ಗಡಿನಾಡಿನಲ್ಲೂ ಅಂಗನವಾಡಿ ಕೇಂದ್ರ ತೆರೆಯಿರಿ
Team Udayavani, Jan 18, 2019, 11:40 AM IST
ದೇವರಹಿಪ್ಪರಗಿ: ತ್ರಿಶಂಕು ಸ್ಥಿತಿಯಲ್ಲಿರುವ ಗಡಿನಾಡಿನ ಮಕ್ಕಳ ಶಿಕ್ಷಣದ ಬುನಾದಿಗೆ ಅಂಗನವಾಡಿಗಳ ಅವಶ್ಯಕತೆಯಿದ್ದು, ರಾಜ್ಯ ಸರಕಾರ ಈ ಕುರಿತು ಕಾಳಜಿ ವಹಿಸಬೇಕೆಂದು ಅಕ್ಕಲಕೋಟೆಯ ಮಂಗರೂಳೆ ಪ್ರೌಢಶಾಲೆ ವಿದ್ಯಾರ್ಥಿನಿ ವರ್ಷಾರಾಣಿ ಪ್ರಚಂಡೆ ಆಗ್ರಹಿಸಿದಳು.
ಪಟ್ಟಣದ ಸಿದ್ಧೇಶ್ವರ ಶಾಲೆಯಲ್ಲಿ ನಡೆದ 9ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ‘ಹೊಸ ಚಿಗುರು-ಹಳೇ ಬೇರು’ ಗೋಷ್ಠಿಯಲ್ಲಿ ‘ಗಡಿನಾಡಿನಲ್ಲಿ ಕನ್ನಡ ಮಕ್ಕಳ ಸಮಸ್ಯೆಗಳು’ ಕುರಿತು ಮಾತನಾಡಿದಳು. ಗಡಿನಾಡಿನ ಮಕ್ಕಳಾದ ನಾವು ಅನಿವಾರ್ಯವಾಗಿ ಮರಾಠಿ ಭಾಷೆಯಲ್ಲಿ ಅಂಗನವಾಡಿ ಕಲಿತು ನಂತರ ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಯುವಂತಾಯಿತು. ಇದರಿಂದ ಕನ್ನಡ ಶಬ್ದಗಳ ಬಳಕೆಯಲ್ಲಿ ಸ್ವಲ್ಪ ಅಡಚಣೆಯಾಗಿ ಭಾಷಾ ದ್ವಂದ್ವತೆಗೆ ಒಳಗಾಗುವಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಗಡಿನಾಡಿನಲ್ಲಿಯೂ ಅಂಗನವಾಡಿಗಳನ್ನು ಆರಂಭಿಸಲಿ ಜೊತೆಗೆ ಗಡಿನಾಡಿನ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಮರಾಠಿ ಭಾಷಿಕರು ನಮ್ಮ ನೆರೆ, ಕನ್ನಡಿಗರಿಗೆ ನಾವು ಬರೆ ಕಷ್ಟದ ಹೊರೆ. ಆದ್ದರಿಂದ ಕರ್ನಾಟಕ ಸರಕಾರ ಎಳೆಯಲಿ ನಮ್ಮ ಸಮಸ್ಯೆಗಳಿಗೆ ಶಾಶ್ವತ ಬರೆ ಎಂದು ಅನಿಸಿಕೆ ವ್ಯಕ್ತಪಡಿಸಿದಳು.
ವಿಜಯಪುರ ರಾಮಕೃಷ್ಣ ವಸತಿ ವಿದ್ಯಾಲಯದ ಭೂಮಿಕಾ ಪೂಜಾರಿ ‘ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು’, ಅಕ್ಕಲಕೋಟೆ ಮಂಗರೂಳೆ ಪ್ರೌಢಶಾಲೆಯ ಸೃಷ್ಟಿ ಚಂಡಕಿ ‘ವಿವಿಧತೆಯಲ್ಲಿ ಏಕತೆ’, ಸ್ಥಳೀಯ ಸಿದ್ಧೇಶ್ವರ ಶಾಲೆಯ ಸಂಗಮ್ಮ ಬಿರಾದಾರ ‘ನಾನೇನಾಗ ಬಯಸುವೆ’, ಗೌರಿ ಮಸಬಿನಾಳ ‘ಮನೆಯೆ ಮೊದಲ ಪಾಠಶಾಲೆ’, ಮೇಘಾ ಹುಲ್ಲೂರ ‘ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ’, ನಮ್ಮ ಮಕ್ಕಳ ಧಾಮದ ಪರಶುರಾಮ ಬಾಗಡಿ ‘ಮಕ್ಕಳ ಹಕ್ಕುಗಳು’ ಕುರಿತಾಗಿ ಉಪನ್ಯಾಸ ನೀಡಿದರು.
‘ಹಳೇಬೇರು’ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ‘ಮಕ್ಕಳ ಮೇಲಿನ ಒತ್ತಡಗಳು’ ಹಾಗೂ ಮಕ್ಕಳ ಸಾಹಿತಿ ಕೆ.ಸುನಂದಾ ‘ಮಕ್ಕಳಿಗೇಕೆ ಬೇಕು ಸಾಹಿತ್ಯ’ ಹಾಗೂ ಸಾಹಿತಿ ಗುರುಸ್ವಾಮಿ ಗಣಾಚಾರಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸುನೀಲ ಸಾವಳಗಿ ನಿರೂಪಿಸಿದರು. ಕವಿತಾ ಸಣ್ಣಕ್ಕಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ