ಕಳ್ಳತನಕ್ಕೆ ಹೋಗಿ ಹೊಟ್ಟೆ ಬಿರಿಯುವಂತೆ ತಿಂದರು!
Team Udayavani, Sep 1, 2018, 5:14 AM IST
ದೆಹಲಿಯ ರಾಜು ಸಿಂಗ್ ಹಾಗೂ ಬಾಬಿ ಸಿಂಗ್, ಸರಿತಾ ವಿಹಾರದಲ್ಲಿರುವ ರೆಸ್ಟೋರೆಂಟ್ ನಿತ್ಯ ಗ್ರಾಹಕರು. ಅಲ್ಲಿನ ಬಿರಿಯಾನಿ ಅವರ ನಾಲಿಗೆಗೆ ರುಚಿ ಹತ್ತಿಸಿತ್ತು. ಇಷ್ಟೆಲ್ಲ ಬಿರಿಯಾನಿ ಮಾರುವವ ಎಷ್ಟು ದುಡ್ಡು ಮಾಡಿರಬಹುದು ಎಂದು ಯೋಚಿಸಿದವರೇ ಒಂದು ರಾತ್ರಿ ರೆಸ್ಟೋರೆಂಟ್ ಬಾಗಿಲು ಹಾಕಿದ ಮೇಲೆ ಮುಖವಾಡ ಧರಿಸಿ ಕಳ್ಳತನಕ್ಕೆ ನುಗ್ಗಿದರು. ಕ್ಯಾಶ್ ಕೌಂಟರ್ನಲ್ಲಿ ಒಂದೇ ಒಂದು ರೂಪಾಯಿಯೂ ಇರಲಿಲ್ಲ. ಈ ಸಿಟ್ಟನ್ನೆಲ್ಲ ಬಿರಿಯಾನಿ ಮೇಲೆ ತೀರಿಸಿದ ಇಬ್ಬರೂ, ಹೊಟ್ಟೆ ಬಿರಿಯುವಂತೆ ತಿಂದರು. ಇನ್ನುಳಿದಿದ್ದನ್ನೆಲ್ಲ ಚೆಲ್ಲಾಡಿದರು. ಹೊಟ್ಟೆ ತಂಪಾಯಿತು. ಜೇಬು ತಂಪು ಮಾಡಿಕೊಳ್ಳೋಣ ಎಂದು ಕೊನೆಗೆ ಕ್ಯಾಶ್ ಕೌಂಟರಿನಲ್ಲಿದ್ದ ಲ್ಯಾಪ್ಟಾಪನ್ನೇ ಎತ್ತಿಕೊಂಡು ಹೊರಟರು.
ಬಿರಿಯಾನಿ ತಿಂದ ರಭಸಕ್ಕೆ ಮರುದಿನ ಮಧ್ಯಾಹ್ನ ಎಚ್ಚರಾದಾಗ ಲ್ಯಾಪ್ಟಾಪ್ ಮಾರಿ ಕಾಸು ಮಾಡಿಕೊಳ್ಳೋಣ ಎಂದು ಹೊರಟರೆ ಈ ಲ್ಯಾಪ್ಟಾಪ್ನ ಜಾಡು ಹಿಡಿದು ಬಂದ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ