ಉನ್ನತ ಧ್ಯೇಯದ ಗುರುಗಳಿಂದ ದೇಶದಲ್ಲಿ ಬದಲಾವಣೆ ಸಾಧ್ಯ


Team Udayavani, Feb 17, 2019, 9:53 AM IST

vij-2.jpg

ಸೊಲ್ಲಾಪುರ: ಗುರು ದೇವರಿಗಿಂತ ಶ್ರೇಷ್ಠ. ಈ ಸೃಷ್ಠಿಯ ನಿರ್ಮಿತಿ ದೇವರು ಮಾಡಿರಬಹುದು, ಆದರೆ ದೇವರನ್ನು ಪರಿಕಲ್ಪಿಸಿದವ ಗುರು. ಆದ ಕಾರಣ ಗುರು ಸದಾ ಸರ್ವದಾ ಶ್ರೇಷ್ಠನೆ ಇರುತ್ತಾನೆ. ಶ್ರೇಷ್ಠ, ಉನ್ನತ ಧ್ಯೇಯದ ಗುರುಗಳಿಂದ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯವೆಂದು ಚಂದ್ರಶೇಖರ ಕಟ್ಟಿಮನಿ ಹೇಳಿದರು.

ಅಕ್ಕಲಕೋಟ ತಾಲೂಕಿನ ದುಧನಿ ನಗರದ ಭೀಮನಗರ ಕನ್ನಡ ಶಾಲೆ ಬೆಳ್ಳಿ ಹಬ್ಬ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.
 
ಚಂದ್ರಶೇಖರ ಕಟ್ಟಿಮನಿ ಮಾತನಾಡಿ, ಸರಕಾರಿ ಮಾಧ್ಯಮದ ಶಾಲೆಗಳು ಮಾತ್ರ ಸಮಾಜದಲ್ಲಿ ಸಮಾನತೆ ತರಬಹುದು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಾಕಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡ ಉಳಿಸಿಕೊಂಡು ಬಂದಿರುವುದು ಬಹಳ ಸಂತೋಷ ತಂದಿದೆ. ಗಡಿಭಾಗದ ಶಾಲೆ ಪ್ರಗತಿ ಹಾಗೂ ಕನ್ನಡ ಅಭಿಮಾನವನ್ನು ಕೊಂಡಾಡಿದರು. 

ದುಧನಿ ಭೀಮನಗರದಲ್ಲಿ ನಡೆದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆ ಬೆಳ್ಳಿ ಹಬ್ಬ ಹಾಗೂ ಸ್ನೇಹ ಸಮ್ಮೇಳನ ವಿಜೃಂಭಣೆಯಿಂದ ಜರುಗಿದ್ದು ಮಕ್ಕಳ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ ಮನ ಸೆಳೆಯಿತು.

ಇದೇ ಮೊದಲ ಬಾರಿಗೆ ದುಧನಿ ಭೀಮನಗರ ಸರಕಾರಿ ಕನ್ನಡ ಶಾಲೆಯಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮ ಆಚರಿಸಲಾಗಿದೆ. ಭವ್ಯ ವೇದಿಕೆಯಲ್ಲಿ ಜರುಗಿದ ಮಕ್ಕಳ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ ಮನ ಸೆಳೆಯಿತು. ಮಕ್ಕಳ ಅಭಿನಯ, ನೃತ್ಯ ಹಾಗೂ ಗಾಯನ ಕಲೆ ನೋಡುಗರಿಗೆ ವಿಶೇಷ ಔತಣವನ್ನೆ ಕೊಟ್ಟಿತು. ಇದೆ ವೇಳೆ ದಾನಿಗಳು ಈ ಸರಕಾರಿ ಶಾಲೆಗೆ ವಿವಿಧ ಇ-ಲರ್ನಿಂಗ್‌ ಸಾಹಿತ್ಯಗಳನ್ನು ಕೊಟ್ಟು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. 

ಪ್ರಗತಪರ ರೈತ ಹನುಮಂತ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು. ಬಸವ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿನಾಥ ಯಗದಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಭಾಂಜಿ ಜ್ಯೋತಿ ಬೆಳಗಿಸಿದರೆ ಚನ್ನು ಭಾಂಜಿ ವೇದಿಕೆಗೆ ಪೂಜೆ ಸಲ್ಲಿಸಿದರು.

ಪೊಲೀಸ್‌ ಉಪ ನೀರಿಕ್ಷಕ ಬಾಳಾಸಾಹೇಬ ನರವಟೆ, ಉತ್ತಮರಾವ್‌ ಗಾಯಕವಾಡ, ಬಸವರಾಜ ಹೌದೆ, ಲಿಂಗರಾಜ ಹೌದೆಯವರು ಪ್ರತಿಮೆ ಪೂಜೆ ನೆರವೇರಿಸಿದರು. ಗುರುಶಾಂತ ಮಗಿ ಬೆಳ್ಳಿ ಹಬ್ಬಕ್ಕೆ ಚಾಲನೆ ನೀಡಿದರು.
 
ರಾಮಾ ಗದ್ಧಿ, ವಾಗೇಶ ಪಾಟೀಲ, ಬಸವರಾಜ ಕೌಲಗಿ, ಜಹಾಂಗೀರ ಖೆ„ರಾಟ, ಚಾಂದಸಾಬ ನಾಕೇದಾರ, ಪ್ರಕಾಶ ಗಾಯಕವಾಡ, ಇರಫಾನ ಡಫೆದಾರ, ಮಸ್ತಾನ ಮಕಾನದಾರ, ವಿಜಯಕುಮಾರ ಲೊಡ್ಡೆನವರು, ಗುರುಶಾಂತ ಗಾಯಕವಾಡ, ಚಂದ್ರಕಾಂತ ದೊಡಮನಿ, ಪ್ರಕಾಶ ಜಮಾದಾರ, ನಾಗಪ್ಪಾ ಲೊಡ್ಡೆನವರು, ಡಾ| ಸುಭಾಷ್‌ ಕೋಳೆಕರ, ಎಸ್‌.ಕೆ. ಬಿರಾದಾರ, ರಾಜಶೇಖರ ಉಮರಾಣಿಕರ, ಅಶೋಕ ಕಬಾಡೆ, ಗುರುಶಾಂತ ಪರಮಶೆಟ್ಟಿ, ರಾವೂಫ್‌ ನಿಂಬಾಳ, ಧರ್ಮಾ ಸಿಂಗೆ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಯಶಸ್ವಿಗಾಗಿ ಶಾಲೆ ಮುಖ್ಯಗುರು ಗೌತಮ ಕಾಂಬಳೆ, ಮಲಿಕಜಾನ್‌ ಶೇಖ್‌, ಶಾಂತಮಲ್ಲಯ್ಯ ಸ್ವಾಮಿ, ಶರಣಪ್ಪ ಮೆತ್ರೆ, ಮಲ್ಲಪ್ಪ ಕಾಂಬಳೆ, ಸಾವಿತ್ರಿ ಡೊಂಗರಾಜೆ, ಕಲಾವತಿ ಅರಸಗೊಂಡ, ವಿಜಯ ಗಾಯಕವಾಡ ಹಾಗೂ ವಿಶ್ವನಾಥ ರೇವೂರ ಜೊತೆಗೆ ಶಾಲೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಎಲ್ಲ ಸದಸ್ಯರು, ವಿವಿಧ ಸಂಘಟನೆಗಳು ಯುವಕರು ಶ್ರಮಿಸಿದರು. ಮುಖ್ಯಗುರು ಗೌತಮ ಕಾಂಬಳೆ ಸ್ವಾಗತಿಸಿದರು. ಶಾಂತಮಲ್ಲಯ್ಯ ಸ್ವಾಮಿ ನಿರೂಪಿಸಿದರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.