ಮೊಸಳೆ ಸೆರೆ ಹಿಡಿದ ಇಟಗಿ ಗ್ರಾಮಸ್ಥರು
Team Udayavani, Mar 10, 2019, 9:58 AM IST
ನಿಡಗುಂದಿ: ಹಳ್ಳದಲ್ಲಿದ್ದ ಬೃಹತ್ ಮೊಸಳೆಯೊಂದನ್ನು ಗ್ರಾಮಸ್ಥರು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಸಮೀಪದ ಇಟಗಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಗ್ರಾಮದ ಹರಿಂದ್ರಾಳ ಕುಲಕರ್ಣಿ ಎಂಬುವರ ಜಮೀನಿನಲ್ಲಿರುವ ಮನೆ ಮುಂದೆ ರಾತ್ರಿ ಕೂಲಿ ಕಾರ್ಮಿಕರು ಮಲಗಿದ್ದರು. ರಾತ್ರಿ 10ರ ಸುಮಾರಿಗೆ ಏಕಾಏಕಿ ನಾಯಿಗಳು ಬೊಗಳುವುದನ್ನು ಕಂಡು ಎಚ್ಚೆತ್ತುಕೊಂಡ ಕಾರ್ಮಿಕರು
ನೋಡಿದಾಗ ಮನೆ ಹತ್ತಿರವೇ ಬೃಹತ್ ಮೊಸಳೆ ಬಂದಿರುವುದನ್ನು ಕಂಡು ಭಯಭೀತರಾಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ಗ್ರಾಮಸ್ಥರು ಸೇರುತ್ತಿದ್ದಂತೆ ಮೊಸಳೆ ಜಮೀನಿಗೆ ಹೊಂದಿಕೊಂಡಿರುವ ಹಳ್ಳದ ಗುಂಡಿಗೆ ಹೋಗಿತ್ತು. ನಂತರ ಗ್ರಾಮಸ್ಥ ರೆಲ್ಲ ಸೇರಿ ಹಗ್ಗ ಹಾಗೂ ಜೆಸಿಬಿ ಸಹಾಯದಿಂದ ಸುಮಾರು ಒಂದೆರಡು ಗಂಟೆಗಳ ಕಾರ್ಯಾಚರಣೆ ಬಳಿಕ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆ ಹಿಡಿದ ಮೊಸಳೆಯನ್ನು ಟ್ರಾಕ್ಟರ್ ನಲ್ಲಿ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಿದರು. ಗ್ರಾಮಕ್ಕೆ ಮೊಸಳೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲ ಕುತೂಹಲದಿಂದ ತಂಡೋತಂಡವಾಗಿ ಬಂದು ಮೊಸಳೆ ಹಿಡಿಯುವ ಕಾರ್ಯಾಚರಣೆ ವೀಕ್ಷಿಸಿದರು.
ತಪ್ಪಿದ ಅನಾಹುತ: ಕಬ್ಬು ಕಟಾವು ಬಂದಿದ್ದ ಕೂಲಿ ಕಾರ್ಮಿಕರು ಎಚ್ಚೆತ್ತುಕೊಂಡು ಈ ವಿಷಯ ತಿಳಿಸದಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆ ಇತ್ತು. ಮೊಸಳೆ ಸುಮಾರು 12 ಅಡಿಗೂ ಹೆಚ್ಚು ಉದ್ದವಿತ್ತು ಎಂದು ಗ್ರಾಮದ ಯುವಕ ಭೀಮಣ್ಣ ಹೆಬ್ಟಾಳ ಪತ್ರಿಕೆಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್