು ಕ್ರಿಯಾಶೀಲರಾಗಿರಬೇಕು. ವೃತ್ತಿಯಲ್ಲಿ ಆಸಕ್ತಿ, ಶ್ರದ್ಧೆ-ಸತತ ಹೊಸತನದ ಸ್ವಪ್ರಯತ್ನದಿಂದ ಏನಾದರು ಸಾಧಿಸುವ ಛಲ ಇರಿಸಿಕೊಂಡು ಶಿಸ್ತು-ಬದ್ಧತೆ-ಉತ್ತಮ ಸಂಸ್ಕಾರಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಹುರುಪು ಹುಮ್ಮಸ್ಸು-ಲವಲವಿಕೆಯಿಂದ ದೈಹಿಕ ಕಸರತ್ತಿನೊಂದಿಗೆ ಮಕ್ಕಳಲ್ಲಿ ಕ್ರೀಡಾಸಕ್ತಿ-ಬೆಳೆಸಲು ದೈಹಿಕ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.
ಮುದ್ದೇಬಿಹಾಳ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ ಮಾತನಾಡಿದರು. ಹಿರಿಯ ಶಿಕ್ಷಕ ಎಸ್.ಐ. ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಬಸವನ ಬಾಗೇವಾಡಿ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ ದೈಹಿಕ ಶಿಕ್ಷಕರ ಸಂಘದ ವತಿಯಿಂದ ಟಿ.ಎಚ್. ಮೇಲಿನಕೇರಿ ಅವರನ್ನು ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಣಾಧಿಕಾರಿಗಳಾದ ಎಂ.ಬಿ. ಹೆಬ್ಟಾಳ, ಎ.ಎಂ. ಬಿರಾದಾರ, ಎ.ಬಿ. ಕೌಲಗಿ, ಎಸ್.ಜಿ. ಪಾಟೀಲ, ಬಿ.ಎಂ. ಪಾಟೀಲ, ಎಂ.ಕೆ. ಚೌಧರಿ, ಮಂದೇವಾಲೆ, ಜುಳಜಳಿ, ಮಮದಾಪುರ, ವಿ.ಎಂ. ಪಟ್ಟಣಶೆಟ್ಟಿ ಇದ್ದರು. ಬಿ.ಎಂ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ಗಲಗಲಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ